ಬೆಂಗಳೂರು: ಬಿಬಿಎಂಪಿಯ ಜಲ್ಲಿಕಲ್ಲು ಸಮಮಾಡುವ ಯಂತ್ರ ಹರಿದು ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೆಮ್ಮಿಗೆಪುರ ವಾರ್ಡ್ 198 ರಲ್ಲಿನ ರಸ್ತೆಗೆ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ 11 ವರ್ಷದ ಮನು ಎಂಬ ಬಾಲಕ ಸೈಕಲ್ ತುಳಿಯುತ್ತಾ ಬಂದಿದ್ದಾನೆ. ಆದ್ರೆ ಇದನ್ನು ಗಮನಿಸದ ಚಾಲಕ, ಬಾಲಕನ ಮೇಲೆ ಜಲ್ಲಿ ಸಮ ಮಾಡುವ ಯಂತ್ರವನ್ನ ಹರಿಸಿದ್ದಾನೆ.
ಪರಿಣಾಮ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಸುಬ್ರಹ್ಮಣ್ಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.