ಬಳ್ಳಾರಿ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಡಿಗೆ ಗಣಿನಾಡಿನ ಪೇಕ್ಷಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ವತಿಯಿಂದ ಗಡಿನಾಡ ಕನ್ನಡಿಗರ ಸಮಾವೇಶದ ಸಮಾರೋಪ ಸಮಾರಂಭವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರ್ಜುನ ಜನ್ಯ ಸೇರಿದಂತೆ ಹಲವಾರು ಕಲಾವಿದರು ಹಾಡು ಹಾಡಿ ಪೇಕ್ಷಕರನ್ನು ರಂಜಿಸಿದ್ರು.
ಅರ್ಜುನ್ ಜನ್ಯ ಜೊತೆ ಬಾಲ ಗಾಯಕಿ ಆದ್ಯಾ ಸಹ ಹಾಡು ಹಾಡಿ ಪೇಕ್ಷಕರನ್ನು ರಂಜಿಸಿದಳು. ಹಾಸ್ಯ ಕಲಾವಿದರಾದ ಗೋವಿಂದಗೌಡ ಹಾಗೂ ತಂಡದ ಸದಸ್ಯರು ಅಲ್ಲಾಡ್ಸು ಅಲ್ಲಾಡ್ಸು ಹಾಡಿಗೆ ವಿಭಿನ್ನವಾಗಿ ಹಾಸ್ಯ ಮಾಡಿ ಎಲ್ಲರನ್ನೂ ನಕ್ಕು ನಲಿಸಿದ್ರು.
ಅರ್ಜುನ ಜನ್ಯ ಅಧ್ಯಕ್ಷ ಅಧ್ಯಕ್ಷ ಹಾಡು ಸೇರಿದಂತೆ, ಹೆಬ್ಬುಲಿ, ಭಜರಂಗಿ ಹಲವಾರು ಸಿನಿಮಾಗಳ ಹಾಡು ಹಾಡಿ ಸಾವಿರಾರು ಪೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು.