Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಝೂನಲ್ಲಿ ಹಾಕಿದ ತಕ್ಷಣ ಹುಲಿ ತನ್ನ ಪ್ರವೃತ್ತಿ ಮೆರೆಯಲ್ಲ: ತಂದೆಯನ್ನು ಹೊಗಳಿದ ವಿಜಯೇಂದ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಝೂನಲ್ಲಿ ಹಾಕಿದ ತಕ್ಷಣ ಹುಲಿ ತನ್ನ ಪ್ರವೃತ್ತಿ ಮೆರೆಯಲ್ಲ: ತಂದೆಯನ್ನು ಹೊಗಳಿದ ವಿಜಯೇಂದ್ರ

Districts

ಝೂನಲ್ಲಿ ಹಾಕಿದ ತಕ್ಷಣ ಹುಲಿ ತನ್ನ ಪ್ರವೃತ್ತಿ ಮೆರೆಯಲ್ಲ: ತಂದೆಯನ್ನು ಹೊಗಳಿದ ವಿಜಯೇಂದ್ರ

Public TV
Last updated: May 28, 2022 10:41 pm
Public TV
Share
2 Min Read
Vijayendra
SHARE

ಹಾಸನ: ಝೂನಲ್ಲಿ ಹಾಕಿದ ತಕ್ಷಣ ಹುಲಿ ತನ್ನ ಪ್ರವೃತ್ತಿ ಮೆರೆಯಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿ.ವೈ.ವಿಜಯೇಂದ್ರ ಅವರು ಹಾಡಿ ಹೊಗಳಿದರು.

ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ಶಿವಕುಮಾರಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಇವತ್ತು ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಯಾರೂ ಕೂಡ ಅಂದುಕೊಂಡಿರಲಿಲ್ಲ. ನಮ್ಮ ಪೂಜ್ಯ ತಂದೆಯವರು, ರಾಜ್ಯದ ಸಿಎಂ ಆಗಬೇಕೆಂದು ಯಾವತ್ತೂ ಕೂಡ ಹೋರಾಟ ಮಾಡಲಿಲ್ಲ. ಈ ರಾಜ್ಯ ಅನೇಕ ಮುಖ್ಯಮಂತ್ರಿಗಳನ್ನು ಕೊಟ್ಟಿದೆ, ಆದರೆ ಈ ವೇದಿಕೆ ಮೂಲಕ ಸವಾಲು ಹಾಕುತ್ತೇನೆ. ಶಿಕಾರಿಪುರ ಅಭಿವೃದ್ಧಿ ಹೊಂದಿದಂತೆ ಇನ್ಯಾವ ಕ್ಷೇತ್ರವೂ ರಾಜ್ಯದಲ್ಲಿ ಅಭಿವೃದ್ಧಿ ಹೊಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ 74 ವರ್ಷ ಆಗಿದೆ: ಸಿದ್ದುಗೆ ಟಾಂಗ್ ಕೊಟ್ಟ ಬಿ.ಸಿ.ನಾಗೇಶ್ 

Yeddyurappa

ತಮ್ಮ ಸಮಾಜದ ಶಕ್ತಿಯ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ಒಕ್ಕಲಿಗರ ಪ್ರಾಬಲ್ಯವಿರುವ ಹಾಸನ ನೆಲದಲ್ಲಿ ತಮ್ಮ ಸಮಾಜದ ಶಕ್ತಿಯ ಬಗ್ಗೆ ಗುಣಗಾನ ಮಾಡಲಾಗಿದೆ. ಕಾಡಿನಲ್ಲಿ ಬೇಟೆಯಾಡುವ ಹುಲಿಯನ್ನ ಹಿಡಿದುಕೊಂಡು ಬಂದು ಬೋನಿನಲ್ಲಿ ಹಾಕಿದ ತಕ್ಷಣ ಅದು ಹುಲ್ಲು ತಿನ್ನಲ್ಲ. ಕಾಡಿನಲ್ಲಿರುವ ಹುಲಿ ಏನು ತಿನ್ನುತ್ತೋ, ಬೋನಿನಲ್ಲಿರುವ ಹುಲಿ ಅದನ್ನೇ ತಿನ್ನುತ್ತೆ. ಝೂನಲ್ಲಿ ಹಾಕಿದ ತಕ್ಷಣ ಹುಲಿ ತನ್ನ ಪ್ರವೃತ್ತಿ ಮೆರೆಯಲ್ಲ. ಭೇಟೆಯಾಡುವುದನ್ನು ಮರೆಯಲ್ಲ ಎಂದು ಆಕ್ರೋಶ ಹೊರಹಾಕಿದರು.

ಅದೇ ರೀತಿ ನಮ್ಮ ಸಮಾಜ ಕೂಡ ಕರ್ನಾಟಕ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಇದೆ. ಅದರಲ್ಲೂ ಈ ಭಾಗದಲ್ಲಿ ನಾವ್ಯಾರು ಕೂಡ ಬಸವಣ್ಣನವರ ರೀತಿ ಹುಲ್ಲು ತಿಂದು ಕೂರುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

bjp yeddyurappa bsy

ರೈತರು, ದಲಿತ, ಹಿಂದುಳಿದ ವರ್ಗದವರು ಎಲ್ಲಿ ಕಣ್ಣೀರು ಹಾಕುತ್ತಿದ್ದರು ಅಲ್ಲಿ ಯಡಿಯೂರಪ್ಪ ಅವರು ಇರ್ತಿದ್ರು. ಅದೆಷ್ಟೋ ಪಾದಯಾತ್ರೆ, ಜೀತದಾಳು ಪದ್ಧತಿ ವಿರುದ್ಧ ಹೋರಾಟಗಳನ್ನು ಮಾಡಿದ್ದಾರೆ. ವಿಧಾನಸಭೆಯಲ್ಲಿ ಜೀತಪದ್ಧತಿ ವಿರುದ್ಧ ಕಾನೂನು ಮಂಡನೆ ಮಾಡ್ತಾರೆ ಎಂದು ವಿವರಿಸಿದರು.

ಅದು ರಾಚಯ್ಯ ಅವರು ಇರುವ ಸಂದರ್ಭ. ಯಡಿಯೂರಪ್ಪ ಅವರು ಅಂದು ವಿಧಾನಸಭೆಯಲ್ಲಿ ಮಾಡಿದ ಭಾಷಣ ಕೇಳಿ ರಾಚಯ್ಯ ಅವರು ಕಣ್ಣೀರು ಹಾಕಿ ಆ ಕಾನೂನನ್ನು ಕಿತ್ತು ಹಾಕಿದ್ರು. ಯಡಿಯೂರಪ್ಪ ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಯಡಿಯೂರಪ್ಪ ಅವರ ಮಗನಾಗಿ ಬಾಲ್ಯದಿಂದಲೇ ಅವರ ಹೋರಾಟಗಳನ್ನು ನೋಡಿಕೊಂಡು ಬಂದಿದ್ದೇನೆ. ನಾಡಿನ ಎಲ್ಲ ವರ್ಗದ ಮಠಮಾನ್ಯಗಳ ಶ್ರೀಗಳ ಆಶೀರ್ವಾದದಿಂದ ಈ ರಾಜ್ಯದಲ್ಲಿ ನಾಲ್ಕು ಮುಖ್ಯಮಂತ್ರಿಯಾದರು ಎಂದರು.

Vijayendra 1

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯದಲ್ಲಿ ಯಾರೂ ಈ ರೀತಿ ಮಾಡಲಿಲ್ಲ. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ರು. ಯಡಿಯೂರಪ್ಪ ಅವರು ರಾಜಕೀಯದಲ್ಲಿ ಬೆಳೆಯುತ್ತಾರೆ ಅಂತ ಹೇಳಿ ಇರುವ ರಸ್ತೆಯಲ್ಲೆಲ್ಲಾ ಕಲ್ಲು ಹೊಡೆಯುವ ಕೆಲಸ ಮಾಡಿದ್ರು. ಅದೇ ಕಲ್ಲನ್ನು ತೆಗೆದುಕೊಂಡು, ಅಡಿಪಾಯ ಹಾಕಿಕೊಂಡು ನಾಲ್ಕು ಬಾರಿ ಮುಖ್ಯಮಂತ್ರಿಯಾದರು. ಅಂತಹ ಧೀಮಂತ ನಾಯಕನನ್ನು ನಾಡು ಕಂಡಿದ್ರೆ ಅದು ನಿಮ್ಮ ಯಡಿಯೂರಪ್ಪನವರು ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ:  ಅಪ್ರಾಪ್ತ ಬಾಲಕ ವಾಹನ ಸವಾರಿ – ಮಾಲೀಕನಿಗೆ ಬಿತ್ತು ಭಾರೀ ದಂಡ 

ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿ ಮಠಕ್ಕೆ ಅನುದಾನ ಕೊಟ್ಟಿದ್ದಾರೆ. ಎಸ್‍ಸಿ ಸಮಾಜದ ಮಠಗಳಿಗೆ, ಹಿಂದುಳಿದ ಮಠಗಳಿಗೂ ಅನುದಾನ ಕೊಟ್ಟಿದ್ದಾರೆ. ಸರ್ಕಾರಕ್ಕೆ ಸರಿಸಮನಾಗಿ, ಅದಕ್ಕಿಂತ ಹೆಚ್ಚು ಮಠಮಾನ್ಯಗಳು ಶಿಕ್ಷಣವನ್ನು ನೀಡಿವೆ. ಆ ಮಠಗಳಿಗೆ ಶಕ್ತಿ ಕೊಡುವ ಉದ್ದೇಶದಿಂದ ಅನುದಾನ ಕೊಟ್ಟರು ಎಂದು ಹೆಮ್ಮೆಯಿಂದ ಹೇಳಿದರು.

TAGGED:bjphassantigerVijayendrayeddyurappaಬಿಜೆಪಿಯಡಿಯೂರಪ್ಪವಿಜಯೇಂದ್ರಹಾಸನಹುಲಿ
Share This Article
Facebook Whatsapp Whatsapp Telegram

Cinema news

Wild Life Safari
ದುಬೈನಲ್ಲಿ ಬಿಡುಗಡೆ ಆಯ್ತು ವೈಲ್ಡ್ ಟೈಗರ್ ಸಫಾರಿ ಟೀಸರ್
Cinema Latest Sandalwood Top Stories
kicchana chappale ashwini gowda dhruvanth
Bigg Boss ಸೀಸನ್‌ 12ರ ಕೊನೆಯ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅಶ್ವಿನಿ, ಧ್ರುವಂತ್‌
Cinema Latest Top Stories TV Shows
Monalisa Bhosle
ರೊಮ್ಯಾಂಟಿಕ್‌ ಸಾಂಗ್‌ನಲ್ಲಿ ಕುಂಭಮೇಳದ ನೀಲಿ ಕಂಗಳ ಚೆಲುವೆ – ದಿಲ್‌ ಕದ್ದ ಮೊನಾಲಿಸಾ!
Bollywood Cinema Latest National Top Stories
Niveditha Gowda
ಕಡಲ ಅಲೆಯಲ್ಲಿ ಗುಲಾಬಿ ದಳದಂತೆ ತೇಲಿದ ನಿವೇದಿತಾ!
Cinema Latest Sandalwood Top Stories

You Might Also Like

chitradurga accident
Chitradurga

ಚಿತ್ರದುರ್ಗ| ಕಾರು-ಕ್ಯಾಂಟರ್ ಲಾರಿ ಮುಖಾಮುಖಿ ಡಿಕ್ಕಿ; ನಾಲ್ವರು ದುರ್ಮರಣ

Public TV
By Public TV
4 hours ago
Harmanpreet Kaur Nat Sciver Brunt
Cricket

ಬ್ರಂಟ್‌-ಹರ್ಮನ್‌ಪ್ರೀತ್‌ ಸ್ಫೋಟಕ ಫಿಫ್ಟಿ ಆಟ; ಡೆಲ್ಲಿ ವಿರುದ್ಧ ಮುಂಬೈಗೆ 50 ರನ್‌ಗಳ ಭರ್ಜರಿ ಜಯ

Public TV
By Public TV
4 hours ago
Karwar Suicide
Crime

ಪ್ರೀತಿ ಹೆಸರಲ್ಲಿ JDS ಮುಖಂಡೆ ಪುತ್ರನಿಂದ ಕಿರುಕುಳ – ಯುವತಿ ಆತ್ಮಹತ್ಯೆ

Public TV
By Public TV
4 hours ago
Mississippi shooting
Latest

ಅಮೆರಿಕದ ಮಿಸಿಸಿಪ್ಪಿಯಲ್ಲಿ ಸರಣಿ ಗುಂಡಿನ ದಾಳಿಗೆ 6 ಮಂದಿ ಬಲಿ

Public TV
By Public TV
4 hours ago
BENGALURU WEATHER
Bengaluru City

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ 24 ಗಂಟೆ ಶೀತಗಾಳಿ ಎಚ್ಚರಿಕೆ

Public TV
By Public TV
5 hours ago
gadag Lakkundi
Districts

ಐತಿಹಾಸಿಕ ಲಕ್ಕುಂಡಿಯಲ್ಲಿ ಅಂದಾಜು 1 ಕೆ.ಜಿ ಚಿನ್ನಾಭರಣಗಳ ನಿಧಿ ಪತ್ತೆ

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?