ಬೆಂಗಳೂರು: ಆಸ್ತಿ ಕಬಳಿಕೆಗೆ ದರೋಡೆ ಮಾಡೋ ನೆಪದಲ್ಲಿ ಕೊಲೆ ಯತ್ನ ಮಾಡಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕು ಅದ್ದಿಗಾನಹಳ್ಳಿಯಲ್ಲಿ ನಡೆದಿದೆ.
ಅದೃಷ್ಟವಶಾತ್ ಸಾವಿನ ದವಡೆಗೆ ಸಿಲುಕಿದ ವಿಜಯ್ ಕುಮಾರ್ ಬಚಾವಾಗಿದ್ದಾರೆ. ಕಾರಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ವಿಐಟಿ ಮತ್ತು ರಾಜಾನುಕುಂಟೆ ರಸ್ತೆ ತಿಮ್ಮಸಂದ್ರ ಬಳಿ ಭಾನುವಾರ ರಾತ್ರಿ 7.30ಕ್ಕೆ ದರೋಡೆ, ಕೊಲೆ ಯತ್ನ ನಡೆಸಿದ್ದಾರೆ.
- Advertisement 2
- Advertisement 3
ವಿಜಯ್ ಕುಮಾರ್ ಕೈಗೆ ಹಗ್ಗ ಕಟ್ಟಿ, ಬಾಯಿಗೆ ಬಟ್ಟೆ ಇಟ್ಟು ಚಾಕುವಿನಿಂದ ಚುಚ್ಚಿ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಜೊತೆಗೆ ಮೊಬೈಲ್ ಮತ್ತು 10,000 ರೂ. ನಗದು ಕಸಿದು ಪರಾರಿಯಾಗಿದ್ದಾರೆ.
- Advertisement 4
ಶನಿವಾರ ಅದ್ದಿಗಾನಹಳ್ಳಿಯಲ್ಲಿ ವಿಜಯ್ ಕುಮಾರ್ ಕುಟುಂಬದ ದಾಯಾದಿಗಳ ನಡುವೆ ಆಸ್ತಿ ಹಂಚಿಕೆ ವಿಷಯಕ್ಕೆ ಜಗಳ ನಡೆದಿತ್ತು. ಕುಟುಂಬಸ್ಥರು ಆಸ್ತಿ ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಕೊಲೆ ಯತ್ನ ನಡೆದಿರಬಹುದೆಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ತೆರಳಿದ್ದು, ಘಟನೆ ಸಂಬಂಧ ಪರಿಶೀಲನೆ ನಡೆಸಿದ್ದಾರೆ.