ಧಾರವಾಡದಲ್ಲಿ ಯುವಕನ ಮೇಲೆ ಚಾಕು ಇರಿತ

Public TV
1 Min Read
Police Jeep 1 1

ಧಾರವಾಡ: ಕ್ಷುಲ್ಲಕ ಕಾರಣಕ್ಕಾಗಿ ಯುವಕನ(Young Man) ಮೇಲೆ ಚಾಕುವಿನಿಂದ ದಾಳಿ ನಡೆಸಿದ ಘಟನೆ ಧಾರವಾಡದಲ್ಲಿ(Dharwad) ನಡೆದಿದೆ.

ಅಯಾನ್ ನದಾಫ್ ಎಂಬುವವನ ಮೇಲೆಯೇ ಯುವಕರ ಗುಂಪು ಚಾಕುವಿನಿಂದ ದಾಳಿ ನಡೆಸಿದೆ. ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಸವರಾಜ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಅಯಾನ್ ಆರೋಪಿಸಿದ್ದಾನೆ. ಧಾರವಾಡದ ಜೆಎಸ್‍ಎಸ್ ಕಾಲೇಜು(JSS College) ಬಳಿ ಈ ಘಟನೆ ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕಾಗಿ ಅಯಾನ್ ಎಂಬ ಯುವಕನೊಂದಿಗೆ ಜಗಳ ತೆಗೆದ ಯುವಕರ ಗುಂಪು ಅಯಾನ್ ಎದೆಗೆ ಎರಡು ಬಾರಿ ಹಾಗೂ ಬೆನ್ನಿಗೆ ಒಂದು ಬಾರಿ ಚಾಕುವಿನಿಂದ ದಾಳಿ ನಡೆಸಿದೆ. ಇದನ್ನೂ ಓದಿ: ಶಾಲೆಯಲ್ಲಿ ಬಾಂಬ್ ಸ್ಫೋಟ- ವಿದ್ಯಾರ್ಥಿಗಳ ಸ್ಥಳಾಂತರ

crime

ಸದ್ಯ ಗಾಯಗೊಂಡಿರುವ ಅಯಾನ್‍ಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ಪೊಲೀಸರು(Police) ದಾಳಿ ಮಾಡಿದವರ ಬಂಧನಕ್ಕೆ ಬಲೆ ಬಿಸಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *