ಕಲಬುರಗಿ: ರೈಲ್ವೇ ಎಂಜಿನ್ ವೊಂದು ಚಾಲಕನಿಲ್ಲದೇ ಸುಮಾರು 13 ಕಿಮೀ ಸಂಚರಿಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್ನಲ್ಲಿ ನಡೆದಿದೆ.
ಚಿತ್ತಾಪುರದ ವಾಡಿ ಜಂಕ್ಷನ್ನ ಪ್ಲಾಟ್ ಫಾರಂ 4 ರಲ್ಲಿ ಚೆನ್ನೈ-ಮುಂಬೈ ರೈಲಿಗೆ ಜೋಡಣೆಯಾಗಬೇಕಿದ್ದ ಎಂಜಿನ್ ನಿಲ್ಲಿಸಲಾಗಿತ್ತು. ಆದರೆ ಚಾಲಕ ಎಂಜಿನ್ ಆಫ್ ಮಾಡದೇ ಕೆಳಗಿಳಿದಿದ್ದ ಕಾರಣ ವಾಡಿ ಜಂಕ್ಷನ್ ನಿಂದ ನಾಲವಾರ ವರೆಗೆ ಸಂಚರಿಸಿದೆ.
Advertisement
Advertisement
ರೈಲ್ವೆ ಎಂಜಿನ್ ಪ್ಲ್ಯಾಟ್ ಫಾರಂನಲ್ಲಿ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ರೈಲ್ವೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ನಂತರ ಎಂಜಿನ್ ಅನ್ನು ಸುಮಾರು 13 ಕಿ.ಮೀ ದೂರ ಬೈಕ್ನಲ್ಲಿ ಹಿಂಬಾಲಿಸಿ ನಾಲವಾರ ಪ್ರದೇಶದಲ್ಲಿ ತಡೆದಿದ್ದಾರೆ. ಅದೃಷ್ಟವಶತ್ ಈ ಸಂದರ್ಭದಲ್ಲಿ ರೈಲ್ವೇ ಎಂಜಿನ್ ಸಂಚರಿಸಿದ ಮಾರ್ಗದಲ್ಲಿ ಯಾವುದೇ ರೈಲು ಎದುರುಬಾರದ ಕಾರಣ ಭಾರೀ ಅನಾಹುತ ತಪ್ಪಿದೆ.
Advertisement
ಇದನ್ನೂ ಓದಿ: ರೈಲು ನಿಲ್ಲಿಸಿ ಗಾರ್ಡ್ ನನ್ನು ಹುಡುಕಾಡಿದ ಲೋಕೋಪೈಲಟ್ : ವಿಡಿಯೋ ವೈರಲ್
Advertisement
ರೈಲ್ವೆ ಸಿಬ್ಬಂದಿಗಳ ನಿರ್ಲಕ್ಷ್ಯ ಕುರಿತು ತನಿಖೆ ನಡೆಸುವುದಾಗಿ ಪ್ರಭಾರಿ ಸ್ಟೇಷನ್ ಮಾಸ್ಟರ್ ಜೆ.ಎನ್ ಪರಿಡಾ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.