ಸಾಲ ಹಿಂದಿರುಗಿಸಿಲ್ಲವೆಂದು ವ್ಯಕ್ತಿಯ ಮನೆಯಲ್ಲೇ ಠಿಕಾಣಿ ಹೂಡಿದ ಮಹಿಳೆ

Public TV
1 Min Read
KPL HOME GALATE 7 1

ಕೊಪ್ಪಳ: ಸಾಲ ಕೊಟ್ಟ ಮಹಿಳೆಯೊಬ್ಬಳು ಮನೆ ಹೊಕ್ಕು ಸಾಲ ಪಡೆದವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೊಪ್ಪಳದಲ್ಲಿ ಕೇಳಿಬಂದಿದೆ.

ಕೊಪ್ಪಳದ ಗಂಗಾವತಿ ತಾಲೂಕಿನ ಯರಡೋಣ ಗ್ರಾಮದ ಅಮೃತ ಹಾಗೂ ಕಿಂದಿ ಕ್ಯಾಂಪ್ ನಿವಾಸಿ ಶ್ರೀನಿವಾಸ್ ನಡುವಿನ ಹಣಕಾಸು ತಗಾದೆ ವಿಚಿತ್ರ ತಿರುವು ಪಡೆದುಕೊಂಡಿದೆ. ಅಮೃತ ಶ್ರೀನಿವಾಸ್‍ ಗೆ 12 ಲಕ್ಷ ರೂಪಾಯಿ ಸಾಲಕೊಟ್ಟಿದ್ದು, ಪಡೆದ ಸಾಲದ ಹಣ ವಾಪಸ್ ಕೊಡುವವರೆಗೂ ಶ್ರೀನಿವಾಸ್ ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ.

KPL HOME GALATE 12

ಒಟ್ಟು 12 ಲಕ್ಷಕ್ಕೆ ಬಡ್ಡಿ ಸೇರಿ 15 ಲಕ್ಷ ಕೊಡುವಂತೆ ಅಮೃತಾ ಕೋರ್ಟ್ ನಿಂದ ಕಾನೂನು ರೀತಿ ನೋಟಿಸ್ ಕೊಡಿಸಿದ್ದಾಳೆ. ಆದರೆ ಆಗ ಶ್ರೀನಿವಾಸ್ ಚೆಕ್ ಕೊಟ್ಟಿದ್ದು ಬೌನ್ಸ್ ಆಗಿದೆಯಂತೆ. ಹೀಗಾಗಿ ಸಾಲ ಕೊಟ್ಟ ಅಮೃತಾ, ಶ್ರೀನಿವಾಸ್ ನ ಮನೆಯಲ್ಲಿ ಕಳೆದ ಒಂದು ತಿಂಗಳನಿಂದ ಠಿಕಾಣಿ ಹೂಡಿ ಶ್ರೀನಿವಾಸ್ ತಾಯಿಗೆ ಕಿರುಕುಳ ನೀಡುತ್ತಿರೋ ಆರೋಪ ಕೇಳಿಬಂದಿದೆ.

ಆದರೆ ಸಾಲ ಪಡೆದ ಶ್ರೀನಿವಾಸ್ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದರಿಂದ ಶ್ರೀನಿವಾಸ್ ಮನೆಯಲ್ಲಿ ಅಮೃತಾಳ ಅಂಧಾ ದರ್ಬಾರ್ ಶುರುವಾಗಿದೆ. ಅಮೃತಾಳ ಕಿರುಕುಳಕ್ಕೆ ರೋಸಿ ಹೋದ ಶ್ರೀನಿವಾಸ್ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

HOME GALATE

 

KPL HOME GALATE 11

KPL HOME GALATE 8

KPL HOME GALATE 3

KPL HOME GALATE 10

KPL HOME GALATE 9

KPL HOME GALATE 4

KPL HOME GALATE 2

KPL HOME GALATE 5

KPL HOME GALATE 6

KPL HOME GALATE 1

Share This Article