ಹುಬ್ಬಳ್ಳಿ: ಈದ್ಗಾ ಮೈದಾನ ಗಣೇಶ ಚತುರ್ಥಿಗೆ ಮಾತ್ರ ನೀಡಿದರೆ ಸಾಕಾಗುವುದಿಲ್ಲ ನಮಗೂ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ ಎಂದು ಕ್ರೈಸ್ತರು ಪಾಲಿಕೆಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟಲ ನೇತೃತ್ವದಲ್ಲಿ ಕಮಿಷನರ್ ಗೋಪಾಲ್ ಕೃಷ್ಣ ಅವರಿಗೆ ಮನವಿ ಸಲ್ಲಿಸಿರುವ ಕ್ರೈಸ್ತ ಧರ್ಮದ ಮುಖಂಡರು, ನಮಗೂ ಸಹ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮತ್ತು ಯೇಸು ಬಗೆಗಿನ ಕಾರ್ಯಕ್ರಮಗಳನ್ನು ಮಾಡುವ ಆಸೆಯಿದೆ. ಹೀಗಾಗಿ ನಮ್ಮ ಧರ್ಮಕ್ಕೂ ಸಹ ಅನುಮತಿ ನೀಡಬೇಕೆಂದು ಮನವಿ ಮಾಡಲಾಗಿದೆ. ಇದನ್ನೂ ಓದಿ: ಮಠ-ಮಂದಿರಗಳಿಗೆ ಹಣ ಕೊಡುವುದನ್ನು ನಿಲ್ಲಿಸಿ: ಪ್ರಮೋದ್ ಮುತಾಲಿಕ್
ಈ ವೇಳೆ ಫಾದರ್ ಸಲ್ಮಾನ್ ಬಿಜ್ಜ, ಓಬಲ್ ರಾವ್ ಸೇರಿದಂತೆ ಕ್ರೈಸ್ತ ಸಮಾಜದ ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.