ಬೆಂಗಳೂರು: ಸ್ಯಾಂಡಲ್ವುಡ್ನ ಚಿತ್ತಾರ ಹುಡುಗಿ ಅಮೂಲ್ಯ ಸದ್ದಿಲ್ಲದೇ ಸದ್ಯದಲ್ಲಿಯೇ ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ. ಬೆಂಗಳೂರಿನ ಮಾಜಿ ಪಾಲಿಕೆ ಸದಸ್ಯ ರಾಮಚಂದ್ರೇಗೌಡರ ಮಗನಾಗಿರುವ ಜಗದೀಶ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಲಂಡನ್ನಲ್ಲಿ ಉನ್ನತ ವ್ಯಾಸಂಗ ಮಾಡಿಕೊಂಡು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಜಗದೀಶ್ ಗೋಲ್ಡನ್ ಸ್ಟಾರ್ ಗಣೇಶ್ ಶಿಲ್ಪಾ ದಂಪತಿಗೆ ಪರಿಚಿತರು. ನಟ ಗಣೇಶ್ ಮನೆಗೆ ಆಗಾಗ ಪಾರ್ಟಿಗೆ ಹೋಗುತ್ತಿದ್ದಾಗ ಅಮೂಲ್ಯರ ಪರಿಚಯ ಜಗದೀಶ್ ಅವರಿಗೆ ಆಗಿದೆ. ಈ ಪರಿಚಯ ಪ್ರೇಮವಾಗಿ ಈಗ ಮದುವೆಯ ತನಕ ಬಂದು ನಿಂತಿದೆ.
ಅಮೂಲ್ಯ ಹಾಗೂ ಜಗದೀಶ್ ಕುಟುಂಬದ ಸಮ್ಮತಿಯ ಮೇರೆಗೆ ಮಾರ್ಚ್ 6ಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ನವ ಜೋಡಿ ಸಪ್ತಪದಿ ತುಳಿಯಲಿದೆ.
ಮದುವೆಯ ನಂತರ ಚಿತ್ರರಂಗದಲ್ಲಿ ಮುಂದುವರೆಯಲ್ಲಿದ್ದಾರಾ ಎನ್ನುವ ಪ್ರಶ್ನೆಗೆ ಅಮೂಲ್ಯ ಕಡೆಯಿಂದ ಉತ್ತರ ಸಿಗಬೇಕಿದೆ.