ದರ್ಶನ್, ಸುದೀಪ್ ಜಗಳದಲ್ಲಿ ಅಂಬರೀಶ್ ಮಧ್ಯಸ್ಥಿಕೆ? ಸುಮಲತಾ ಹೀಗೆ ಹೇಳಿದ್ರು

Public TV
1 Min Read

ಬೆಂಗಳೂರು: ದರ್ಶನ್ ಮತ್ತು ಸುದೀಪ್ ನಡುವಿನ ಟ್ವಿಟರ್ ವಾರ್ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿರುವುದು ಸುಳ್ಳಲ್ಲ. ಆದ್ರೆ ಇವರಿಬ್ಬರ ಸಮಸ್ಯೆ ಬಗೆಹರಿಸಲು ಹಿರಿಯ ನಟ ಅಂಬರೀಷ್ ಮಧ್ಯಸ್ಥಿಕೆ ವಹಿಸಬೇಕು ಎಂದು ಅಭಿಮಾನಿಗಳು ಆಶಿಸಿದ್ದಾರೆ.

ಈ ಬಗ್ಗೆ ಸುಮಲತಾ ಅಂಬರೀಶ್ ಅವರಿಗೆ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, ದರ್ಶನ್ ಮತ್ತು ಸುದೀಪ್ ನಡುವಿನ ಸಮಸ್ಯೆಯನ್ನು ಬಗೆಹರಿಸುವಂತೆ ಅಂಬರೀಶ್ ಅವರಿಗೆ ಹೇಳಿ ಎಂದು ಕೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರೋ ಸುಮಲತಾ, ದರ್ಶನ್ ಮತ್ತು ಸುದೀಪ್ ಇಬ್ಬರೂ ಪ್ರಬುದ್ಧರು. ಅವರೇ ನಿರ್ಧಾರ ಮಾಡಿದ್ದಾರೆ. ತಪ್ಪೋ ಸರಿಯೋ ಅದನ್ನು ಗೌರವಿಸಿ ಮುಂದೆ ಹೋಗೋಣ ಅಂತ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಮೂಲಕ ದರ್ಶನ್ ಸುದೀಪ್ ವಿಷಯದಲ್ಲಿ ಅಂಬರೀಶ್ ರಾಜಿಸಂಧಾನ ಇರಲ್ಲ ಅನ್ನೋದನ್ನ ಪರೋಕ್ಷವಾಗಿ ಹೇಳಿದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *