-ಕಿರುತೆರೆ ಕಲಾವಿದರಿಂದ ಅಪ್ಪು ಅಮರ ಕಾರ್ಯಕ್ರಮ
ಬೆಂಗಳೂರು: ದಿ. ನಟ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಕಿರುತೆರೆ ಕಲಾವಿದರು, ತಂತ್ರಜ್ಞರು ಕಾರ್ಯಕ್ರಮವೊಂದನ್ನು ಆಯೋಜಸಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಅಪ್ಪು ಅಮರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನ್ಯಾಷನಲ್ ಕಾಲೇಜ್ನ ಹೆಚ್.ಎನ್ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಕಿರುತೆರೆಯ ಕಲಾವಿದರು, ತಂತ್ರಜ್ಞಾನರು ಆಯೋಜಿಸಿದ್ದಾರೆ. ಬಾಲ ನಟನಾಗಿ ನಟಿಸಿದ ಪುನೀತ್ ರಾಜ್ಕುಮಾರ್ ಚಿತ್ರಗಳನ್ನ ದೃಶ್ಯಗಳನ್ನ ವೇದಿಕೆಯಲ್ಲಿ ಮರುಸೃಷ್ಟಿದ ಕಿರುತರೆ ಕಲಾವಿದರ ತಂಡ, ಬೆಟ್ಟದ ಹೂ, ಎರಡು ನಕ್ಷತ್ರ, ಭಕ್ತ ಪ್ರಹ್ಲಾದ ಸೇರಿದಂತೆ ವೇದಿಕೆ ಮೇಲೆ ಹಲವು ಚಿತ್ರಗಳ ದೃಶ್ಯಗಳಿಗೆ ನಟಿಸುವ ಮೂಲಕ ಅಪ್ಪುಗೆ ವಿಶೇಷ ನಮನ ಸಲ್ಲಿಸಲಾಗಿದೆ.
ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ದೊಡ್ಮನೆ ಸದಸ್ಯರು ಭಾಗಿ ಆಗಿದ್ದಾರೆ. ಲಕ್ಷ್ಮಿ, ಗೋವಿಂದ್ ರಾಜ್ ಕಿರುತೆರೆಯ ಬಹಳಷ್ಟು ಕಲಾವಿದರು, ತಂತ್ರಜ್ಞಾನರು, ಹಿರಿಯ ನಟಿ ಉಮಾಶ್ರೀ, ಆರ್. ಅಶೋಕ್ ಭಾಗಿ ಆಗಿದ್ದಾರೆ.