ಬೆಂಗಳೂರು: ಎಲ್ಲಿಯ ತನಕ ಜನರನ್ನು ಮೂರ್ಖರನ್ನಾಗಿ ಮಾಡುತ್ತಿರುತ್ತೀರಿ? ಯಾವಾಗ ಆಡಳಿತ ನಡೆಸುತ್ತೀರಿ ಎಂದು ಪ್ರಶ್ನೆ ಮಾಡಿ ನಟ ಪ್ರಕಾಶ್ ರೈ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆ ಆದ ಮೇಲೆ ಸಚಿವಾಕಾಂಕ್ಷಿಗಳಲ್ಲಿ ಭುಗಿಲೆದ್ದಿರುವ ಆಕ್ರೋಶದ ಹಿನ್ನೆಲೆಯಲ್ಲಿ ಟ್ವೀಟಿಸಿರುವ ಅವರು ಬಿಜೆಪಿ ಅಧಿಕಾರ ಮತ್ತು ಹಣದಿಂದ ಸರ್ಕಾರ ರಚಿಸಲು ಲಾಬಿ ನಡೆಸಿತು. ಆದರೆ ಕಾಂಗ್ರೆಸ್ ಜೆಡಿಎಸ್ ನಾಯಕರುಗಳು ಖಾತೆಗಳಿಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಹಣ ಅಥವಾ ಮಂತ್ರಿಗಿರಿಗಾಗಿ ನೀವು ಈಗಾಗಲೇ ಮಾರಾಟವಾಗಿದ್ದೀರಿ ಎಂದು ಪ್ರಕಾಶ್ ರೈ ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಮಾರಸ್ವಾಮಿ ಮತ್ತು ಪರಮೇಶ್ವರ್ ಅವರು ಮುಖ್ಯಮಂತ್ರಿ ಉಪಮುಖ್ಯಮಂತ್ರಿಯಾಗಿ ಮೇ 23 ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ಬಳಿಕ ಜೂನ್ 6 ರಂದು 25 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ಖಾತೆ ಹಂಚಿಕೆಯಾಗಿಲ್ಲ.
KARNATAKA POLITICS..!! while one party BJP tried lobbying with money n power…you guys CONGRES/JDS are lobbying with ministry posts. MONEY or MINISTRY…both ways you ALL are ready to SELL YOURSELVES .. how long will you fool us CITIZENS?? when will you GOVERN ?? #justasking
— Prakash Raj (@prakashraaj) June 8, 2018