ಕೇವಲ ಅಪರಾಧಿಗಳಲ್ಲ ನಮ್ಮ ಹಕ್ಕುಗಳ ಬಗ್ಗೆಯೂ ಯೋಚಿಸಿ : ಕಣ್ಣೀರಿಟ್ಟ ನಿರ್ಭಯಾ ತಾಯಿ

Public TV
1 Min Read
Nirbhaya Mother Asha Devi

ನವದೆಹಲಿ: ಕೇವಲ ಅಪರಾಧಿಗಳ ಹಕ್ಕುಗಳ ಬಗ್ಗೆ ಯೋಚನೆ ಮಾಡುತ್ತಿದ್ದಿರಿ, ಸ್ವಲ್ಪ ಹಕ್ಕುಗಳ ಬಗ್ಗೆಯೂ ಒಮ್ಮೆ ಯೋಚಿಸಿ ಎಂದು ನಿರ್ಭಯಾ ತಾಯಿ ಆಶಾದೇವಿ ಕೋರ್ಟ್ ಹಾಲ್‍ನಲ್ಲೇ ಕಣ್ಣೀರಿಟ್ಟು ಅಸಮಧಾನ ಹೊರ ಹಾಕಿದ್ದಾರೆ.

ನಿರ್ಭಯಾ ಅತ್ಯಾಚಾರ ಪ್ರಕರಣ ದೋಷಿಗಳಿಗೆ ಡೆತ್ ವಾರೆಂಟ್ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನಾಯಾಧೀಶರ ಮುಂದೆ ಅರ್ಜಿದಾರೇ ಆಶಾದೇವಿ ಆಹವಾಲು ತೋಡಿಕೊಂಡಿದ್ದಾರೆ.

Nirbhaya Mother Asha Devi 1

ಆಶಾದೇವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಪಟಿಯಾಲ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನ್ಯಾ.ಸತೀಶ್ ಕುಮಾರ್ ಅರೋರಾ ವಿಚಾರಣೆ ನಡೆಸಿದರು. ಈ ವೇಳೆ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ನಾಲ್ವರು ಅಪರಾಧಿಗಳ ಪೈಕಿ ಇಬ್ಬರು ಕ್ಷಮದಾನಕ್ಕೆ ಅರ್ಜಿ ಸಲ್ಲಿಸಲಿದ್ದು ಇನ್ನಿಬ್ಬರು ನಿರಾಕರಿಸಿದ್ದಾರೆ ಎಂದು ಮಾಹಿತಿ ನೀಡಿದರು. ವಾದ ಆಲಿಸಿದ ಪೀಠ ದೋಷಿಗಳಿಗೆ ಹೊಸ ನೋಟಿಸ್ ನೀಡುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿ ಜನವರಿ ಏಳಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದರು.

ಸುಪ್ರೀಂಕೋರ್ಟ್ ಪ್ರಕರಣ ನಾಲ್ವರು ಆರೋಪಿಗಳಿಗೆ ಗಲ್ಲು ಖಾಯಂ ಮಾಡಿದೆ. ಪುನರ್ ಪರಿಶೀಲನಾ ಅರ್ಜಿಗಳು ರದ್ದಾಗಿದ್ದು ಅವರಿಗೆ ಶೀಘ್ರ ಡೆತ್ ವಾರೆಂಟ್ ಜಾರಿ ಮಾಡುವಂತೆ ಆಶಾದೇವಿ ಪರ ವಕೀಲರು ಮನವಿ ಮಾಡಿಕೊಂಡರು. ಈ ವೇಳೆ ಮಧ್ಯ ಪ್ರವೇಶಿಸಿದ ಆಶಾದೇವಿ ಕೇವಲ ಅಪರಾಧಿಗಳ ಹಕ್ಕು ಬಗ್ಗೆ ಮಾತನಾಡುತ್ತಿದ್ದಿರಿ. ನಮ್ಮ ಹಕ್ಕುಗಳು ಏನಾಗಬೇಕು ಅಂತಾ ಕಣ್ಣೀರಿಟ್ಟರು ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಸತೀಶ್ ಕುಮಾರ್ ಅರೋರಾ ನಾವು ಇಲ್ಲಿ ನ್ಯಾಯವನ್ನೇ ಎತ್ತಿ ಹಿಡಿಯಲು ಇದ್ದೇವೆ ಎಂದು ಪ್ರತಿಕ್ರಿಯಿಸಿದರು.

ಪ್ರಕರಣ ಸಂಬಂಧ ನಾಲ್ವರು ಅಪರಾಧಿಗಳು ಜೊತೆ 3:15 ಕ್ಕೆ ವಿಡಿಯೋ ಕಾನ್ಪರೆನ್ಸ್ ಮಾಡಿದ ನ್ಯಾಯಾಧೀಶರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜನವರಿ ಏಳರಂದು ನಡೆಯಲಿರುವ ವಿಚಾರಣೆ ವೇಳೆ ಡೆತ್ ವಾರೆಂಟ್ ನೋಟಿಸ್ ಜಾರಿ ಆಗುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *