ಪ್ರೀತಿ ತಂದಿಟ್ಟ ಆಪತ್ತು- ಒಂದು ಹುಡುಗಿಗಾಗಿ ಇಬ್ಬರ ಕಿತ್ತಾಟ..!

Public TV
1 Min Read
mdk love attack 2 1

ಮಡಿಕೇರಿ: ಲವ್ ವಿಚಾರದಲ್ಲಿ ಸೀನಿಯರ್-ಜೂನಿಯರ್ ನಡುವೆ ನಡೆಯುತ್ತಿದ್ದ ಜಗಳ ಈಗ ಒಬ್ಬನ ಜೀವಕ್ಕೆ ಕುತ್ತು ತಂದಿಟ್ಟಿದೆ. ಒಂದು ಹುಡುಗಿಗಾಗಿ ಇಬ್ಬರು ಕಿತ್ತಾಡಿ, ಈಗ ಓರ್ವ ಆಸ್ಪತ್ರೆ ಸೇರಿ ಸಾವು ನೋವಿನ ಮಧ್ಯೆ ಹೋರಾಡುತ್ತಿದ್ದಾನೆ.

ಮೈಸೂರಿನ ಎಸ್‍ಬಿಐ ಬ್ಯಾಂಕ್‍ನಲ್ಲಿ ಯೂನಿಟ್ ಮ್ಯಾನೇಜರ್ ಆಗಿರೋ ರಾಕೇಶ್ (26) ಹಲ್ಲೆಗೊಳಗಾದ ಯುವಕ. ಸೋಮವಾರಪೇಟೆ ತಾಲೂಕಿನ ಊರುಬೆಟ್ಟ ಗ್ರಾಮದ 17 ವರ್ಷದ ಅಪ್ರಾಪ್ತ, ರಾಕೇಶ್ ಮೇಲೆ ದೊಣ್ಣೆಯಿಂದ ಭಯಾನಕವಾಗಿ ಹಲ್ಲೆ ಮಾಡಿದ್ದಾನೆ. ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರ ಹುಡುಗಿ ಹಾಗೂ ರಾಕೇಶ್ ಪ್ರೀತಿಸುತ್ತಿದ್ದರು.

mdk love attack 2

ಆದ್ರೆ ಇವರಿಬ್ಬರ ಪ್ರೀತಿಗೆ ಅಪ್ರಾಪ್ತ ಎಂಟ್ರಿ ಕೊಟ್ಟಿದ್ದ. ಇದರಿಂದ ರಾಕೇಶ್ ಹಾಗೂ ಅಪ್ರಾಪ್ತ ಮಧ್ಯೆ ಕಳೆದ ಒಂದು ವರ್ಷದಿಂದಲೂ ಶೀತಲ ಸಮರ ನಡೆಯುತ್ತಲೇ ಇತ್ತು. ಮೊದಲೆಲ್ಲಾ ಫೋನ್‍ನಲ್ಲಿ ರಾಕೇಶ್ ಆ ಬಾಲಕನಿಗೆ ಬುದ್ದಿ ಹೇಳಿದ್ದ. ಆದ್ರೆ ಯಾವುದಕ್ಕೂ ಬಾಲಕ ಹೆದರದೇ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿದ್ದನು.

ಈ ಬಾಲಕನಿಗೆ ನೇರವಾಗಿ ಬುದ್ಧಿ ಹೇಳೋಣಾ ಎಂದು ಮಕ್ಕಳಗುಡಿ ಬೆಟ್ಟಕ್ಕೆ ರಾಕೇಶ್ ತೆರಳಿದ್ದನು. ಅಲ್ಲಿ ಬಾಲಕ ದೊಣ್ಣೆಯಿಂದ ರಾಕೇಶ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಹಲ್ಲೆಯಿಂದ ರಾಕೇಶ್‍ಗೆ ಗಂಭೀರ ಗಾಯಗಳಾಗಿದ್ದು ಆತ ಸಾವು ಬದುಕಿನ ಮಧ್ಯೆ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 mdk love attack 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *