ನೆಲಮಂಗಲ: ಬೆಳ್ಳಂಬೆಳಗ್ಗೆ ಮಹಿಳೆಯ ಮಾಂಗಲ್ಯ ಸರವನ್ನ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಪಟ್ಟಣದ ಗಜಾರಿಯ ಲೇಔಟ್ ನಲ್ಲಿ ನಡೆದಿದೆ.
ಸತ್ಯಭಾಮ ಎಂಬುವರು ಎಂದಿನಂತೆ ಬೆಳಿಗ್ಗೆ 6.30ರ ವೇಳೆಗೆ ಮನೆಯ ಮುಂದೆ ಹೂ ಬಿಡಿಸಿಲು ಬಂದಿದ್ದಾರೆ. ಇದನ್ನು ಕಾಯುತಿದ್ದ ಕಳ್ಳರು ಫ್ಯಾಷನ್ ಪ್ಲಸ್ ಬೈಕಿನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕದ್ದಿದ್ದಾರೆ.
- Advertisement 2-
ಆದರೆ ಅದೃಷ್ಟವಶಾತ್ ಮಾಂಗಲ್ಯ ಸರ ಅರ್ಧ ಮಾತ್ರ ಕಳ್ಳರ ಪಾಲಾಗಿದ್ದು, ಕಳ್ಳರು ಬೈಕಿನಲ್ಲಿ ಬಂದು ಸರ ಕಸಿದ ನಂತರ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಘಟನಾ ಸಂಬಂಧ ನೆಲಮಂಗಲ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.