ಕಾರ್ಮಿಕನ ಕುತ್ತಿಗೆಗೆ ಸುತ್ತಿಕೊಂಡ 10 ಅಡಿ ಹೆಬ್ಬಾವು – ಸ್ಥಳೀಯರಿಂದ ರಕ್ಷಣೆ

Public TV
1 Min Read
Snake1 0

ತಿರುವನಂತಪುರಂ: ಕೆಲಸ ಮಾಡುತ್ತಿದ್ದ ಕಾರ್ಮಿಕನ ಕುತ್ತಿಗೆಗೆ 10 ಅಡಿ ಹೆಬ್ಬಾವು ಸುತ್ತಿಕೊಂಡ ಘಟನೆ ತಿರುವನಂತಪುರಂನ ಕಾಲೇಜು ಆವರಣದಲ್ಲಿ ನಡೆದಿದೆ.

ಕಾಲೇಜು ಆವರಣದಲ್ಲಿ ಬೆಳೆದಿದ್ದ ಪೊದೆಯನ್ನು ತೆರವುಗೊಳಿಸುತ್ತಿದ್ದ 58 ವರ್ಷದ ಭುವಚಂದ್ರನ್ ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದೆ. ಈ ವೇಳೆ ಕುತ್ತಿಗೆಗೆ ಹೆಬ್ಬಾವು ಗಟ್ಟಿಯಾಗಿ ಸುತ್ತಿಕೊಂಡು ಉಸಿರಾಟದ ತೊಂದರೆಯಿಂದ ನರಳುತ್ತಿದ್ದ ನಾಯರ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಕಾಲೇಜು ಆವರಣದಲ್ಲಿ ಪೊದೆ ತೆರವುಗೊಳಿಸುತ್ತಿದ್ದ ನಾಯರ್ ಅವರಿಗೆ ಪೊದೆಯೊಳಗೆ ಉದ್ದವಾದ ಬಟ್ಟೆಯ ರೀತಿಯ ವಸ್ತು ಕಂಡು ಬಂದಿದೆ. ನಂತರ ಹತ್ತಿರಕ್ಕೆ ಹೋಗಿ ನೋಡಿದಾಗ ಅದು ಹೆಬ್ಬಾವು ಎಂದು ಗೊತ್ತಾಗಿದೆ. ನಂತರ ಅವರು ತನ್ನ ಜೊತೆ ಕೆಲಸ ಮಾಡುತ್ತಿದ್ದ ಬೇರೆ ಕೆಲಸಗಾರರನ್ನು ಕರೆದು ಹಾವನ್ನು ಹಿಡಿದು ಚೀಲಗೆ ತುಂಬುವ ಸಮಯದಲ್ಲಿ ಕೈಯಿಂದ ಹೆಬ್ಬಾವು ತಪ್ಪಿಸಿಕೊಂಡಿದೆ. ಅದನ್ನು ಮತ್ತೆ ಹಿಡಿಯಲು ಹೋದ ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದೆ.

ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದ್ದನ್ನು ನೋಡಿದ ಬೇರೆ ಕಾರ್ಮಿಕರು ಭಯಗೊಂಡು ನಾಯರ್ ಅವರ ರಕ್ಷಣೆ ಮಾಡದೇ ನಿಂತು ಬಿಟ್ಟಿದ್ದಾರೆ. ಆದರೆ ಅಲ್ಲಿದ್ದ ಕೆಲ ಸ್ಥಳೀಯರು ನಾಯರ್ ಅವರು ಉಸಿರುಗಟ್ಟಿರುವುದನ್ನು ಕಂಡು ಹಾವನ್ನು ಕುತ್ತಿಗೆಯಿಂದ ಬಿಡಿಸಿ ಅದನ್ನು ಚೀಲಕ್ಕೆ ಹಾಕಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ.

ಅರಣ್ಯ ಅಧಿಕಾರಿಗಳು ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಕುತ್ತಿಗೆಗೆ ಗಟ್ಟಿಯಾಗಿ ಸುತ್ತಿಕೊಂಡ ಕಾರಣ ಉಸಿರಾಟದ ತೊಂದರೆಯಿಂದ ಅಸ್ವಸ್ತಗೊಂಡಿದ್ದ ಭುವಚಂದ್ರನ್ ನಾಯರ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಅವರ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *