ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ದಿನದಿಂದ ದಿನಕ್ಕೆ ರಾಷ್ಟ್ರ ರಾಜಧಾನಿ ಚುನಾವಣೆ ರಣಕಣ ರಂಗು ಪಡೆದುಕೊಳ್ಳುತ್ತಿದೆ. ಈ ನಡುವೆ ಚುನಾವಣಾ ಪ್ರಚಾರಕ್ಕೆ ಬಿಜೆಪಿ, ಆಮ್ ಅದ್ಮಿ ತಂತ್ರಗಳನ್ನ ಅನುಸರಿಸಲಿದೆ ಎಂದು ತಿಳಿದು ಬಂದಿದೆ.
2015 ರಲ್ಲಿ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿಯಲ್ಲಿ ಆಪ್ ದಾಖಲೆಯ ಗೆಲವು ಸಾಧಿಸಿತ್ತು. ಹೆಚ್ಚು ಆಡಂಬರದ ಬೃಹತ್ ಸಮಾವೇಶಗಳ ಮೊರೆ ಹೋಗದೆ ತನ್ನ ವಿಶಿಷ್ಟ ಪ್ರಚಾರ ಕಾರ್ಯಗಳಿಂದ ದೆಹಲಿಯ ಜನರನ್ನು ನೇರವಾಗಿ ತಲುಪಲು ಪ್ರಯತ್ನ ಮಾಡಿತ್ತು. ಇದೇ ತಂತ್ರವನ್ನು ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಅನುಸರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆಪ್ ತನ್ನೆಲ್ಲ ಚುನಾವಣೆಗಳಲ್ಲೂ ಮೊಹಲ್ಲಾ ಮೀಟಿಂಗ್, ಮನೆ ಮನೆ ಪ್ರಚಾರ, ವಾರ್ಡ್ ಸಭೆಗಳು, ಕರಪತ್ರ ಹಂಚುವ ಮೂಲಕ ನೇರವಾಗಿ ಜನರನ್ನ ತಲುಪಿ ಪಕ್ಷದ ನಿಲುವುಗಳನ್ನು ಹೇಳುವ ಪ್ರಯತ್ನ ಮಾಡಲಾಗಿತ್ತು. ಇದೇ ಮಾದರಿಯನ್ನು ಬಿಜೆಪಿ ಈ ಬಾರಿ ಫಾಲೋ ಮಾಡಲಿದೆ ಎನ್ನಲಾಗುತ್ತಿದೆ. ಬೃಹತ್ ಸಮಾವೇಶಗಳು, ಪೋಸ್ಟರ್ ಗಳು, ಹೋಲ್ಡಿಂಗ್ಸ್ ಬ್ಯಾನರ್ ಗಳಿಗೆ ಹೆಚ್ಚು ಆದ್ಯತೆ ನೀಡದೆ ಮೊಹಲ್ಲಾ ಮೀಟಿಂಗ್ ಮಾಡಲು ಬಿಜೆಪಿ ನಿರ್ಧರಿಸಿದೆಯಂತೆ. ಇದನ್ನೂ ಓದಿ: ಆಪ್ಗಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ- ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು
2013 ಮತ್ತು 2015ರ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚು ಸಂಪನ್ಮೂಲ ಹೊಂದಿದ್ದ ಪಕ್ಷಗಳಾಗಿದ್ದವು ಹೀಗಾಗೀ ದೊಡ್ಡ ಪ್ರಮಾಣದ ಸಮಾವೇಶ, ಕಟ್ಟೌಟ್ ಗಳನ್ನು ಹಾಕುವ ಮೂಲಕ ಅದ್ಧೂರಿ ಪ್ರಚಾರ ಮಾಡಿದ್ದವು. ಆದರೆ ಸಂಪನ್ಮೂಲ ಕೊರತೆ ಹೊಂದಿದ್ದ ಆಪ್ ತನ್ನ ಸ್ವಯಂ ಸೇವಕ ಕಾರ್ಯಕರ್ತರ ಮೂಲಕ ನೇರವಾಗಿ ಮೊಹಲ್ಲಾ ಮೀಟಿಂಗ್, ವಾರ್ಡ್ ಸಭೆಗಳು, ಮನೆ ಮನೆ ಪ್ರಚಾರ, ಕರಪತ್ರಗಳನ್ನು ಹಂಚುವ ಮೂಲಕ ಹೊಸ ಪ್ರಚಾರ ಪ್ರಯತ್ನ ಮಾಡಿದ್ದರು. ಅಲ್ಲದೇ ಆಪ್ ನ ಈ ಪ್ರಯತ್ನ ಯಶಸ್ವಿ ಆಗುವದಲ್ಲದೇ ಹೊಸ ಪಕ್ಷವೊಂದು 2013ರಲ್ಲಿ 28 ಮತ್ತು 2015 ರಲ್ಲಿ 67 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ಸು ಕಂಡಿತ್ತು. ಅದ್ಧೂರಿ ಪ್ರಚಾರ ಮಾಡಿದ್ದ ಬಿಜೆಪಿ ಮೂರು ಸ್ಥಾನ ಪಡೆದರೆ ಕಾಂಗ್ರೆಸ್ ಧೂಳಿಪಟವಾಗಿತ್ತು. ಸರಳ ಪ್ರಚಾರದ ಮೂಲಕ ಆಪ್ ದಾಖಲೆಯ ವಿಜಯ ಸಾಧಿಸಿತು. ಇದನ್ನೂ ಓದಿ: ಜನವರಿ 20ರೊಳಗೆ ಪ್ರಣಾಳಿಕೆ ಬಿಡುಗಡೆ- 2015ಕ್ಕಿಂತ ಚಿಕ್ಕದಿರಲಿದೆ ಆಪ್ ಭರವಸೆ ಪಟ್ಟಿ
ಇದೇ ತಂತ್ರವನ್ನು ಬಿಜೆಪಿ ಅನುಸರಿಸಲು ರಾಷ್ಟ್ರೀಯ ಅಧ್ಯಕ್ಷ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಳೆದ ವಾರ ತಮ್ಮ ಭಾಷಣದಲ್ಲಿ ನಮ್ಮ ದೊಡ್ಡ ಕಾರ್ಯಕರ್ತರ ಪಡೆ ಪ್ರತಿ ಮನೆ ಮನೆಗೂ ತೆರಳಬೇಕು ಮೊಹಲ್ಲಾ ಸಭೆ ಮಾಡಬೇಕು ಅಂತಾ ಕರೆ ನೀಡಿದ್ದರು. ಅಲ್ಲದೇ ದೆಹಲಿಯಲ್ಲಿ ಸ್ವತಃ ಸಿಎಎ ಪರ ಮನೆ ಮನೆ ಅಭಿಯಾನ ಮಾಡುವ ಮೂಲಕ ಮಾದರಿಯಾಗುವ ಪ್ರಯತ್ನ ಮಾಡಿದ್ದರು. ಇದನ್ನೂ ಓದಿ: ಆಪ್ ಗೆ ಕಾಮ್, ಬಿಜೆಪಿಗೆ ಮೋದಿ ಜನಪ್ರಿಯತೆ, ಸಿಎಎ ಚುನಾವಣಾ ಅಸ್ತ್ರ
ಮಾಹಿತಿಯ ಪ್ರಕಾರ, ಪ್ರತಿ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು, ಮಂಡಲ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ವಾರ್ಡ್ ಕೌನ್ಸಿಲರ್ ಗಳ ನೇತೃತ್ವದಲ್ಲಿ ಕಾರ್ಯಕರ್ತರ ಗುಂಪುಗಳನ್ನು ಮಾಡಿಕೊಂಡು ಮೊಹಲ್ಲಾಗಳಿಗೆ ಭೇಟಿ ಮಾಡಿ 50 ರಿಂದ 150 ಜನರ ಒಳಗೊಳ್ಳುವ ಸಣ್ಣ ಸಣ್ಣ ಸಭೆಗಳನ್ನು ಮಾಡಿ ಅಭ್ಯರ್ಥಿಗಳು ಭಾವಚಿತ್ರ ಪಕ್ಷದ ಚಿಹ್ನೆ ಸೇರಿದಂತೆ ಕೇಂದ್ರ ಸರ್ಕಾರದ ಸಾಧನೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ಅಮಿತ್ ಶಾ ಸೂಚಿಸಿದ್ದಾರೆ ಎಂದು ಬಿಜೆಪಿ ಮೂಲಗಳ ಹೇಳಿದ್ದಾರೆ. ಇದಲ್ಲದೇ ಕೇಂದ್ರ ಸರ್ಕಾರದ ಪ್ರಮುಖ ನಾಯಕರು ಮಾತ್ರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: