ರಶ್ಮಿಕಾ ಮಂದಣ್ಣ ಎರಡು ದಿನಗಳಿಂದ ಇದೊಂದು ಸುದ್ದಿಯಿಂದ ಲೈಮ್ಲೈಟಿನಲ್ಲಿದ್ದಾರೆ. ಹಲವು ವರ್ಷಗಳಿಂದ ಇವರ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೋಸ ಮಾಡಿದ ಕತೆಯೇ ಹೂರಣ. ಸುಮಾರು ಎಂಬತ್ತು ಲಕ್ಷ ರೂಪಾಯಿ ಲಪಟಾಸಿದ್ದಕ್ಕೆ ಮ್ಯಾನೇಜರ್ನನ್ನು ಕಿತ್ತು ಬಿಸಾಕಿದ್ದಾರೆ ಸಾನ್ವಿ ಅನ್ನೋದು ಖಬರ್. ಆದರೆ ಇದೀಗ ಬಂದ ಮಾಹಿತಿ ಇನ್ನೇನೊ ಹೇಳುತ್ತಿದೆ. ಮೋಸದಾಟದ ಬಗ್ಗೆ ರಶ್ಮಿಕಾ ಆಪ್ತರು ಹೇಳಿದ್ದೇನು? ಸತ್ಯ ಯಾವುದು, ಸುಳ್ಳು ಯಾವುದು? ಇಲ್ಲಿದೆ ನೋಡಿ ಖತರ್ನಾಕ್ ಸ್ಟೋರಿ.
ಒಂದರ ಹಿಂದೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳುತ್ತಿರುವ ರಶ್ಮಿಕಾ ಈಗ ಸಿಕ್ಕಾಪಟ್ಟೆ ಬಿಜಿ ಬಿಜಿ. ಇದನ್ನೆಲ್ಲ ನೋಡಿಕೊಳ್ಳಲು ಒಂದೊಂದಕ್ಕೆ ಒಬ್ಬೊಬ್ಬ ಕೆಲಸಗಾರರು ಇದ್ದಾರೆ. ಹೈದ್ರಾಬಾದ್, ಮುಂಬೈಗೆ ಸಾನ್ವಿ ಓಡಾಡುತ್ತಿದ್ದಾರೆ. ಈ ನಡುವೆ ಇದೊಂದು ಸಮಾಚಾರ ಎಲ್ಲರಲ್ಲೂ ಕುತೂಹಲ ಮೂಡಿಸಿತು. ರಶ್ಮಿಕಾ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಭರ್ತಿ ಎಂಬತ್ತು ಲಕ್ಷ ರೂಪಾಯಿ ಮೋಸ ಮಾಡಿದ್ದಾನೆ. ಅಂದರೆ ನುಂಗಿ ಹಾಕಿದ್ದಾನೆ. ಅದಕ್ಕಾಗಿ ಅವನನ್ನು ಕಿತ್ತು ಹಾಕಿದ್ದಾರೆ ರಶ್ಮಿಕಾ. ಇದು ಎಲ್ಲ ಮಾಧ್ಯಮದಲ್ಲಿ ಸುದ್ದಿಯಾಯಿತು. ಪೊಲೀಸು, ಕೇಸು, ಕೋರ್ಟು ಇತ್ಯಾದಿಯನ್ನು ಪಕ್ಕಕ್ಕಿಟ್ಟು ಸಾನ್ವಿ ತಣ್ಣಗೆ ಕೆಲಸ ಮುಗಿಸಿದ್ದಾರೆ. ಇದು ಹೊರಬಿದ್ದ ಮಾಹಿತಿ. ಇದನ್ನೂ ಓದಿ:ಮಹೇಶ್ ಬಾಬು ಚಿತ್ರದಿಂದ ಪೂಜಾ ಹೆಗ್ಡೆ ಕಿಕ್ ಔಟ್- ತ್ರಿಷಾ ಇನ್?
ಅಯ್ಯೋ.. ಕೇಳಿದ್ದರೆ ರಶ್ಮಿಕಾ ಸಾಲ ಕೊಡುತ್ತಿರಲಿಲ್ಲಾವಾ? ಅಷ್ಟು ನಂಬಿಕೆ ಇಟ್ಟಿದ್ದ ಹುಡುಗಿಗೆ ಹೀಗೆ ಮಾಡೋದಾ? ಅವನ್ಯಾವನೋ ಪಕ್ಕಾ ಕಳ್ಳನೇ ಇರಬೇಕು. ಹೀಗಂತ ಎಲ್ಲರೂ ಮಾತಾಡಿಕೊಂಡರು. ಅದನ್ನೇ ನಿಜ ಎಂದು ನಂಬಿದರು, ಮತ್ತು ಈಗಲೂ ನಂಬಿದ್ದಾರೆ. ಆದರೆ ಅದೇ ರಶ್ಮಿಕಾ ಆಪ್ತರು ಇನ್ನೊಂದು ರೀತಿ ವಿಷಯ ಬಿಚ್ಚಿಟ್ಟಿದ್ದಾರೆ. ಮ್ಯಾನೇಜರ್ ನಮ್ಮಲ್ಲಿ ಇದ್ದದ್ದು ನಿಜ. ಆದರೆ ಆತ ಯಾವುದೇ ಮೋಸ ಮಾಡಿಲ್ಲ. ಎಂಬತ್ತು ಲಕ್ಷದ ಕತೆಯಂತೂ ಸುಳ್ಳೆ ಸುಳ್ಳು. ಆತನ ಅವಧಿ ಮುಗಿದಿತ್ತು. ಜೊತೆಗೆ ಆತ ಇನ್ನೇನೊ ಹೊಸ ಕೆಲಸ ಕಂಡುಕೊಂಡಿದ್ದ. ಈ ಕಾರಣಕ್ಕೆ ಇಬ್ಬರೂ ಮಾತಾಡಿ ದೂರವಾಗಿದ್ದಾರೆ ಅಷ್ಟೇ.
ಎರಡರಲ್ಲಿ ಯಾವುದು ನಿಜ? ಯಾವುದು ಸುಳ್ಳು? ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲವಲ್ಲ? ಮಾಧ್ಯಮಕ್ಕೆ ಸಿಕ್ಕ ಮಾಹಿತಿ ಸುಳ್ಳಾ? ಎಲ್ಲವೂ ಬರೀ ಪ್ರಶ್ನೆಗಳೇ. ಇದಕ್ಕೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಎಲ್ಲವನ್ನೂ ಅವರ ಆಪ್ತರೇ ಹೇಳುತ್ತಿದ್ದಾರೆ. ಬಹುಶಃ ವಿನಾಕಾರಣ ಇದೊಂದು ದೊಡ್ಡ ವಿಷಯ ಆಗದಿರಲಿ ಎನ್ನುವುದು ಅವರ ಆಸೆ ಇರಬೇಕು. ಇಲ್ಲದಿದ್ದರೆ ಎಂಬತ್ತು ಲಕ್ಷ ಸುಮ್ಮನೆ ಬಿಡುತ್ತಾರಾ? ಸದ್ಯಕ್ಕೆ ಎಲ್ಲವೂ ಗೊಂದಲ. ಅದೇನೆ ಇರಲಿ, ಸತ್ಯ ಒಂದು ದಿನ ಹೊರ ಬಂದೇ ಬರುತ್ತದೆ. ಇನ್ನೇನು ರಶ್ಮಿಕಾರ ‘ಅನಿಮಲ್’ ಸಿನಿಮಾ ರಿಲೀಸ್ ಆಗುತ್ತಿದೆ. ಆಗ ಉತ್ತರ ಸಿಕ್ಕರೂ ಸಿಗಬಹುದು ಎಲ್ಲದಕ್ಕೂ ಕಾದುನೋಡಬೇಕಿದೆ.