ಬೆಂಗಳೂರು: ಅಂಬರೀಶ್ ಸ್ಪರ್ಧೆ ಬಗ್ಗೆ ಕಾಂಗ್ರೆಸ್ನಲ್ಲಿ ಭಾರೀ ಚರ್ಚೆ ಎದ್ದಿದೆ. ಟಿಕೆಟ್ ಘೋಷಣೆಯಾದರೂ ಅಂಬರೀಶ್ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸದ ಹಿನ್ನೆಲೆಯಲ್ಲಿ ಕೈ ನಾಯಕರು ಈಗ ಗೊಂದಲದಲ್ಲಿದ್ದಾರೆ.
ಅಂಬಿ ಮನವೊಲಿಕೆಗೆ ಬುಧವಾರ ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಸಂಧಾನ ಮಾಡಿದ್ದರು. ಇದರ ಬೆನ್ನಲ್ಲೇ ಮಂಡ್ಯದಲ್ಲಿ ನಾಲ್ಕು ವದಂತಿಗಳು ಭಾರೀ ಊಹಾಪೋಹಕ್ಕೆ ಕಾರಣವಾಗಿದೆ.
ಚರ್ಚೆಯಾಗುತ್ತಿರುವ 4 ವದಂತಿಗಳು
ವದಂತಿ 1 – ಮಂಡ್ಯ ಕ್ಷೇತ್ರದ ಖಾಲಿ ಬಿ ಫಾರಂಗಾಗಿ ಅಂಬರೀಶ್ ಬೇಡಿಕೆ
ವದಂತಿ 2 – ಖಾಲಿ ಬಿ ಫಾರಂ ಅನ್ನ ಆಪ್ತ ಅಮರಾವತಿ ಚಂದ್ರಶೇಖರ್ ಗೆ ಕೊಡಲು ಪ್ಲಾನ್
ವದಂತಿ 3 – ಕೊನೆ ಕ್ಷಣದಲ್ಲಿ ಪತ್ನಿ ಸುಮಲತಾರನ್ನು ಅಂಬರೀಶ್ ಕಣಕ್ಕೆ ಇಳಿಸಲಿದ್ದಾರೆ.
ವದಂತಿ 4 – ಅಂಬಿಯೇ ಸ್ಪರ್ಧೆ ಮಾಡೋದು ಖಚಿತ. ಏಪ್ರಿಲ್ 23/24ಕ್ಕೆ ಮಂಡ್ಯಕ್ಕೆ ಬರ್ತಾರೆ ಅಂತಾರೆ ಕೆಲವರು