ಮೈಸೂರು/ಬೆಳಗಾವಿ: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ನಾಡಿನ ಹಲವು ಕಲಾವಿದರು ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ನಮನ ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಲಾವಿದ ಶ್ರೀಶೈಲ್ ಗಸ್ತಿ ಸಾರ್ವಜನಿಕವಾಗಿ ಬಾಯಲ್ಲಿ ಕುಂಚ ಹಿಡಿದು ಸಿದ್ದಗಂಗಾ ಶ್ರೀಗಳ ಭಾವಚಿತ್ರ ರಚನೆ ಮಾಡಿ ಶಿವೈಕ್ಯರಾದ, ಶಿವಕುಮಾರ ಶ್ರೀಗಳಿಗೆ ನಮನ ಸಲ್ಲಿಸಿದರು. ಇದೇ ವೇಳೆ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಸಹಿ ಸಂಗ್ರಹ ಅಭಿಯಾನ ನಡೆಸಿದರು. ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ ಪ್ರಶಸ್ತಿಯ ಗೌರವ ಹೆಚ್ಚಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂತು.
ಇತ್ತ ಮೈಸೂರಿನಲ್ಲೂ ಹಲವು ಕಲಾವಿದರು ನಗರದ ಕೆ.ಆರ್ ವೃತ್ತದಲ್ಲಿ ಶ್ರೀಗಳ ಚಿತ್ರ ಬರೆದು ಗೌರವ ನಮನ ಸಲ್ಲಿಸಿದರು. ಮೈಸೂರು ಕುಂಚ ಕಲಾವಿದರ ಸಂಘದಿಂದ ಶ್ರೀಗಳಿಗೆ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಶ್ರೀಗಳ ಚಿತ್ರಗಳ ಮೇಲೆ ದಾಸೋಹ ರತ್ನ ತಿಲಕ, ವಿದ್ಯಾ ರತ್ನ ತಿಲಕ ಎಂದು ಬರೆದು ಕಲಾವಿದರು ಗೌರವ ಸಲ್ಲಿಸಿದರು.
ಉಜಿರೆ ಕಲಾವಿದ ವಿಲಾಸ್ ನಾಯ್ಕ್ ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ವಿಲಾಸ್ ನಾಯ್ಕ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಭಕ್ತಿಪೂರ್ವಕ ಶ್ರದ್ಧಾಂಜಲಿ ???????? pic.twitter.com/dsGCrzNqnG
— Vilas Nayak (@VilasNayak) January 22, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv