Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಕೈ ತಪ್ಪಿದ ಪ್ರಧಾನಿ ಹುದ್ದೆಯಿಂದ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿದ್ದು ಹೇಗೆ?

Public TV
Last updated: August 31, 2020 9:55 pm
Public TV
Share
3 Min Read
pranab
SHARE

ಅದು ಅಕ್ಟೋಬರ್ 31, 1984. ಕೋಲ್ಕತ್ತಾದಿಂದ ದೆಹಲಿಗೆ ಇಂಡಿಯನ್ ಏರ್ ಲೈನ್ಸ್ ಬೋಯಿಂಗ್ 737 ವಿಮಾನ ಹೊರಟಿತು. ರಾಜೀವ್ ಗಾಂಧಿ, ಪ್ರಣಬ್ ಮುಖರ್ಜಿ, ಶೀಲಾ ದೀಕ್ಷಿತ್, ಉಮಾಶಂಕರ್ ದೀಕ್ಷಿತ್, ಬಲರಾಮ್ ಜಖರ್, ಲೋಕಸಭಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಎ.ಬಿ ಅಗ್ನಿ ಖಾನ್ ಚೌಧರಿ ವಿಮಾನದಲ್ಲಿದ್ದರು‌.

ಅರ್ಧ ಘಂಟೆಯ ಹೊತ್ತಿಗೆ ರಾಜೀವ್ ಗಾಂಧಿ ಇಂದಿರಾ ಗಾಂಧಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಆರಂಭಿಕ ಆಘಾತದ ಸ್ವಲ್ಪ ಸಮಯದ ನಂತರ, ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಯಿತು.

Pranab Mukherjee 1

ಪ್ರಣಬ್ ಮುಖರ್ಜಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸುವಾಗ, ನೆಹರೂ ಕಾಲದಿಂದಲೂ, ಇಂತಹ ಪರಿಸ್ಥಿತಿಯಲ್ಲಿ ಮಧ್ಯಂತರ ಪ್ರಧಾನ ಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಸಂಪ್ರದಾಯವಿದೆ ಎಂದು ಹೇಳಿದರು. ನೆಹರೂ ಅವರ ನಿಧನದ ನಂತರ, ಸಂಪುಟದಲ್ಲಿ ಅತ್ಯಂತ ಹಿರಿಯ ಮಂತ್ರಿ ಗುಲ್ಜಾರಿ ಲಾಲ್ ನಂದಾ ಅವರನ್ನು ಹಂಗಾಮಿ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತು ಎಂದು ವಿವರಿಸಿದರು.

ಖ್ಯಾತ ಪತ್ರಕರ್ತ ರಶೀದ್ ಕಿಡ್ವಾಯ್ ಅವರು ತಮ್ಮ ಬರೆದ ’24 ಅಕ್ಬರ್ ರಸ್ತೆ ‘ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದಂತೆ, ಪ್ರಣಬ್ ಮುಖರ್ಜಿ ವಿಮಾನದ ಶೌಚಾಲಯದಲ್ಲಿ ಅಳಲು ಪ್ರಾರಂಭಿಸಿದರು. ಇಂದಿರಾ ಗಾಂಧಿಯವರ ಸಾವಿನಿಂದ ದುಃಖಿತರಾಗಿದ್ದರು. ಅವರ ಕಣ್ಣುಗಳು ಕೆಂಪಾಗಿದ್ದವು, ಆದ್ದರಿಂದ ಅವರು ವಿಮಾನದ ಹಿಂಭಾಗದಲ್ಲಿ ಕುಳಿತರು. ಇದಕ್ಕೂ ಮುನ್ನ ತಮ್ಮ ಅಭಿಪ್ರಾಯದಲ್ಲಿ ಪ್ರಣಬ್ ತಮ್ಮ ಹಿರಿತನವನ್ನು ರಾಜೀವ್‌ಗಾಂಧಿ ಅವರಿಗೆ ಒತ್ತಿ ಹೇಳಿದರು. ಈ ಮೂಲಕ ಪ್ರಧಾನಿಯಾಗುವ ಇಂಗಿತ ವ್ಯಕ್ತಪಡಿಸಿದರು.

B R Balakrishnan President Pranab Mukherjee

ಆದರೆ, ಇಂದಿರಾ ಗಾಂಧಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಿ.ಸಿ ಅಲೆಕ್ಸಾಂಡರ್ ತಮ್ಮ ಆತ್ಮಚರಿತ್ರೆಯಲ್ಲಿ ‘ಥ್ರೂ ದಿ ಕಾರಿಡಾರ್ಸ್ ಆಫ್ ಪವರ್: ಆನ್ ಇನ್ಸೈಡರ್ಸ್ ಸ್ಟೋರಿ’ ಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದ್ದು ರಾಜೀವ್ ಗಾಂಧಿಯನ್ನು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ಪ್ರಸ್ತಾಪವಾದ ಕೂಡಲೇ ಅವರನ್ನು ಬಲವಾಗಿ ಬೆಂಬಲಿಸಿದ ಮೊದಲ ವ್ಯಕ್ತಿ ಪ್ರಣಬ್ ಮುಖರ್ಜಿ.

ರಾಜೀವ್ ಗಾಂಧಿ ಚುನಾವಣೆಯಲ್ಲಿ ಜಯಗಳಿಸಿದ ನಂತರ ತಮ್ಮ ಸಂಪುಟವನ್ನು ರಚಿಸಿದಾಗ, ಪ್ರಣಬ್ ಮುಖರ್ಜಿ ಅವರಿಗೆ ಅಥವಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಯಾವುದೇ ಸ್ಥಾನವನ್ನು ನೀಡಲಾಗಲಿಲ್ಲ. ಅವರು ಪ್ರತ್ಯೇಕ ಪಕ್ಷವಾದ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ರಚಿಸಲು 1986 ರಲ್ಲಿ ಪಕ್ಷದಿಂದ ಹೊರಹೋಗಬೇಕಾಯಿತು. ಕಾಲಾಂತರದಲ್ಲಿ ಇದು ಕಾಂಗ್ರೆಸ್‌ನೊಂದಿಗೆ ವೀಲಿನವಾಯಿತು.

atal bihari vajpayee with pranab mukherjee 023

ಮೊದಲ ಬಾರಿ ರಾಜೀವ್ ಗಾಂಧಿ ಅವರಿಂದ ಪ್ರಧಾನಿ ಹುದ್ದೆಯಿಂದ ವಂಚಿತಗೊಂಡಿದ್ದ ಪ್ರಣಬ್ ಮುಖರ್ಜಿ ಎರಡನೇ ಬಾರಿ ಸೋನಿಯಗಾಂಧಿ ಅವರಿಂದ ವಂಚಿತರಾದರು. ಎರಡನೇ ಬಾರಿ ಬಹುತೇಕ ಪ್ರಣಬ್ ಮುಖರ್ಜಿ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು ಆದರೆ, ಮನಮೋಹನ್ ಸಿಂಗ್ ಅವರನ್ನು ಸೋನಿಯಾ ಆಯ್ಕೆ‌ ಮಾಡಿದ್ದರು. ಇಂದಿರಾಗಾಂಧಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ, ಡಾ.ಮನಮೋಹನ್ ಸಿಂಗ್ ಅವರನ್ನು ಆರ್‌ಬಿಐ ಗವರ್ನರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದರು.

ಪ್ರಣಬ್ ಮುಖರ್ಜಿ ತಮ್ಮ ಕೆಲವು ದೌರ್ಬಲ್ಯಗಳನ್ನು ಅರಿತುಕೊಂಡಿದ್ದರು. ರಾಜಕೀಯ ಜೀವನದ ಬಹುದೊಡ್ಡ ಭಾಗವನ್ನು ರಾಜ್ಯ ಸಭೆಯಲ್ಲಿ ಕಳೆದಿದ್ದೇ‌ನೆ, ಹಿಂದಿ ಮಾತನಾಡುವಾಗ ಉಂಟಾಗುತ್ತಿದ್ದ ತೊಡಕುಗಳು ತಮ್ಮ ತವರು ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿಲ್ಲ ಎನ್ನುವ ಬಗ್ಗೆ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು‌. ಪ್ರಧಾನಿ ಹುದ್ದೆಗೆ ಇವರು ಹೆಸರು ಕೇಳಿ ಬಂದು ಮತ್ತೊಬ್ಬರು ಪ್ರಧಾನಿಯಾದಗ, ‘ ಪ್ರಧಾನಿಗಳು ಬಂದು ಹೋಗುತ್ತಾರೆ ನಾನು ಯಾವಗಲೀ ಪ್ರಧಾನಿ ಎಂದು ಎಂದು ಆಪ್ತರ ಮುಂದೆ ತಮ್ಮನ್ನು ತಾವು ಗೇಲಿ‌ ಮಾಡಿಕೊಂಡಿದರಂತೆ. ಸುಮಾರು 50 ವರ್ಷಗಳ ರಾಜಕೀಯ ಜೀವನದಲ್ಲಿ, ಪ್ರಧಾನ ಮಂತ್ರಿಯನ್ನು ಹೊರತುಪಡಿಸಿ ಪ್ರತಿಯೊಂದು ಪ್ರಮುಖ ಹುದ್ದೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ‌.

pranab mukherjee 1517363629

ರಾಷ್ಟ್ರಪತಿಯಾಗುವುದು ಸೋನಿಯಾ ಗಾಂಧಿಗೆ ಇಷ್ಟವಿರಲಿಲ್ಲ
2012 ರಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಬ್ ಮುಖರ್ಜಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಮಾಡಿತು. ಆದಾಗ್ಯೂ, ರಾಜಕೀಯ ವ್ಯಾಖ್ಯಾನಕಾರರು ಹೇಳುವಂತೆ ಆರಂಭದಲ್ಲಿ ಸೋನಿಯಾ ಗಾಂಧಿ ರಾಷ್ಟ್ರಪತಿ ಹುದ್ದೆಗೆ ಉಪಾಧ್ಯಕ್ಷರಾಗಿದ್ದ ಹಮೀದ್ ಅನ್ಸಾರಿ ಆಯ್ಕೆ ಮಾಡುವ ಇರಾದೆಯಲ್ಲಿದ್ದರು.

ಪ್ರಣಬ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಪರಿಗಣಿಸದಿರಲು ಎರಡು ಕಾರಣಗಳಿವೆ. ಒಂದು, ಸರ್ಕಾರದಲ್ಲಿ ಪ್ರಣಬ್ ಮುಖರ್ಜಿ ಪಾತ್ರ ಅನಿವಾರ್ಯವಾಗಿತ್ತು. ಮತ್ತೊಂದು ಕಾರಣ ಸೋನಿಯಾ ಗಾಂಧಿಗೆ ಅವರ ನಿಷ್ಠೆಯ ಬಗ್ಗೆ ಇನ್ನೂ ನಂಬಿಕೆಯಿಲ್ಲ ಇರಲಿಲ್ಲ ಎನ್ನಲಾಗಿದೆ.

pranab sonia gandhi

ಮುಖರ್ಜಿ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದಂತೆ “ರಾಷ್ಟ್ರಪತಿ ಹುದ್ದೆಗೆ ನೀವು ಹೆಚ್ಚು ಅರ್ಹ ವ್ಯಕ್ತಿ ಎಂದು ಸೋನಿಯಾ ಹೇಳಿದ್ದರು. ಆದರೆ ಸರ್ಕಾರವನ್ನು ನಡೆಸುವಲ್ಲಿ ನಿಮಗೂ ಪ್ರಮುಖ ಪಾತ್ರವಿದೆ ಎಂಬುದನ್ನು ನೀವು ಮರೆಯಬಾರದು. ನಿಮ್ಮ ಯಾವುದೇ ಆಯ್ಕೆಗಳನ್ನು ನೀವು ಸೂಚಿಸಬಹುದೇ” ಎಂದು ಸೋನಿಯಗಾಂಧಿ ಕೇಳಿದರಂತೆ. ಇದನ್ನು ಕೇಳಿದ ಪ್ರಣಬ್ ಮುಖರ್ಜಿ ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿಯನ್ನಾಗಿ ತಮ್ಮನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬಹುದು ಎಂದು ಯೋಚಿಸಿದರಂತೆ. ಆದರೆ ಮರುದಿನ ಮನಮೋಹನ್‌ ಸಿಂಗ್‌, ಕಾಂಗ್ರೆಸ್ ಕೋರ್ ಸಮಿತಿ ಸಭೆ ನಿಮ್ಮನ್ನು ಪಕ್ಷದಿಂದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಪ್ರಣಬ್‌ ಅವರಿಗೆ ತಿಳಿಸಿದರಂತೆ.

TAGGED:pranab mukherjeepresidentprime ministerSonia Gandhiಕಾಂಗ್ರೆಸ್ಪ್ರಣಬ್ ಮುಖರ್ಜಿಪ್ರಧಾನ ಮಂತ್ರಿರಾಷ್ಟ್ರಪತಿಸೋನಿಯಾ ಗಾಂಧಿ
Share This Article
Facebook Whatsapp Whatsapp Telegram

Cinema Updates

shivarajkumar
ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲ್ಲ: ಕೊನೆಗೂ ಮೌನ ಮುರಿದ ಶಿವಣ್ಣ
12 hours ago
smriti Irani e1500383222701
ಮತ್ತೆ ಬಣ್ಣ ಹಚ್ಚಿದ ಸ್ಮೃತಿ ಇರಾನಿ – 12 ವರ್ಷಗಳ ನಂತರ ಸೀರಿಯಲ್‌ಗೆ ರೀ ಎಂಟ್ರಿ
13 hours ago
darshan 1
‘ಅಂಬಿ’ ಕನ್ವರ್ ಲಾಲ್ ಲುಕ್‌ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್
13 hours ago
disha patani 3
ಹಾಲಿವುಡ್‌ನತ್ತ ಹೊರಟ ಬಾಲಿವುಡ್ ಬೋಲ್ಡ್ ಬ್ಯೂಟಿ ದಿಶಾ ಪಟಾನಿ!
15 hours ago

You Might Also Like

Auto Driver Lokesh Bellandur Hindi Woman Attacked By Slipper
Bengaluru City

ತಪ್ಪಿಲ್ಲದಿದ್ರೂ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ: ಆಟೋ ಚಾಲಕ

Public TV
By Public TV
4 minutes ago
Kanakapura Chirathe Bone
Bengaluru Rural

ಬೆಂಗಳೂರು ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ – ಬೋನ್ ಅಳವಡಿಸಿ ಪತ್ತೆ ಕಾರ್ಯಾಚರಣೆ

Public TV
By Public TV
39 minutes ago
Opal Suchata Chuangsri 2
Latest

Miss World | ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ

Public TV
By Public TV
42 minutes ago
Train
Bengaluru City

ಮಳೆ ಅಬ್ಬರ; 5 ತಿಂಗಳು ಬೆಂಗಳೂರು, ಮಂಗಳೂರು ರೈಲು ಸಂಚಾರ ಸ್ಥಗಿತ

Public TV
By Public TV
8 hours ago
D.K Shivakumar 2
Bengaluru City

ದ್ವೇಷ ಭಾಷಣ ಯಾರೇ ಮಾಡಿದ್ರೂ ಕಠಿಣ ಕ್ರಮ – ಸಿಎಂ ಸಿದ್ದರಾಮಯ್ಯ

Public TV
By Public TV
8 hours ago
mahesh joshi
Bengaluru City

ಮಹೇಶ್ ಜೋಶಿಗೆ ರಾಜ್ಯ ಸಚಿವ ಸ್ಥಾನಮಾನ ಸವಲತ್ತು ಹಿಂಪಡೆದ ಸರ್ಕಾರ

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?