ಹೊರ ಜಿಲ್ಲೆ, ಊರಿನಿಂದ ಬಂದ್ರೆ ಕಡ್ಡಾಯ ಕ್ವಾರಂಟೈನ್- ಗ್ರಾಮ ಪಂಚಾಯತ್‍ನಿಂದ ಊಟದ ವ್ಯವಸ್ಥೆ

Public TV
1 Min Read
CNG FINAL

ಚಾಮರಾಜನಗರ: ಜಿಲ್ಲೆಯ ಒಂದು ಗ್ರಾಮಕ್ಕೆ ಅಕ್ಕಪಕ್ಕದ ಹಳ್ಳಿಯವರು ಸಹ ಬರುವಂತಿಲ್ಲ. ಒಂದು ವೇಳೆ ಬಂದ್ರೆ ಗ್ರಾಮದ ಯಜಮಾನರಿಗೆ ವಿಷಯ ತಿಳಿಸುವುದು ಕಡ್ಡಾಯ. ಸಂಜೆ 6 ಗಂಟೆಯ ನಂತರ ಇಡೀ ಗ್ರಾಮವೇ ಸ್ವಯಂಲಾಕ್ ಡೌನ್. ಕೊರೊನಾದಿಂದ ಸ್ವಯಂ ರಕ್ಷಣೆಗೆ ಮುಂದಾಗಿದುವ ಮೂಲಕ ಚಾಮರಾಜನಗರ ಜಿಲ್ಲೆಗೆ ಮಾದರಿಯಾಗಿದೆ ಈ ಗ್ರಾಮ.

ಹಸಿರುವಲಯದಲ್ಲಿದ್ದ ಚಾಮರಾಜನಗರಲ್ಲಿ ಸದ್ಯ ಕೋವಿಡ್ -19 ದ್ವಿಶತಕ ದಾಟಿದೆ. ಈಗಾಗಲೇ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿ ಕೊರೊನಾದಿಂದ ಮೂವರು ಸಾವ್ನಪ್ಪಿದ್ದು, 40 ಸಕ್ರೀಯ ಪ್ರಕರಣಗಳಿವೆ. ತಾಲೂಕಿನ ಹಲವು ಗ್ರಾಮಗಳಿಗೆ ಹೊರಗಿನಿಂದ ಬಂದವರಿಗೆ ನಿಷೇದ ಹೇರಲಾಗಿದೆ. ಆದರೆ ಮುಳ್ಳೂರು ಗ್ರಾಮ ಬೇರೆ ಗ್ರಾಮಗಳಿಗೆ ಹೋಲಿಸಿದ್ರೆ ಡಿಫರೆಂಟ್.

CNG

ಈ ಗ್ರಾಮದಲ್ಲಿ ಸುಮಾರು 10ರಿಂದ 12ಸಾವಿರ ಜನರು ವಾಸ ಮಾಡುತ್ತಿದ್ದಾರೆ. ಅಲ್ಲದೆ 14 ವಿವಿಧ ಜಾತಿಯ ಜನರಿದ್ದಾರೆ. ಎಲ್ಲರೂ ಸಹ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಇಲ್ಲಿವರೆಗೂ ಮುಳ್ಳೂರು ಗ್ರಾಮದಲ್ಲಿ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಈ ಗ್ರಾಮಕ್ಕೆ ಅಕ್ಕ ಪಕ್ಕದ ಗ್ರಾಮಗಳಿಂದ ಬರುವವರ ಮಾಹಿತಿಯನ್ನ ಮುಖಂಡರಿಗೆ ನೀಡುವುದು ಕಡ್ಡಾಯವಾಗಿದೆ. ಯಾರೇ ಹೊರಗಿನಿಂದ ಬಂದ್ರು 14 ದಿನಗಳ ಕಾಲ ಕ್ವಾರೈಂಟನ್ ಆಗುವುದು ಕಡ್ಡಾಯವಾಗಿದ್ದು, ಅವರಿಗೆಲ್ಲಾ ಊಟದ ವ್ಯವಸ್ಥೆಯನ್ನ ಪಂಚಾಯಿತಿ ಮೂಲಕ ಪೂರೈಸಲಾಗುತ್ತಿದೆ.

ಗ್ರಾಮದಲ್ಲಿ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮಾತ್ರ ಅಂಗಡಿ-ಮುಂಗಟ್ಟು ಮತ್ತು ಇನ್ನಿತರೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿದ್ದು, ನಂತರ ಸ್ವಯಂ ಇಡೀ ಗ್ರಾಮವೇ ಲಾಕ್‍ಡೌನ್ ಆಗುತ್ತದೆ. ಮುಖಕ್ಕೆ ಮಾಸ್ಕ್ ಧರಿಸದಿದ್ದರೆ 100 ರೂಪಾಯಿ ದಂಡ ಜೊತೆಗೆ ಗ್ರಾಮದಲ್ಲಿ ಗುಂಪುಗೂಡುವುದನ್ನ ನಿಷೇಧಿಸುವ ಮೂಲಕ ಚಾಮರಾಜನಗ ಜಿಲ್ಲೆಯ ಇತರೆ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

CNG 1 1

ಗ್ರಾಮದ ಮುಖಂಡರ ಈಗಾಗಲೇ ಗ್ರಾಮದಲ್ಲಿ ಗ್ರಾಮಸಭೆ ನಡೆಸಿದ್ದು, ಈ ಮೇಲಿನ ಎಲ್ಲಾ ನಿರ್ಣಯಗಳಿಗೆ ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಂಡಿದ್ದಾರೆ. ಇದಕ್ಕೆ ಗ್ರಾಮದ ಜನರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನ ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಕೊರೊನಾ ಬರದಿರಲಿ ಎಂದು ಮುಖಂಡರು ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *