ಬೆಂಗಳೂರು: ಒಣಗಿದ ಮರವೊಂದು (Tree) ಚಲಿಸುತ್ತಿದ್ದ ಆಟೋ (Auto) ಮೇಲೆ ಬಿದ್ದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಮಲ್ಲೇಶ್ವರಂನ (Malleswaram) ಸರ್ಕಲ್ ಮಾರಮ್ಮ ದೇವಾಲಯದ (Circle Maramma Temple) ಬಳಿ ನಡೆದಿದೆ.
ಘಟನೆ ನಡೆದ ಸಂದರ್ಭ ಪಬ್ಲಿಕ್ ಟಿವಿ ಸಿಬ್ಬಂದಿ ಪ್ರಭು ಹಾಗೂ ಸ್ಥಳೀಯರು ಸೇರಿಕೊಂಡು ಗಾಯಾಳುಗಳನ್ನು ರಕ್ಷಿಸಿ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.
ಬಿಡಬ್ಲ್ಯುಎಸ್ಎಸ್ಬಿಗೆ ಸೇರಿದ ಜಾಗದಲ್ಲಿ ಒಣಗಿದ ಮರ ಆಟೋ ಮೇಲೆ ಬಿದ್ದು, ಮೂವರಿಗೆ ಗಾಯಗಳಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಆಟೋ ಡ್ರೈವರ್ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಯುವತಿ ಓಡಿ ಹೋಗಿದ್ದಕ್ಕೆ ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಠಾಣೆ ಮುಂದೆಯೇ ಥಳಿತ
ಇದೇ ಜಾಗದಲ್ಲಿ ಇನ್ನೂ ಸಾಕಷ್ಟು ಒಣಗಿದ ಮರಗಳಿವೆ. ಯಾವ ಗಳಿಗೆಯಲ್ಲೂ ಮರಗಳು ಬಿದ್ದು ಅವಘಡವಾಗಬಹುದಾದಂತ ಸ್ಥಿತಿಯಿದೆ. ಇದರಿಂದ ಸಾರ್ವಜನಿಕರು ಅಪಾಯದ ಭೀತಿಯಲ್ಲೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಪರೀಕ್ಷೆ ಶುಲ್ಕ ಪಾವತಿಸದ್ದಕ್ಕೆ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷೆ!