ಇಂದು 2ನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್- ಲೋಕಸಭೆಯಲ್ಲಿ ನಿರ್ಮಲಾ ಲೆಕ್ಕ

Public TV
4 Min Read
BUDGET

– ಬಜೆಟ್ ನಿರೀಕ್ಷೆಗಳೇನು..?

ನವದೆಹಲಿ: ಲೋಕಸಭೆ ಸಮರದ ಬಳಿಕ ದೇಶ ಮತ್ತೊಂದು ಬಜೆಟ್ ಗೆ ಸಾಕ್ಷಿ ಆಗಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ ಆಗಲಿದೆ. ಮೊದಲ ಬಾರಿಗೆ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ಇಡೀ ದೇಶದ ಜನರು ಆಸೆಗಣ್ಣುಗಳಲ್ಲಿ ಬಜೆಟ್ ನಲ್ಲಿ ಏನಿರಬಹುದು ಎಂದು ನಿರೀಕ್ಷೆ ಮಾಡುತ್ತಿದ್ದಾರೆ.

Nirmala sitharaman

ಒಂದು ಕಡೆ ಐತಿಹಾಸಿಕ ಉದ್ಯೋಗ ನಷ್ಟವಾಗಿದೆ, ಕೃಷಿ ವಲಯ ಪಾತಾಳಕ್ಕೆ ಸಿಲುಕಿದೆ. ಬೆಳೆ ಹಾನಿ, ಬೆಂಬಲ ಬೆಲೆ ಇಲ್ಲದೆ ರೈತ ರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಆರ್ಥಿಕ ಹಿನ್ನಡೆ ಆಗಿದೆ. ಹೀಗೆ ಸಾಲು ಸಾಲು ಸವಾಲುಗಳ ನಡುವೆ ಇಂದು ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಾರೆ.

NarendraModi

ಕಳೆದ ಫೆಬ್ರವರಿ 1 ರಂದು ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ರೈಲ್ವೆ ಸಚಿವರಾಗಿದ್ದ ಪಿಯೂಷ್ ಗೊಯೇಲ್ ಬಜೆಟ್ ಮಂಡಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಆಗದೆ ಕೇವಲ ಲೇಖಾನುದಾನ ಪಡೆಯಲಾಗಿತ್ತು. ಈಗ ಮೋದಿ ನೇತೃತ್ವದ ಸರ್ಕಾರ ವಾಪಸ್ ಬಂದಿದ್ದ ಇಂದು ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದೆ.

irmalaSitharaman

ಚುನಾವಣಾ ಪೂರ್ವ ಬಜೆಟ್ ನಲ್ಲಿ ರೈತರನ್ನು ಟಾರ್ಗೆಟ್ ಮಾಡಲಾಗಿತ್ತು. ರೈತರ ಖಾತೆಗೆ 6 ಸಾವಿರ ಹಣ ಸೇರಿದಂತೆ ನೌಕರರ ವರ್ಗಕ್ಕೆ 5 ಲಕ್ಷಕ್ಕೆ ಆದಾಯ ಮಿತಿ ಹೆಚ್ಚಳ ಮಾಡುವ ಘೋಷಣೆ ಮಾಡಲಾಗಿತ್ತು. ಚುನಾವಣೆಯ ಹೊಸ್ತಿಲಲ್ಲಿ ಈ ಮೂಲಕ ಜನಪ್ರೀಯತೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಈಗ ಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿದ್ದು ರಾಷ್ಟ್ರೀಯತೆ ಸೇನೆ ಭದ್ರತೆ, ಯುವಕರು ಮಹಿಳೆಯರ ಮೇಲೆ ಹೆಚ್ಚು ಕೇಂದ್ರಿಕರಿಸಲಾಗಿತ್ತು. ಹಾಗಾಗಿ ಈ ಬಜೆಟ್ ನಲ್ಲಿ ಏನಿರಬಹುದು ಅನ್ನೊ ನೀರಿಕ್ಷೆ ಹೆಚ್ಚುವಂತೆ ಮಾಡಿದೆ. ಇದನ್ನೂ ಓದಿ: ಕನ್ನಡಿಗರ ಬೇಡಿಕೆಗಳೇನು?

money 2000 rs

ಇಂದಿನ ಬಜೆಟ್‍ನಲ್ಲಿ ಏನಿರಬಹುದು..?
ರಕ್ಷಣೆ
* ರಕ್ಷಣಾ ಇಲಾಖೆ ಸಚಿವರಾಗಿದ್ದ ಅನುಭವದ ಹಿನ್ನೆಲೆಯಲ್ಲಿ ಸೇನಾ ವಲಯದಲ್ಲಿ ಮಹತ್ವದ ಯೋಜನೆಗಳಿಗೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ನೀಡಬಹುದು
* ಮತ್ತಷ್ಟು ಯುದ್ಧ ವಿಮಾನಗಳು, ಸೇನಾ ಸಾಮಾಗ್ರಿಗಳ ಖರೀದಿಗೆ ಹಣ ಮೀಸಲಿಡಬಹುದು

Job 3

ಕಾರ್ಪೊರೇಟ್
* ಆರ್ಥಿಕ ಕ್ರಾಂತಿ ಭರವಸೆ ನೀಡಿರುವ ಮೋದಿ ಸರ್ಕಾರ ಈ ಬಾರಿ ಉದ್ಯೋಗ ಸೃಷ್ಠಿಗೆ ಹೆಚ್ಚಿನ ಆದ್ಯತೆ ನೀಡಬಹುದು
* ಕಾರ್ಪೊರೇಟ್ ತೆರಿಗೆ ದರವನ್ನು ಶೇ.30 ರಿಂದ ಶೇ. 25 ಇಳಿಸುವ ಮೂಲಕ ಹೆಚ್ಚು ಕೈಗಾರಿಕೆಗೆ ಪ್ರೋತ್ಸಾಹ ನೀಡುವುದು ಈ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬಹುದು
* ಪರ್ಯಾಯ ತೆರಿಗೆಯನ್ನು ಕನಿಷ್ಠ ಶೇ.18.5 ರಿಂದ ಶೇ.15 ಕ್ಕೆ ಕಡಿತಗೊಳಿಸುವುದು
* ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸಿ, ವ್ಯಕ್ತಿಗಳಿಗೆ ವಿನಾಯಿತಿ ನೀಡುವುದು

Women Farmers

ಕೃಷಿ
* ಕೃಷಿ ವಲಯದಲ್ಲಿ ಬಂಡವಾಳವನ್ನು ಪ್ರೋತ್ಸಾಹಿಸಲು ಸಾಲವನ್ನು ಖಾತರಿಪಡಿಸಲು ನಿಧಿಯನ್ನು ಸ್ಥಾಪಿಸುವುದು
* ಬರಗಾಲ ಸೂಕ್ಷ್ಮತೆ ಅರಿತು ಅಣೆಕಟ್ಟುಗಳು ಮತ್ತು ಕಾಲುವೆಗಳು, ಸೂಕ್ಷ್ಮ ನೀರಾವರಿ ವ್ಯವಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುವುದು
* ನದಿ ಜೋಡಣೆ ಯೋಜನೆ ಪ್ರಸ್ತಾಪ ಆಗಬಹುದು
* ಬೆಳೆಗಳ ಹಾನಿ ತಪ್ಪಿಸಲು ಶೀತಲ ಶೇಖರಣಾ ಘಟಕಗಳ ನಿರ್ಮಾಣಕ್ಕೆ ಸಹಾಯಧನ
* ಕಿಸಾಮ್ ಸಮ್ಮಾನ್ ಯೋಜನೆ ವಿಸ್ತರಣೆ
* ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ತುರ್ತು ಸಾಲದ ವ್ಯವಸ್ಥೆ, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು
* ರಸ ಗೊಬ್ಬರ ಹಂಚಿಕೆ ವ್ಯವಸ್ಥೆಯಲ್ಲಿ ಡಿಜಿಟಲೀಕರಣ
* 60 ವರ್ಷ ಮೆಲ್ಪಟ್ಟ ರೈತರು, ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ವ್ಯವಸ್ಥೆ
* ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಯೋಜನೆ

vlcsnap 2019 07 05 07h25m19s78 e1562292014785

ಮೂಲಭೂತ ಸೌಕರ್ಯ ವಲಯ
* ಬಜೆಟ್ ನಲ್ಲಿ ರಸ್ತೆಗಳ ಅಭಿವೃದ್ಧಿಗೆ ಶೇ.10 ರಿಂದ ಶೇ. 15ರಷ್ಟು ಬಂಡವಾಳ ಹೆಚ್ಚಳ
* ಪಶ್ಚಿಮ ಮತ್ತು ಪೂರ್ವ ಭಾರತವನ್ನು ಸಂಪರ್ಕಿಸುವ ಭಾರತ್ಮಾಲಾ ಯೋಜನೆ ಸೇರಿದಂತೆ ಪ್ರಮುಖ ರಸ್ತೆ ಯೋಜನೆಗಳಿಗೆ ಹೆಚ್ಚಿನ ಅನುದಾನ
* ಬಜೆಟ್ ನಲ್ಲಿ ಶೇ.10 ರಷ್ಟು ರೈಲ್ವೇ ಹೂಡಿಕೆಗಳನ್ನು ಹೆಚ್ಚಳ

bank

ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ
* ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಒದಗಿಸುವುದು
* ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಬೆಂಬಲಿಸಿ ಮೊಬೈಲ್ ಫೋನ್, ಎಕ್ಸೈಸ್ ಡ್ಯುಟಿ, ಟ್ಯಾಬ್ಲೆಟ್, ಕಂಪ್ಯೂಟರ್ ಗಳ ಸುಂಕ ಕಡಿಮೆಗೊಳಿಸುವುದು
* ಟೆಲಿಕಾಂ ಸೇವೆಗಳ ಈಗಿರುವ ಶೇ.18 ಜಿಎಸ್‍ಟಿ ದರವನ್ನು ಶೇ.12ಕ್ಕೆ ಕಡಿತಗೊಳಿಸುವುದು

prople

ರಿಯಲ್ ಎಸ್ಟೇಟ್
* ವಸತಿ ಸೇರಿದಂತೆ ಎಲ್ಲಾ ರಿಯಲ್ ಎಸ್ಟೇಟ್ ಯೋಜನೆಗಳ ವಿಳಂಬವನ್ನು ತಪ್ಪಿಸಲು ಏಕಮುಖ ಕ್ಲಿಯರೆನ್ಸ್ ಒದಗಿಸುವುದು
* ಹಣಕಾಸು, ಯೋಜನಾ ವೆಚ್ಚವನ್ನು ತಗ್ಗಿಸಲು ರಿಯಲ್ ಎಸ್ಟೇಟ್ ಗೆ ಮೂಲ ಸೌಕರ್ಯ ನೀಡಿ, ಕಡಿಮೆ ವೆಚ್ಚಕ್ಕೆ ಮನೆಗಳು ದೊರೆಯುವಂತೆ ಮಾಡುವುದು
* ಪ್ರಸ್ತುತ 12 ಪ್ರತಿ ಶತದಿಂದ ನಿರ್ಮಾಣ ಹಂತದಲ್ಲಿರುವ ಯೋಜನೆಗಳಿಗೆ ಜಿಎಸ್ ಟಿ ದರವನ್ನು ಕಡಿಮೆ ಮಾಡುವುದು
* ಮನೆ ಖರೀದಿಗೆ ಶೇ.12 ಜಿಎಸ್ಟಿಗೆ ದರವನ್ನು ಕಡಿಮೆ ಮಾಡಿ; ಸ್ಟಾಂಪ್ ಡ್ಯುಟಿ ಕಡಿತಗೊಳಿಸುವುದು

doctor

ವೈದ್ಯಕೀಯ
* 75 ನೂತನ ಏಮ್ಸ್ ಆಸ್ಪತ್ರೆಗಳ ನಿರ್ಮಾಣ
* ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಹೆಚ್ಚಳಕ್ಕೆ ಆದ್ಯತೆ

Share This Article
Leave a Comment

Leave a Reply

Your email address will not be published. Required fields are marked *