ಮಾಜಿ ಸಿಎಂ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ

Public TV
1 Min Read
modi gujarata ex cm copy

ಅಹಮದಾಬಾದ್: ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‍ರ ಕಾಲುಗಳನ್ನು ಮುಟ್ಟಿ ನಮಸ್ಕರಿಸುವ ಮೂಲಕ ಪ್ರಧಾನಿ ಮೋದಿ ಆಶೀರ್ವಾದ ಪಡೆದಿದ್ದಾರೆ.

ಗುಜರಾತನ ಅಡಲಜಿಯಲ್ಲಿ ಶಿಕ್ಷಣ ಭವನದ ಶಿಲಾನ್ಯಾಸ ಮಾಡಲು ಮೋದಿ ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ರಾಜಕೀಯ ಗುರು ಕೇಶುಭಾಯಿ ಪಟೇಲರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ಕೂಡಲೇ ಪಟೇಲರು ಪ್ರಧಾನಿಗಳನ್ನು ಅಪ್ಪಿಕೊಂಡು ಕುಶಲೋಪರಿ ವಿಚಾರಿಸಿದರು.

2001ರಲ್ಲಿ ಕೇಶುಭಾಯಿ ಪಟೇಲರು ತಮ್ಮ ಸಿಎಂ ಸ್ಥಾನವನ್ನು ಮೋದಿಯವರಿಗೆ ಬಿಟ್ಟುಕೊಟ್ಟಿದ್ದರು. 2001ರ ಭೂಕಂಪದ ಬಳಿಕ ಸರ್ಕಾರದ ಕ್ಷಮತೆ ಮತ್ತು ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಮಾಡಿದ್ದವು. 2001ರಲ್ಲಿ ಕೇಶುಭಾಯಿ ಪಟೇಲ್ ಗುಜರಾತಿಗೆ ಮಾರಕ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದರು. ಅಂದಿನ ಘಟನೆಯ ಬಳಿಕ ಮೋದಿ ಮತ್ತು ಕೇಶುಭಾಯಿ ಅವರ ನಡುವೆ ಎಲ್ಲವೂ ಸರಿ ಇರಲಿಲ್ಲ ಎಂದು ಹೇಳಲಾಗುತ್ತದೆ. ಆದ್ರೂ ಪ್ರಧಾನಿಗಳು ಮಾತ್ರ ಕೇಶುಭಾಯಿ ಅವರನ್ನು ರಾಜಕೀಯ ಗುರುಗಳು ಎಂದು ಭಾವಿಸುತ್ತಾರೆ.

ಕೇಶುಭಾಯಿ 1980ರಿಂದ 2012ರವರೆಗೆ ಬಿಜೆಪಿಯ ನಾಯಕರಾಗಿದ್ದರು. 1995ರಲ್ಲಿ ಕೇಶುಭಾಯಿ ನೇತೃತ್ವದಲ್ಲಿಯೇ ಚುನಾವಣೆಯನ್ನು ಎದುರಿಸಿ ಸರ್ಕಾರ ರಚಿಸಿದ್ದರು. 2012ರಲ್ಲಿ ಬಿಜೆಪಿಯಿಂದ ಹೊರಬಂದ ಕೇಶುಭಾಯಿ ‘ಗುಜರಾತ್ ಪರಿವರ್ತನ ಪಕ್ಷ’ ಕಟ್ಟಿದ್ದರು. ಇದಾದ ಬಳಿಕ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. 2014ರಲ್ಲಿ ಗುಜರಾತ್ ಪರಿವರ್ತನ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿದ್ದರು. 2017ರಲ್ಲಿ ಕೇಶುಭಾಯಿ ಪುತ್ರ ಪ್ರವೀಣ್ ನಿಧನದ ಬಳಿಕ ಪ್ರಧಾನಿ ಮೋದಿ ಖುದ್ದು ಆಗಮಿಸಿ ತಮ್ಮ ರಾಜಕೀಯ ಗುರುವಿಗೆ ಸಾಂತ್ವಾನ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *