ಕೃಷಿ ಮೇಳಕ್ಕೆ ಲಕ್ಷಕ್ಕೂ ಹೆಚ್ಚು ಜನರ ಭೇಟಿ- ಗಮನ ಸೆಳೆದ ಪುಷ್ಪ ಮೇಳ

Public TV
1 Min Read
dwd krishi mela

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ರೈತರ ಜಾತ್ರೆಯ ಸಂಭ್ರಮ ಜೋರಾಗಿ ನಡೆದಿದೆ. ನಗರದ ಹೊರವಲಯದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಈ ಬಾರಿ ಮೊದಲ ದಿನವೇ ಒಂದು ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ.

ಈ ಬಾರಿಯ ಕೃಷಿ ಮೇಳದಲ್ಲಿ ವಿಶೇಷ ಆಕರ್ಷಣೆ ಎಂಬಂತೆ ಪುಷ್ಪ ಮೇಳ ಗಮನ ಸೆಳೆಯಿತು. ಜರ್ಬೇರಾ, ಲಿಲ್ಲಿ, ಗುಲಾಬಿ ಹೂವುಗಳು ಎಲ್ಲರನ್ನು ತಿರುಗಿ ನೋಡುವಂತೆ ಮಾಡಿದವು. ವಿವಿಧ ತಾಲೂಕು ಹಾಗೂ ಜಿಲ್ಲೆಗಳಿಂದ ಬಂದಿದ್ದ ರೈತರು ವಿವಿಧ ತಳಿ, ತಂತ್ರಜ್ಞಾನವನ್ನು ನೋಡುವುದರಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಯುವಕ, ಯುವತಿಯರು, ಪುಷ್ಪ ಪ್ರದರ್ಶನದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು.

WhatsApp Image 2020 01 19 at 4.31.02 PM

ಕೃಷಿ ಮೇಳದ ಫ್ಲವರ್ ಶೋದಲ್ಲಿ ಹೂವಿನ ಲೋಕವೇ ಅನಾವರಣಗೊಂಡಿತ್ತು. ಕಣ್ಣಿಗೆ ತಂಪು, ಮನಕ್ಕೆ ಮುದ ನೀಡುವ ತರಹೇವಾರಿ ಪುಷ್ಪಗಳು ಫ್ಲವರ್ ಶೋದ ಹೈಲೈಟ್ ಆಗಿತ್ತು. ಸೌಂದರ್ಯ ಪುಷ್ಪಗಳ ಜೊತೆಗೆ ಅಲಂಕಾರಿಕ ಔಷಧಿ ಪುಷ್ಪಗಳು ಕೂಡಾ ಸುಗಂಧ ಹೊರಸೂಸುವ ಪುಷ್ಪಗಳೊಂದಿಗೆ ಸ್ಪರ್ಧೆಗೆ ಇಳಿದಂತೆ ಕಂಗೊಳಿಸಿದವು. ಜೊತೆಗೆ ಸಂಪಿಗೆ, ಸೇವಂತಿ, ದಾಸವಾಳ, ಚಕ್ರಮಣಿ, ಸರ್ಪಗಂಡ, ಬೃಂದ ರಾಜಾ ಹೂವುಗಳನ್ನ ಅಲಂಕರಿಸಿ ಇಡಲಾಗಿತ್ತು.

ಒಂದು ಕಡೆ ಹೂವಿನ ಅಲಂಕಾರ ಇದ್ದರೆ, ಮತ್ತೊಂದೆಡೆ ಕಲ್ಲಗಂಡಿ ಹಣ್ಣಿನಲ್ಲಿ ದೇಶದ ಪ್ರಮುಖ ಗಣ್ಯರಾದ ಸಿದ್ಧಾರೂಢ ಶ್ರೀ, ಪೇಜಾವರಶ್ರೀ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಸ್ವಾಮಿ ವಿವೇಕಾನಂದ, ಗಾಂಧೀಜಿ, ದ.ರಾ.ಬೇಂದ್ರೆ ಹಾಗೂ ಅಂಬೇಡ್ಕರ್ ಸೇರಿದಂತೆ ಇತರರ ಚಹರೆಯನ್ನು ಕೆತ್ತನೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿ ಸಹ ಉತ್ತರ ಕರ್ನಾಟಕದ ಜನತೆ ಕೃಷಿ ಮೇಳದಲ್ಲಿ ಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *