Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dharwad

ವರಕವಿ ದ.ರಾ.ಬೇಂದ್ರೆ ಪ್ರಶಸ್ತಿ ಮೊತ್ತ ಕಡಿತ – ಸಾಹಿತಿಗಳ ಆಕ್ರೋಶ

Public TV
Last updated: January 2, 2020 7:11 pm
Public TV
Share
2 Min Read
DWD DARA BENDRE AMIT SHAH
SHARE

ಧಾರವಾಡ: ವರಕವಿ ದ.ರಾ. ಬೇಂದ್ರೆ ಅವರನ್ನು ಯುಗದ ಕವಿ, ಜಗದ ಕವಿ ಎಂದು ಕರೆಯಲಾಗುತ್ತೆ. ಇದೇ ಕಾರಣಕ್ಕೆ ಬೇಂದ್ರೆಯವರ ಕವನಗಳು ದೇಶದ ಪ್ರಧಾನಿಯ ನಾಲಿಗೆಯ ಮೇಲೂ ನಲಿದಾಡಿದೆ. ಆದರೆ ಬೇಂದ್ರೆಯವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯ ಮೊತ್ತವನ್ನು ಕಡಿತ ಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಈ ಹಿಂದೆ ಬೇಂದ್ರೆ ಅವರ ಪ್ರಶಸ್ತಿಗೆ 1 ಲಕ್ಷ ರೂ. ಇದ್ದ ಮೊತ್ತವನ್ನು ಏಕಾಏಕಿಯಾಗಿ 10 ಸಾವಿರಕ್ಕೆ ಇಳಿಸಲಾಗಿದೆ. ಸರ್ಕಾರದ ನಡೆ ಸಾಹಿತ್ಯ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.

DARA BENDRE

ಕುವೆಂಪು ಮತ್ತು ಬೇಂದ್ರೆ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಆದರೆ ಈಗಿನ ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ವರ್ತನೆ ತೋರುತ್ತಿದ್ದು, ಇದರ ಪರಿಣಾಮ ಧಾರವಾಡದ ಸಾಧನಕೆರೆಯಲ್ಲಿರುವ ದ.ರಾ.ಬೇಂದ್ರೆ ಭವನಕ್ಕೆ ಸುಣ್ಣ ಬಳಿಯೋಕು ಹಣ ಇಲ್ಲದಂತಾಗಿದೆ.

ಇದೇ ಜ.31ಕ್ಕೆ ಬೇಂದ್ರೆಯವರ ಜನ್ಮದಿನ ಇದೆ. ಈ ವೇಳೆಗಾಗಲೇ 31ರಂದು ಬೇಂದ್ರೆಯವರ ಹೆಸರಿನಲ್ಲಿ ನೀಡಲಾಗುವ ‘ಅಂಬಿಕಾತನಯದತ್ತ ಪ್ರಶಸ್ತಿ’ ಪ್ರಕಟಿಸಬೇಕಾಗಿತ್ತು. ಆದರೆ ಪ್ರಶಸ್ತಿಯ ಮೊತ್ತವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಡಿಮೆ ಮಾಡಿದ್ದು, ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅವರು ಪ್ರಶಸ್ತಿ ಪ್ರಕಟಿಸುವ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡಂತಾಗಿದೆ. ಮೇಲಾಗಿ ಈ ಟ್ರಸ್ಟಿಗೆ ನೀಡುತ್ತಿದ್ದ ವಾರ್ಷಿಕ 10 ಲಕ್ಷ ರೂಪಾಯಿ ಅನುದಾನವನ್ನು 4 ಲಕ್ಷ ರೂಪಾಯಿಗೆ ಇಳಿಸಿದ್ದಾರೆ.

DWD DARA BENDRE

ಇಷ್ಟು ದಿನ 10 ಲಕ್ ರೂ. ಹಾಗೂ ಪ್ರಶಸ್ತಿ ಕೊಟ್ಟು, ಈಗ 10 ಸಾವಿರ ರೂಪಾಯಿ ಎಂದಾಕ್ಷಣ ನಮಗೆ ಆಘಾತವಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷ ಡಿ.ಎಂ.ಹಿರೇಮಠ ಅವರು ಹೇಳಿದ್ದು, ಬೇಂದ್ರೆಯವರು ವಾಸವಿದ್ದ ಸಾಧನಕೆರೆ ಮನೆಯೇ ಈಗ ಮ್ಯೂಸಿಯಂ ಆಗಿದೆ. ಪಕ್ಕದಲ್ಲಿರೋ ಬೇಂದ್ರೆ ಭವನದಲ್ಲಿ ಸಾಹಿತ್ಯ ಭಂಡಾರ, ಗ್ರಂಥಾಲಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಇದೆಲ್ಲ ನಡೆಯೋದಕ್ಕೆ ಸಿಬ್ಬಂದಿಯನ್ನೂ ನೇಮಿಸಿಕೊಂಡಿದ್ದು, ಆ ಸಿಬ್ಬಂದಿ ವೇತನ, ಖರ್ಚು ವೆಚ್ಚ ಸೇರಿ ವರ್ಷಕ್ಕೆ ಆರೂವರೆ ಲಕ್ಷ ಆಗುತ್ತೆ. ಆದರೆ ಈಗ ಸರ್ಕಾರ ವರ್ಷಕ್ಕೆ 4 ಲಕ್ಷ ಮಾತ್ರ ನಿಡುತ್ತೇವೆ ಎಂದು ಹೇಳಿದೆ. ಟ್ರಸ್ಟ್‍ಗೆ ಉಳಿದ ಹಣ ಎಲ್ಲಿಂದ ತರೋದು ಎಂದು ಚಿಂತೆಯಾಗಿದೆ.

ಬೇಂದ್ರೆಯವರ ಶ್ರಾವಣ ಕವನ ಹಾಗೂ ಕುರುಡು ಕಾಂಚಾಣ ಕುಣಿಯುತ್ತಲಿತ್ತು ಎಂಬ ಕಾವ್ಯವನ್ನೂ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಈ ಹಿಂದೆ ವಾಚಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೇಂದ್ರೆ ನಿವಾಸಕ್ಕೂ ಭೇಟಿ ನೀಡಿದ್ರು. ಆದರೆ ಈಗ ಅವರದೇ ಪಕ್ಷದ ಸರ್ಕಾರವೇ ಈ ರೀತಿ ಮಾಡುವ ಮೂಲಕ ಬೇಂದ್ರೆಯವರ ವ್ಯಕ್ತಿತ್ವಕ್ಕೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಹಿತಿ ರಾಜಕುಮಾರ ಮಡಿವಾಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

DWD DARA BENDRE AMIT SHAH a

ವರ್ಷದಿಂದ ವರ್ಷಕ್ಕೆ ಸಾಹಿತ್ಯ ಪ್ರಶಸ್ತಿಗಳ ಮೊತ್ತ ಹೆಚ್ಚಿಸುವ ಮೂಲಕ ಆಯಾ ಸಾಹಿತಿ ಘನತೆಗೆ ಗೌರವ ದೊರಕಿಸಿಕೊಡುವ ಕಾರ್ಯ ಇಲ್ಲಿಯವರೆಗೆ ನಡೆಯುತ್ತ ಬಂದಿತ್ತು. ಈಗ ಇರುವ ಮೊತ್ತವನ್ನೇ ಗಣನಿಯವಾಗಿ ಇಳಿಸುವ ಮೂಲಕ ಸಾಹಿತ್ಯಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎಂಬ ವರ್ತನೆಯನ್ನು ಸರ್ಕಾರ ತೋರುತ್ತಿದೆ. ಇದಕ್ಕೆ ಈಗ ಸರ್ಕಾರ ಏನು ಉತ್ತರ ಕೊಡುತ್ತೆ ಎಂಬುವುದು ಸಾಹಿತಿಗಳ ಪ್ರಶ್ನೆಯಾಗಿದೆ.

TAGGED:Amit ShahdharwadDR Bendre Awardprime minister modiPublic TVRA BendreState Governmentಅಮಿತ್ ಶಾದ.ರಾ ಬೇಂದ್ರೆದ.ರಾ.ಬೇಂದ್ರೆ ಪ್ರಶಸ್ತಿಧಾರವಾಡಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema Updates

Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
5 hours ago
Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
1 day ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
1 day ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
1 day ago

You Might Also Like

Ahmedabad Air India Air Crash
Latest

8 ಸೆಕೆಂಡ್ ನಂತ್ರ ವಿಮಾನ ಹಾರಾಟದಲ್ಲಿ ಅಸಹಜತೆ ಪತ್ತೆ; 7-12 ಸೆಕೆಂಡ್‌ ವರೆಗಿನ ಹಾರಾಟದ ಮೇಲೆ ತನಿಖೆ

Public TV
By Public TV
19 minutes ago
Raichur PDO
Districts

ಕಾಮಗಾರಿ, ಸಾಮಗ್ರಿಗಳ ಖರೀದಿ ಬಿಲ್‌ನಲ್ಲಿ ಲಕ್ಷ ಲಕ್ಷ ಹಣ ಗೋಲ್ಮಾಲ್‌ – ಇಬ್ಬರು ಪಿಡಿಓ ಅಮಾನತು

Public TV
By Public TV
27 minutes ago
bus accident
Bengaluru Rural

ತಿರುಪತಿಯಿಂದ ಬರುತ್ತಿದ್ದ ಆಂಧ್ರ ಬಸ್‌, ಲಾರಿ ನಡುವೆ ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು

Public TV
By Public TV
32 minutes ago
Ramanagara Paramedical Student
Crime

ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ

Public TV
By Public TV
34 minutes ago
Israel Iran Conflict
Latest

ಇರಾನ್‌ನ ನ್ಯೂಕ್ಲಿಯರ್‌, ಮಿಲಿಟರಿ ಕೇಂದ್ರಗಳ ಮೇಲೆ ಇಸ್ರೇಲ್‌ ವಾಯುದಾಳಿ – ಪ್ಯಾರಾಮಿಲಿಟರಿ ಮುಖ್ಯಸ್ಥ, ಇಬ್ಬರು ವಿಜ್ಞಾನಿಗಳ ಹತ್ಯೆ

Public TV
By Public TV
41 minutes ago
vinay kulkarni
Bengaluru City

ನ್ಯಾಯಾಧೀಶರ ಮುಂದೆ ಹಾಜರಾದ ವಿನಯ್ ಕುಲಕರ್ಣಿ – ಶಾಸಕನನ್ನು ವಶಕ್ಕೆ ಪಡೆದ ಸಿಬಿಐ

Public TV
By Public TV
58 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?