ಕೈಮುಗಿದು ಕೇಳಿಕೊಳ್ಳುತ್ತೇನೆ, ಯಾರು ಆತ್ಮಹತ್ಯೆ ಮಾಡ್ಕೋಬೇಡಿ: ವಿಜಯ್ ರಾಘವೇಂದ್ರ

Public TV
1 Min Read
vijayraghavendra

ಮಡಿಕೇರಿ: ಅಪ್ಪು ಅವರು ಯಾವಾಗಲೂ ಎಲ್ಲರಿಗೂ ಸ್ಫೂರ್ತಿ ಧೈರ್ಯ ತುಂಬುತಿದ್ದವರು. ಅವರು ಇದ್ದಿದ್ದರೆ ಇದನ್ನೆಲ್ಲ ಒಪ್ಪುತ್ತಿರಲಿಲ್ಲ. ಕೈಮುಗಿದು ಕೇಳಿಕೊಳ್ಳುತ್ತೇನೆ, ದಯವಿಟ್ಟು ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ನಟ ವಿಜಯ್ ರಾಘವೇಂದ್ರ ಮನವಿ ಮಾಡಿದ್ದಾರೆ.

PUNEETH RAJKUMAR 9

ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆಯುತ್ತಿರುವ ಸಿನಿಮಾ ಶೂಟಿಂಗ್‍ವೊಂದರಲ್ಲಿ ಬ್ಯುಸಿಯಾಗಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಅಪ್ಪು ಅವರು ಯಾವಾಗಲೂ ನಗು ಮೊಗದಿಂದಲೇ ಎಲ್ಲರಿಗೂ ಪಾಸಿಟಿವ್ ವಿಚಾರ ಹೇಳುತ್ತಿದ್ದರು. ಹೀಗಿರುವಾಗ ಅವರಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ಅಪ್ಪು ಅವರಿಗಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರಾ ಅದು ಗೊತ್ತಿಲ್ಲ. ಆದರೆ ಅವರಿಗಾಗಿಯೇ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುದ್ದಿ ಹರಡುತ್ತಿದೆ. ದಯವಿಟ್ಟು ಅದು ಆಗಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:  ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ

vijay raghavendra

ಇದೇ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಮನೆಯವರಿಗೆ ಸಾಂತ್ವನ, ಧೈರ್ಯ ಹೇಳುವುದಾಗಿ ತಿಳಿಸಿದ್ದಾರೆ. 11 ನೇ ದಿನದ ಕಾರ್ಯ ಇರುವುದರಿಂದ ನಾನೂ ಕೂಡ ಅಲ್ಲಿ ಇರಬೇಕಾಗಿತ್ತು. ಆದರೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ಹೋಗಲಾಗಲಿಲ್ಲ. ಏನೆಲ್ಲಾ ನಾನು ಹೇಳಬೇಕಾಗಿತ್ತೋ ಅದನ್ನೆಲ್ಲಾ ಫೋನ್ ಮೂಲಕವೇ ಹೇಳಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಮಾಡಿಕೊಂಡು ಬಂದ ವೃದ್ಧೆ

Share This Article
Leave a Comment

Leave a Reply

Your email address will not be published. Required fields are marked *