ಅಂಬುಲೆನ್ಸ್, ಟ್ರ್ಯಾಕ್ಟರ್ ನಡುವೆ ಅಪಘಾತ – ಸ್ಟ್ರೆಚರ್‌ ಮೇಲಿಂದ ಬಿದ್ದು ಯುವಕ ಸಾವು

Public TV
1 Min Read
ROAD ACCIDNET BELAGAVI

ಬೆಳಗಾವಿ: ಅಂಬುಲೆನ್ಸ್ (Ambulance) ಹಾಗೂ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ (Tractor) ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ನಡೆದಿದೆ.

AMBULANCE AND TRACTER ACCIDENT

ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಅಕ್ಬರ್‌ಸಾಬ್‌ ನೇಸರಗಿ (28) ಸ್ಥಳದಲ್ಲೇ ಸಾವನ್ನಪ್ಪಿದ ಯುವಕ. ಸವದತ್ತಿಯ ರೇಣುಕಾ ದೇವಸ್ಥಾನ ಆವರಣದಲ್ಲಿ ಬಳೆ ವ್ಯಾಪಾರಿ ಆಗಿರುವ ಅಕ್ಬರ್‌ಸಾಬ್‌ ಬೆಳವಡಿಯಿಂದ ಸವದತ್ತಿಗೆ ಹೋಗುವಾಗ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದರು. ತಕ್ಷಣವೇ ಚಿಕಿತ್ಸೆಗಾಗಿ ಸವದತ್ತಿ ತಾಲೂಕು ಆಸ್ಪತ್ರೆಗೆ (Hospital) ರವಾನಿಸಿದ್ದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಅಂಬುಲೆನ್ಸ್ ಮೂಲಕ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲು ಹೇಳಿದ್ದಾರೆ. ಇದನ್ನೂ ಓದಿ: ಕೆಲಸ ಕೊಡಿಸುವ ಆಸೆ ತೋರಿಸಿ ಸೆಕ್ಸ್- ಟೆಕ್ಕಿ ಅರೆಸ್ಟ್

ಹಾಗಾಗಿ ಅಕ್ಬರ್‌ಸಾಬ್‌ರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ದಾರಿ ಮಧ್ಯೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು ಅಂಬುಲೆನ್ಸ್ ನಡುವೆ ಅಪಘಾತವಾಗಿದೆ. ಅಪಘಾತದ ರಭಸಕ್ಕೆ ಅಂಬುಲೆನ್ಸ್‌ನ ಸ್ಟ್ರಚರ್ ಮೇಲಿಂದ ಬಿದ್ದು ಅಕ್ಬರ್‌ಸಾಬ್‌ ಸಾವನ್ನಪ್ಪಿದ್ದಾರೆ. ಜನ್ನತಬಿ ನೇಸರಗಿ (45), ಮೆಹಬೂಬ್ (28), ಸಬ್ಬೀರ್ (22) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಹದಿಹರಿಯದ ಪ್ರೇಮಕ್ಕೆ ಅಪ್ರಾಪ್ತ ಬಾಲಕಿ ಬಲಿ- ವಿಷ ಕುಡಿದು ಆತ್ಮಹತ್ಯೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *