ನಾವು ರ‍್ಯಾಲಿ ಮಾಡಲ್ಲ, ಸಮಾವೇಶ ಮಾಡಲ್ಲ, ಕಾವೇರಿಗಾಗಿ ನಡೆಯುತ್ತೇವೆ: ಡಿಕೆಶಿ

D K Shivakumar

-ಇವರಿಗೆ ಬೇರೆ ರೂಲ್ಸ್, ನಮಗೆ ಬೇರೆ ರೂಲ್ಸ್

ಬೆಂಗಳೂರು: ಕೋವಿಡ್ ಕರ್ಫ್ಯೂ ಅಲ್ಲಾ, ಲಾಕ್‍ಡೌನ್ ಅಲ್ಲಾ, ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‍ಡೌನ್ ಇದು. ಯಾವ ಟಫ್ ರೂಲ್ಸ್ ಅಲ್ಲಾ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮದವರೊಂದಗೆ ಮಾತನಾಡಿದ ಅವರು, ರಾಜಕೀಯ ಟಫ್ ರೂಲ್ಸ್ ಇದಾಗಿದೆ. ನಾವು ರ‍್ಯಾಲಿ ಮಾಡಲ್ಲ ಸಮಾವೇಶ ಮಾಡಲ್ಲ. ನೀರಿಗಾಗಿ ನಾವು ನಡೆಯುತ್ತೇವೆ. ಸಾವಿರಾರು ಕೋವಿಡ್ ಸೋಂಕಿತರು ಇದ್ದಾರೆ ಎಂದು ಹೇಳುತ್ತಾರೆ, ಅವರು ಯಾರು? ಎಲ್ಲೆಲ್ಲಿ ಇದ್ದಾರೆ? ಅಂದ್ರೆ ನಾವು ಮಾತನಾಡುತ್ತೇವೆ. ತಾಯಿ ಕಾವೇರಿ ನೀರು ಕುಡಿಯಬೇಕು ಅಂತ ನಡೆಯುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ:  ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗಲ್ಲ, ಗಂಟಲಲ್ಲಿ ಮಾತ್ರ ಇರುತ್ತೆ: ಸುಧಾಕರ್

D K Shivakumar 1

ಸಿಎಲ್‍ಪಿ ನಾಯಕರ ಜೊತೆ ಮಾತಾಡುತ್ತೇನೆ. ನಾನು, ಸಿದ್ದರಾಮಯ್ಯ ಕೆಲವೂ ಇನ್‍ಚಾರ್ಜ್‍ಗಳ ಜೊತೆ ಮಾತುಕತೆ ನಡೆಸುತ್ತೇವೆ. ಮೊದಲು ನನ್ನ ಬ್ರದರ್ ಸುಧಾಕರ್ ಸ್ವಿಮ್ಮಿಂಗ್ ಪುಲ್‍ಲ್ಲಿ ಸ್ವಿಮ್ ಮಾಡಿದ್ನಲ್ಲ ಅವರ ಮೇಲೆ ಕೇಸು ಹಾಕಲಿ. . ಶ್ರೀರಾಮುಲು ಮೇಲೆ ಕೇಸು ಹಾಕಿ, ಮದುವೆಗೆ ಹೋದ ಯಡಿಯೂರಪ್ಪನ ಮೇಲೆ ಮೊದಲು ಕೇಸು ಹಾಕಿ. ಜನಾಶಿರ್ವಾದಯಾತ್ರೆ ಮಾಡಿದ್ರಲ್ಲ ಅವರ ಮೇಲೆ ಹಾಕಿ. (ವಾಕ್ ಫಾರ್ ವಾಟರ್) ನೀರಿಗಾಗಿ ನಡಿಗೆ, ಪಾದಯಾತ್ರೆ ಅಲ್ಲಾ ನೀರಿಗಾಗಿ ನಡೆಯುತ್ತೇವೆ ಎಂದು ಆಡಳಿತ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!

ಅಂತ ಯಾಕೆ ಎನ್ನುತ್ತೀರಾ ನೀರಿಗಾಗಿ ನಡಿಗೆ ಎಂದು ಹೇಳಿ. ಡ್ರೈವರ್, ಬೀದಿ ವ್ಯಾಪಾರ ಮಾಡುವವರ ಕೊಲೆ ಮಾಡುತ್ತಿದ್ದಾರೆ. ನನ್ನ ಮೇಲೆ ಸಿಎಲ್‍ಪಿ ನಾಯಕರ ಮೇಲೆ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕೇಸ್ ಹಾಕಿದ್ದಾರೆ. ಇವರೇನು ಮನುಷ್ಯರಾ? ಇವರಿಗೆ ಬೇರೆ ರೂಲ್ಸ್, ನಮಗೆ ಬೇರೆ ರೂಲ್ಸ್, ಮೋದಿ ಅವರು ರ‍್ಯಾಲಿ ಮಾಡಿದ್ರು? ಇಡೀ ರಾಜ್ಯದಲ್ಲಿ ಯಾರು ಓಡಾಡಲ್ವ? ಇವರ ಕಡೆಯವರು ಓಡಾಡಲ್ವ? ನಾವು ನೀರಿಗೋಸ್ಕರ ನೆಡೆಯುತ್ತೇವೆ ಎಂದು ವಾಗ್ದಾಳಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *