ಹೈದರಾಬಾದ್: ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದ ಯುವನಟ ನಂದೂರಿ ಉದಯ್ ಕಿರಣ್ (34) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಉದಯ್ ಕಿರಣ್ಗೆ ಶುಕ್ರವಾರ ರಾತ್ರಿ ಸುಮಾರು 10.30ಕ್ಕೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಿರಣ್ ಸಾವನ್ನಪ್ಪಿದ್ದಾರೆ. ನಟನ ಅಂತಿಮ ದರ್ಶನ ಪಡೆದ ರಾಜಕೀಯ ನಾಯಕರು ಮತ್ತು ಸಿನಿಮಾರಂಗದವರು ಸಂತಾಪ ಸೂಚಿಸಿದ್ದಾರೆ.
ಮೃತ ಉದಯ್ ಕಿರಣ್ ‘ಪರಾರೇ’ ಮತ್ತು ‘ಫ್ರೆಂಡ್ಸ್ ಬುಕ್’ ಸಿನಿಮಾಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದರು. ತೆಲುಗು ಮಾತ್ರವಲ್ಲದೇ ತಮಿಳು ಸಿನಿಮಾಗಳಲ್ಲೂ ನಟಿಸುವ ಅವಕಾಶಗಳನ್ನು ಪಡೆದುಕೊಂಡಿದ್ದರು.
ಮೃತ ಉದಯ್ ಕಿರಣ್ ಮೇಲೆ ಅನೇಕ ಆರೋಪಗಳು ಸಹ ಕೇಳಿ ಬಂದಿದ್ದು, ಈ ಕುರಿತು ಪ್ರಕರಣ ಸಹ ದಾಖಲಾಗಿತ್ತು. ಹುಡುಗಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದು, ಈ ಪ್ರಕರಣದಲ್ಲಿ ಉದಯ್ ಕಿರಣ್ ಬಂಧಿತನಾಗಿದ್ದರು.
ಅಷ್ಟೇ ಅಲ್ಲದೇ ಬಂಜಾರ ಹಿಲ್ಸ್ ನಲ್ಲಿ ಮನೆ ಮಾಲೀಕರ ಮೇಲೆ ದೌರ್ಜನ್ಯ ಎಸಗಿದ್ದ ಕಾರಣ 2018ರಲ್ಲಿ ಕ್ರಿಮಿಮಲ್ ಮೊಕದ್ದಮೆ ಸಹ ದಾಖಲಿಸಲಾಗಿತ್ತು. ಇದೇ ರೀತಿ ಅನೇಕ ಮಂದಿಗೆ ಮೋಸ ಮಾಡಿದ್ದ ಆರೋಪದ ಮೇರೆಗೆ ಮೃತ ಉದಯ್ ಕಿರಣ್ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.