ಅನಾಥ ಶವದ ವಿಧಿವಿಧಾನ ನೆರವೇರಿಸಿದ ಗ್ರಾಮ ಪಂಚಾಯಿತಿ ಸದಸ್ಯರು

Public TV
1 Min Read
MDK 2

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಮಾರುಕಟ್ಟೆಯಲ್ಲಿ ಅನಾಥವಾಗಿ ಜೀವನ ನಡೆಸುತ್ತಿದ್ದ ಗೌರಮ್ಮ ಎಂಬವರು ಅನಾರೋಗ್ಯಕ್ಕೆ ತುತ್ತಾಗಿ ಗುರುವಾರ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಡಿಕೇರಿಯಲ್ಲಿ ಶವಸಂಸ್ಕಾರ ಮಾಡಲು ಹಿಂದೇಟು ಹಾಕಲಾಗಿತ್ತು.

ಕಾರ್ಯಪ್ರವೃತ್ತರಾದ ಸುಂಟಿಕೊಪ್ಪ ಗ್ರಾಮ ಪಂಚಾಯತಿ ಪೌರಕಾರ್ಮಿಕ ರಾಮಚಂದ್ರ ಮತ್ತು ಇತರ ಸಿಬ್ಬಂದಿ ಮೃತದೇಹವನ್ನು ಶನಿವಾರ ಸುಂಟಿಕೊಪ್ಪಕ್ಕೆ ತಂದು ಹಿಂದೂ ರುದ್ರ ಭೂಮಿಯಲ್ಲಿ ಶವಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಬೂದಿ ಮುಚ್ಚಿದ ಶಬೀರ್: ಹಿಂದೂ ಪದ್ಧತಿಯಂತೆ ಸತ್ತ ಮೂರನೇ ದಿನಕ್ಕೆ ಬೂದಿ ಮುಚ್ಚುವ ಕಾರ್ಯ ನಡೆಯಬೇಕು. ಗೌರಮ್ಮ ಅವರು ಅನಾಥರಾಗಿದ್ದರಿಂದ ಕುಟುಂಬಸ್ಥರ ಬದಲಾಗಿ ಗ್ರಾಮ ಪಂಚಾಯತಿಯೇ ಅದರ ಹೊಣೆಗಾರಿಕೆ ಹೊತ್ತುಕೊಂಡಿತು. ಭಾನುವಾರ ಬೆಳಗ್ಗೆ ಮುಸ್ಲಿಂ ಸಮುದಾಯದ ಗ್ರಾಮ ಪಂಚಾಯತಿ ಸದಸ್ಯ ಎ. ಶಬೀರ್ ಅವರು ಬೂದಿಯನ್ನು ರಾಶಿ ಮಾಡಿ ಹಿಂದೂ ಪದ್ದತಿಯಂತೆ ಕಾರ್ಯವನ್ನು ತಮಗೆ ಗೊತ್ತಿದ್ದ ಮಟ್ಟಿಗೆ ನೆರವೇರಿಸಿದರು. ಅಲ್ಲದೇ ಜಗತ್ತಿನಲ್ಲಿ ಎಲ್ಲರೂ ಒಂದೇ ಹಿಂದೂ ಮುಸ್ಲಿಂ ಎಂದು ಭೇದಭಾವ ಮಾಡಬರದು ಸತ್ತ ದೇಹದ ಗೌರವ ಕೊಡುವುದು ಮುಖ್ಯ ಎಂದು ಹೇಳಿ ವಿಧದ ನೇರವೇರಿದರು.

ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್, ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಕೆ. ಪ್ರಸಾದ್, ಸದಸ್ಯ ಹೆಚ್.ಯು. ರಫೀಕ್ ಖಾನ್, ಪೌರಕಾರ್ಮಿಕ ರಾಮಚಂದ್ರ ರವರು ಈ ವಿಧಿವಿಧಾನದಲ್ಲಿ ಕೈ ಜೋಡಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

Share This Article
Leave a Comment

Leave a Reply

Your email address will not be published. Required fields are marked *