ಹೊತ್ತಿ ಉರಿದ ಗುಡಿಸಲು – 60 ಕ್ಕೂ ಹೆಚ್ಚು ಕುರಿ, ಮೇಕೆ ಬೆಂಕಿಗೆ ಬಲಿ

Public TV
1 Min Read
Chikkaballapur kuri

ಮನಕಲುಕುವಂತಿದೆ ಮೂಕಪ್ರಾಣಿಗಳ ಸಾವಿನ ದೃಶ್ಯ.

ಚಿಕ್ಕಬಳ್ಳಾಪುರ: 60 ಕ್ಕೂ ಹೆಚ್ಚು ಕುರಿ-ಮೇಕೆ ಜಾನುವಾರುಗಳು ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಪೂಲಮಾಕಲಹಳ್ಳಿ ನಡೆದಿದೆ.

ಗ್ರಾಮದ ಗಂಗಾಧರಪ್ಪ ಹಾಗೂ ತುಳಸಮ್ಮ ದಂಪತಿಗೆ ಕುರಿ, ಮೇಕೆ, ಹಸುಗಳೇ ಜೀವನಾಧಾರವಾಗಿದ್ದವು. ಕಾಡು ಮೇಡುಗಳಲ್ಲಿ ಅಲೆದು ಮೂಕ ಜೀವಿಗಳ ಜೊತೆಗೆ ಬದುಕು ಕಟ್ಟಿಕೊಂಡಿದ್ದ ಗಂಗಾಧರಪ್ಪ ನಿನ್ನೆ ಸಂಜೆ ಹುಲ್ಲಿನ ಮನೆಯಲ್ಲಿ ಜಾನುವಾರುಗಳನ್ನ ಕೂಡಿಹಾಕಿ ಮನೆಗೆ ಹೋಗಿದ್ದಾರೆ.

Chikkaballapur5

ಆಕಸ್ಮಿಕ ಬೆಂಕಿಯೋ ಅಥವಾ ಕಿಡಿಗೇಡಿಗಳ ಕೃತ್ಯದಿಂದಲೋ ಕರಿಗಳಿದ್ದ ಗುಡಿಸಲಿಗೆ ಬೆಂಕಿ ತಗುಲಿದೆ. 60ಕ್ಕೂ ಹೆಚ್ಚು ಕುರಿ, ಮೇಕೆಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆಯಿಂದ ಹಸುಗಳು ತಪ್ಪಿಸಿಕೊಂಡು ಪರಾರಿಯಾಗಿವೆ. ಗಂಗಾಧರಪ್ಪ ಕುಟುಂಬಕ್ಕೆ ಜಾನುವಾರುಗಳೇ ಬದುಕಾಗಿದ್ದು, ಸಾಲ ಸೋಲ ಮಾಡಿ ತಮ್ಮ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಜಾನುವಾರುಗಳ ಪೆÇೀಷಣೆಯಲ್ಲಿ ತೊಡಗಿದ್ದರು.

Chikkaballapur kuri2

ಕಳೆದ ರಾತ್ರಿ ಸಂಭವಿಸಿದ ದುರಂತದಲ್ಲಿ ಬದುಕನ್ನ ಬೆಂಕಿ ಬಲಿ ಪಡೆದಂತಿದೆ. ಇದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾದ ರೈತ ಗಂಗಾಧರಪ್ಪ ಕುಟುಂಬಕ್ಕೆ ಶಾಸಕ ಶಿವಶಂಕರರೆಡ್ಡಿ ಸಾಂತ್ವಾನದ ಮಾತುಗಳನ್ನು ಹೇಳಿದ್ದಾರೆ. ಸರ್ಕಾರದಿಂದ ಬರುವ ಪರಿಹಾರದ ಜೊತೆಗೆ ಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *