Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಸೋಮಶೇಖರ್ ಕಾರ್ಯವೈಖರಿ ಆಶ್ಚರ್ಯ ತಂದಿದೆ – ಮಾನವೀಯ ಕಾರ್ಯಕ್ಕೆ ನಂಜಾವಧೂತ ಶ್ರೀ ಶ್ಲಾಘನೆ

Public TV
Last updated: May 21, 2021 4:05 pm
Public TV
Share
5 Min Read
FotoJet 4 27
SHARE

ಬೆಂಗಳೂರು: ಯಶವಂತಪುರ ಕ್ಷೇತ್ರದ ಶಾಸಕರು, ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಎಲ್ಲರಿಗೂ ಮಾದರಿಯಾಗುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ನನಗೂ ಆಶ್ಚರ್ಯವನ್ನು ತಂದಿದೆ. ಕ್ಷೇತ್ರದ ಜನರಿಗೆ ಈ ರೀತಿಯಾಗಿ ಬೆನ್ನೆಲುಬಾಗಿ ನಿಲ್ಲುವ ಮೂಲಕ ನಿಮಗೆ ನಾವಿದ್ದೇವೆ ಎಂಬ ಅಭಯವನ್ನು ಅವರು ನೀಡುವ ಮುಖಾಂತರ ಆರ್ಥಿಕ ನೆರವು ನೀಡುತ್ತಿರುವುದು ಮಾದರಿ ಹಾಗೂ ಮಾನವೀಯ ಕ್ರಮವಾಗಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಮಹಾಸ್ವಾಮೀಜಿ ಹೇಳಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರ ನಗರ ಮಂಡಲದ ದೊಡ್ಡ ಬಿದರಕಲ್ಲು ವಾರ್ಡ್ 40ರಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್‍ರವರು ಕೋವಿಡ್ 19ರಿಂದ ಮೃತಪಟ್ಟ 34 ಮಂದಿಯ ಕುಟುಂಬದವರಿಗೆ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಯವರು, ತಮಗೆ ಎಷ್ಟು ಸಮಸ್ಯೆಯಾದರೂ ಜನರ ಪರ ನಿಲ್ಲುತ್ತೇವೆ ಎಂಬ ಮನೋಭಾವ ಎಲ್ಲರಿಗೂ ಇರುವುದಿಲ್ಲ. ಅದನ್ನು ಸಚಿವರಾದ ಸೋಮಶೇಖರ್ ಅವರು ಮಾಡಿ ತೋರಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

FotoJet 5 26

ಸಾಂಕ್ರಾಮಿಕ ರೋಗದ ಭಯದಿಂದ ಜನ ಭಯಗೊಳ್ಳುತ್ತಿದ್ದಾರೆ, ಆಕ್ಸಿಜನ್ ಅವಶ್ಯಕತೆ ಇಲ್ಲದಿದ್ದರೂ ಬೇಕೆನ್ನುವುದು, ಬೆಡ್ ಬೇಡವಾದರೂ ಬೇಕೆಂದು ಹಠ ಮಾಡಿ ಪಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ, ನಾವು ಒಬ್ಬರು ಧೈರ್ಯದಿಂದ್ದರೆ 300 ಜನಕ್ಕೆ ಸೋಂಕು ಹರಡುವುದನ್ನು ತಪ್ಪಿಸಬಹುದು ಎಂದು ನಂಜಾವಧೂತ ಮಹಾಸ್ವಾಮೀಜಿಯವರು ತಿಳಿಸಿದರು.

ಭಾರತೀಯ ಆಹಾರ ಪದ್ಧತಿ ಪಾಲಿಸಿ: ಈಗಾಗಲೇ ಕೊಟ್ಟಿರುವ ವರದಿಗಳ ಪ್ರಕಾರ, ನಾವು ಆಸ್ಪತ್ರೆಗಳನ್ನು, ಬೆಡ್ ಗಳನ್ನು ಒದಗಿಸಲು ಎಲ್ಲ ರಾಜ್ಯಗಳಿಗೂ ಕಷ್ಟವಾಗಿದೆ. ಈಗ ಅವುಗಳ ವಿಸ್ತರಣೆ ಮಾಡಲಾಗುತ್ತಿದೆ. ಇದು ಎದುರಿಸಲಾಗದ ರೋಗವಲ್ಲ. ಸಾಮಾಜಿಕ ಅಂತರವನ್ನು ಎಲ್ಲರೂ ಕಾಯ್ದುಕೊಳ್ಳಬೇಕು. ಎಲ್ಲರೂ ಧೈರ್ಯದಿಂದ ಇರಬೇಕು. ಅಮೆರಿಕದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ವೈದ್ಯರಾದ ಎಂ.ಎಸ್.ರೆಡ್ಡಿರವರು ಹೇಳುವ ಪ್ರಕಾರ, ಇಂಥ ಅನೇಕ ವೈರಸ್ ಗಳು ಬಂದು ಹೋಗಿವೆ. ಮಾಸ್ಕ್ ಗಳನ್ನು ಹಾಕುವುದರ ಜೊತೆಗೆ ನಮ್ಮ ಆಹಾರ ಪದ್ಧತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

ನಾವು ಭಾರತೀಯರು ನಮ್ಮ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದಿನ ನಿತ್ಯ ಮಜ್ಜಿಗೆ ಸೇವನೆ, ಉತ್ತಮ ಆಹಾರವನ್ನು ಸೇವಿಸಬೇಕು. ನಾವು ಮನೋಸ್ಥೈರ್ಯದಿಂದ್ದರೆ ಮಾತ್ರ ಕೊರೊನಾವನ್ನು ಎಲ್ಲರೂ ಜಯಿಸಬಹುದು. ಹಾವು ಕಚ್ಚಿದವರೂ ಬದುಕುತ್ತಾರೆ. ಆದರೆ, ಭಯ ಅವರನ್ನು ಕೊಲ್ಲುತ್ತದೆ ಎಂದು ಸ್ವಾಮೀಜಿಗಳು ಹೇಳಿದರು.

FotoJet 6 23

ಜನ, ಆಪ್ತರನ್ನು ಕಳೆದುಕೊಂಡು ಆತಂಕ: ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್‍ರವರು ಮಾತನಾಡಿ, ಈ ಕೊರೊನಾ ಬಹಳ ಸಂಕಷ್ಟವನ್ನು ತಂದೊಡ್ಡಿದೆ. ಜನರು, ಆಪ್ತರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ನಾನು ಶಾಸಕನಾಗಿ ಆಯ್ಕೆಯಾಗಲು ಹಗಲಿರುಳು ಶ್ರಮಿಸಿದ ಆಪ್ತರು ಸಹ ಇಂದು ಬಲಿಯಾಗುತ್ತಿರುವುದು ನನಗೆ ಆತಂಕ ಹಾಗೂ ನೋವನ್ನು ತಂದೊಡ್ಡಿದೆ. ಹೀಗಾಗಿ ಎಲ್ಲರನ್ನೂ ಕಾಪಾಡಿಕೊಳ್ಳಬೇಕು, ಧೈರ್ಯ ತುಂಬಬೇಕು ಎಂಬ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇನೆ. ಕೊರೊನಾ ಮೊದಲನೇ ಅಲೆಯೇ ಬೇರೆ, ಎರಡನೇ ಅಲೆಯೇ ಬೇರೆ. ಕರ್ನಾಟಕದ ಎಲ್ಲ ಕಡೆಗೂ ಬಹಳ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ನಮ್ಮ ಇಡೀ ಕ್ಷೇತ್ರ ಹಾಗೂ ಪಾಸಿಟಿವ್ ಬಂದಂತವರ ಮನೆಗಳಿಗೆ ವೈಯಕ್ತಿಕವಾಗಿ ಹಣ ಖರ್ಚು ಮಾಡಿ ಸ್ಯಾನಿಟೈಸ್ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಸಚಿವ ಸೋಮಶೇಖರ್‍ರವರು ನುಡಿದರು.

ಟ್ರಯಾಜ್ ಸೆಂಟರ್ ನಲ್ಲಿ ಸೂಕ್ತ ಮಾರ್ಗದರ್ಶನ: ಇಂದು ಕ್ಷೇತ್ರದಲ್ಲಿ ಹೇರೋಹಳ್ಳಿ, ರಾಜರಾಜೇಶ್ವರಿ ನಗರ ಹಾಗೂ ಕೆಂಗೇರಿ ಸೇರಿ ಮೂರು ಟ್ರಯಾಜ್ ಸೆಂಟರ್ ರನ್ನು ತೆರೆದಿದ್ದು, ಜನಸೇವಾ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ರನ್ನು ತೆರೆದಿದ್ದೇವೆ. ಇಲ್ಲಿ ವೈದ್ಯರು ಸೋಂಕಿತರಿಗೆ ಸೂಕ್ತ ಮಾರ್ಗದರ್ಶನ ನೀಡುವುದಲ್ಲದೆ, ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿ ಎಲ್ಲ ವ್ಯವಸ್ಥೆಗಳು ಇಲ್ಲಿವೆ. ಇನ್ನೂ ನಾಲ್ಕು ಕಡೆ ಕೋವಿಡ್ ಕೇರ್ ಸೆಂಟರ್ ರನ್ನು ತೆರೆಯಲಿದ್ದೇವೆ. ಪಾಸಿಟಿವ್ ಬಂದ ತಕ್ಷಣ ಈ ಟ್ರಯಾಜ್ ಸೆಂಟರ್‍ಗಳಿಗೆ ಜನ ಹೋದರೆ ಸೂಕ್ತ ಮಾರ್ಗದರ್ಶನ ಸಿಗಲಿದೆ ಎಂದರು.

ಕ್ಷೇತ್ರದಲ್ಲಿ ಗುಣಮುಖರ ಸಂಖ್ಯೆ ಹೆಚ್ಚಳ: ನನ್ನ ಕ್ಷೇತ್ರದಲ್ಲಿ ಏಳೂವರೆ ಸಾವಿರ ಪಾಸಿಟಿವ್ ಬಂದಿದೆ. ಅದರಲ್ಲೀಗ ಆರೂವರೆ ಸಾವಿರದಷ್ಟು ಮಂದಿ ಗುಣಮುಖರಾಗಿದ್ದಾರೆ. ಯಾರೂ ಹೆದರಬೇಕಾದ ಅಗತ್ಯವಿಲ್ಲ. ಬಿಜಿಎಸ್ ಆಸ್ಪತ್ರೆಯಲ್ಲಿ ಸಹ ಸಾರ್ವಜನಿಕ ಬಳಕೆಗೆ 200 ಬೆಡ್ ಗಳನ್ನು ನೀಡಿದ್ದು, ಮುಖ್ಯಮಂತ್ರಿಗಳು ಮೂರ್ನಾಲ್ಕು ದಿನಗಳ ಹಿಂದೆ ಅದಕ್ಕೆ ಚಾಲನೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳಿಂದ ಶೇ. 50 ಬೆಡ್ ಗಳನ್ನು ಪಡೆಯಲಾಗಿದೆ ಎಂದು ಹೇಳಿದರು.

ST Somashekar A

1,300 ವಾರಿಯರ್ಸ್ ಗೆ ಸೌಲಭ್ಯ: ಕ್ಷೇತ್ರದಲ್ಲಿ ಜನರಿಗೆ ಸೇವೆ ಸಲ್ಲಿಸಲೆಂದೇ 1300 ವಾರಿಯರ್ಸ್ ಗಳನ್ನು ನೇಮಿಸಿದ್ದು, ಅವರಿಗೆ ಹೆಲ್ತ್ ಕಿಟ್, ಮಾಸ್ಕ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆಗೇ ಒದಗಿಸುತ್ತಿದ್ದೇನೆ. ಇನ್ನೆರೆಡು ದಿನದಲ್ಲಿ ವ್ಯಾಕ್ಸಿನೇಶನ್ ಸರಿಹೊಂದಲಿದೆ. ಬೇರೆ ಬೇರೆ ಕಡೆಗಳಿಂದ ಬಂದು ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡು ಬರುತ್ತಿರುವುದು ಸಮಸ್ಯೆಯಾಗುತ್ತಿದೆ. ಹೀಗಾಗಿ ಆಯಾ ಕ್ಷೇತ್ರದಲ್ಲಿ ಕ್ಷೇತ್ರದವರಿಗೆ ಆದ್ಯತೆ ನೀಡುವ ಕೆಲಸ ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರಾದ ಸಿ.ಟಿ. ರವಿ ಅವರು ಹಾಗೂ ಉಪ ಮುಖ್ಯಮಂತ್ರಿಗಳಾದ ಅಶ್ವತ್ಥ ನಾರಾಯಣ ರವರ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.

ಪ್ರತಿಪಕ್ಷದವರಿಗೆ ಸಚಿವರ ತಿರುಗೇಟು: ತಜ್ಞರು ಹೇಳಿರುವ ಪ್ರಕಾರ ನಡೆದುಕೊಳ್ಳಬೇಕು. ಲಾಕ್ ಡೌನ್ ಅನ್ನು ಇನ್ನೂ ಎಂಟು ದಿನಗಳ ಕಾಲ ವಿಸ್ತರಣೆ ಮಾಡಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಕೊರೊನಾ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಕಾಂಗ್ರೆಸ್ ಮೊದಲಿನಿಂದಲೂ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಾ ಬಂದಿದೆ. ಅವರಿಗೆ ವಿರೋಧ ಮಾಡಲು ಏನಾದರೂ ವಿಷಯ ಬೇಕು. ಹೀಗಾಗಿ ಈಗ ಲಸಿಕೆ ಬಗ್ಗೆ ಮಾತನಾಡುತ್ತಾ, ಕೊರತೆ ಆಗಿರೋ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವರಾದ ಸೋಮಶೇಖರ್ ಅವರು ಪ್ರತಿಪಕ್ಷದವರಿಗೆ ತಿರುಗೇಟು ನೀಡಿದರು.

FotoJet 7 20

ಬದುಕು ಕಟ್ಟಿಕೊಳ್ಳಲು ಅವರಿಗೆ ನೆರವಾಗಬೇಕು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರಾದ ಸಿ.ಟಿ. ರವಿ ಅವರು ಮಾತನಾಡಿ, ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ವೈರಸ್ ಗಿಂತಲೂ ಮುಂದೆ ಸಾಗಲು ಆಗಲಿಲ್ಲ. ಅಮೆರಿಕದಂತಹ ಮುಂದುವರೆದ ದೇಶಗಳೇ ಇದರಿಂದ ತಪ್ಪಿಸಿ ಕೊಳ್ಳಲು ಆಗಲಿಲ್ಲ. ದೇಶವಿದೇಶಗಳಿಂದ ಸಹಾಯ ಕೋರಿದರೂ, ವೈದ್ಯರು ಹಗಲಿರುಳು ಶ್ರಮಿಸಿದರೂ ಎಲ್ಲರನ್ನೂ ಉಳಿಸಿಕೊಳ್ಳಲು ಆಗಲಿಲ್ಲ. ಉಳಿದವರ ನೆರವಿಗಾದರೂ ನಾವು ಧಾವಿಸಬೇಕಿದೆ. ಇಂದು 9 ಸಾವಿರ ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ಪೂರೈಕೆ ಮಾಡಿದರೂ ಸಹ ಬೇಡಿಕೆ ಮುಟ್ಟಲು ಕಷ್ಟವಾಗುತ್ತಿದೆ. ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ವಿದೇಶಗಳಿಂದಲೂ ಸಹ ಸಹಕಾರ ಪಡೆದು ಆಕ್ಸಿಜನ್ ಸಹಿತ, ಔಷಧಗಳನ್ನು ಆಮದು ಮಾಡಿಸಿಕೊಳ್ಳುತ್ತಿದ್ದಾರೆ. ವೈದ್ಯರೂ ಸಹ ಹಗಳಿರುಳು ಶ್ರಮಿಸುತ್ತಿದ್ದಾರೆ. ಹೀಗಾಗಿ ಇದರ ವಿರುದ್ಧ ಸಂಘಟಿತರಾಗಿ ಹೋರಾಡೋಣ ಎಂದು ತಿಳಿಸಿದರು.

CT RAVI 1 1

ಜನರ ಜೊತೆ ಇರುವುದು ನಮ್ಮ ಕರ್ತವ್ಯ: ಕೊರೊನಾ ಸಂಕಷ್ಟದ ಕಾಲದಲ್ಲಿ ನಾವು ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಚಿವರಾದ ಸೋಮಶೇಖರ್ ಅವರು ಅತ್ಯಂತ ಮಾನವೀಯತೆ ಹಾಗೂ ಔದಾರ್ಯದ ಕಾರ್ಯವನ್ನು ಮಾಡುತ್ತಿದ್ದಾರೆ. ಇದು ಎಲ್ಲರ ಕರ್ತವ್ಯ ವಾಗಬೇಕು ಸಹ. ಬದುಕು ಕಟ್ಟಿಕೊಳ್ಳಲು ಅವರಿಗೆ ನೆರವಾಗಬೇಕಿದೆ. ಎಸ್ ಟಿ ಸೋಮಶೇಖರ್ ಅವರು ಕ್ಷೇತ್ರದ ಜನರ ಜೊತೆ ತಾವಿದ್ದೇವೆ ಎಂದು ಸಹಾಯ ಮಾಡುತ್ತಿದ್ದಾರೆ. ಜನರ ಜೊತೆ ಇರುವುದು ನಮ್ಮ ಕರ್ತವ್ಯ. ಜೊತೆಗೆ ಜನರಿಗೆ ಮಾನಸಿಕ ಧೈರ್ಯವನ್ನು ತುಂಬುವ ಕೆಲಸ ಮಾಡಬೇಕಿದೆ ಎಂದು ಸಿ.ಟಿ. ರವಿರವರು ಹೇಳಿದರು.

TAGGED:bengaluruCoronaCT RaviLockdownPublic TVSri Sri Sri Nanjavadhutha Mahaswamijiಎಸ್ ಟಿ ಸೋಮಶೇಖರ್ಕೊರೊನಾನಂಜಾವಧೂತ ಮಹಾಸ್ವಾಮೀಜಿಪಬ್ಲಿಕ್ ಟಿವಿ ST Somashekharಬೆಂಗಳೂರುಲಾಕ್‍ಡೌನ್ಸಿ.ಟಿ ರವಿ
Share This Article
Facebook Whatsapp Whatsapp Telegram

Cinema Updates

Darshans fans misbehave Case Pratham allegations Company Fans Association Clarification
ಕುಡಿದು ಗಲಾಟೆ ಮಾಡಿ ಖಾರ ಬನ್ ತಿಂದ ಕೇಸ್‌ ಇದು – ಪ್ರಥಮ್‌ಗೆ ಡಿ ಕಂಪನಿ ತಿರುಗೇಟು
Bengaluru City Cinema Karnataka Latest Main Post
ramya 4
ನಂಬರ್ ಇಲ್ಲ, ಸಂಪರ್ಕದಲ್ಲೂ ಇಲ್ಲ, ದರ್ಶನ್‌ಗೆ 100% ಜವಾಬ್ದಾರಿ ಇದೆ: ರಮ್ಯಾ
Cinema Crime Latest Main Post Sandalwood
ramya 2
ರೇಣುಕಾಸ್ವಾಮಿಗೂ ಇವ್ರಿಗೂ ಏನ್ ವ್ಯತ್ಯಾಸ? – `ಡಿ’ ಬಾಸ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು
Bengaluru City Cinema Crime Latest Main Post Sandalwood
Nagalakshmi Chowdary
`ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ
Bengaluru City Cinema Districts Karnataka Latest Top Stories
Ramya 5
`ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ
Bengaluru City Cinema Latest Main Post Sandalwood

You Might Also Like

AYYANA GOWDA
Chamarajanagar

ಚಾಮರಾಜನಗರ | ಉದ್ಯಮಿಯನ್ನು ಲಾಡ್ಜ್‌ಗೆ ಕರೆಸಿ ರೈಡ್‌ – 3.70 ಲಕ್ಷ ದೋಚಿ ಪರಾರಿಯಾದ ಪಿಎಸ್ಐಗಾಗಿ ಶೋಧ

Public TV
By Public TV
1 hour ago
Dharmasthala 5
Dakshina Kannada

ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – 13 ಸ್ಥಳ ಗುರುತು ಮಾಡಿದ ದೂರುದಾರ

Public TV
By Public TV
2 hours ago
Lorry collides with car two dead on the spot three seriously injured Siruguppa 2
Bellary

ಸಿರುಗುಪ್ಪ| ಕಾರಿಗೆ ಲಾರಿ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

Public TV
By Public TV
2 hours ago
01 13
Big Bulletin

ಬಿಗ್‌ ಬುಲೆಟಿನ್‌ 28 July 2025 ಭಾಗ-1

Public TV
By Public TV
2 hours ago
02 15
Big Bulletin

ಬಿಗ್‌ ಬುಲೆಟಿನ್‌ 28 July 2025 ಭಾಗ-2

Public TV
By Public TV
2 hours ago
03 10
Big Bulletin

ಬಿಗ್‌ ಬುಲೆಟಿನ್‌ 28 July 2025 ಭಾಗ-3

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?