– ಅನುಮತಿ ಸಿಕ್ಕರೆ ಚಿತ್ರೀಕರಣದಲ್ಲಿ ಭಾಗಿ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಜಾಮೀನು ಪಡೆದು ನಿರಾಳಾರಾಗಿದ್ದಾರೆ. ಸಿನಿಮಾ ಶೂಟಿಂಗ್ಗೆ ಸಜ್ಜಾಗಿರುವ ದರ್ಶನ್, ಅವಕಾಶ ಕೋರಿ ಮುಂದಿನ ವಾರ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.
Advertisement
ನಟ ದರ್ಶನ್ ತಮ್ಮ ಕಾನೂನು ಹೋರಾಟ ಮುಂದುವರೆಸಿದ್ದು, ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆಯೂ ಬಾಕಿ ಇದೆ. ಈ ನಡುವೆ ದರ್ಶನ್ ತಮ್ಮ ವೃತ್ತಿ ಜೀವನಕ್ಕೆ ಕಿಕ್ ಸ್ಟಾರ್ಟ್ ಕೊಡಲು ತಯಾರಿ ಆಗಿದ್ದಾರೆ. ಕಳೆದ ಜೂನ್ನಲ್ಲಿ ನಿಂತು ಹೋಗಿದ್ದ ಚಲನಚಿತ್ರದ ಶೂಟಿಂಗ್ ಪ್ರಾರಂಭಿಸುವ ಎಲ್ಲಾ ತಯಾರಿ ಮಾಡಿದ್ದಾರೆ.
Advertisement
Advertisement
ಮುಂದಿನ ವಾರ ಕೋರ್ಟ್ನಲ್ಲಿ ಅನುಮತಿ ಕೋರಲಿದ್ದಾರೆ. ಬೆಂಗಳೂರು ಬಿಟ್ಟು ಹೊರಗೆ ಹೋಗಬೇಕಾದರೆ ಕೋರ್ಟ್ ಅನುಮತಿ ಕಡ್ಡಾಯ ಆಗಲಿದೆ. ಹೀಗಾಗಿ, ಕೋರ್ಟ್ಗೆ ಮಾಹಿತಿ ನೀಡಿ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ.
Advertisement
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಜೈಲು ಶಿಕ್ಷೆ ಅನುಭವಿಸಿದ್ದರು. ಸದ್ಯ ಜಾಮೀನಿನ ಮೇಲೆ ಆರೋಪಿಗಳು ಹೊರಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಿಚಾರಣೆ ನಡೆಸಿ ಕೋರ್ಟ್, ಏ.8 ಕ್ಕೆ ವಿಚಾರಣೆ ಮುಂದೂಡಿದೆ.