ಐಟಿ ಕಂಪೆನಿಗಳಿಗೆ ಬೀಗ ಹಾಕುವಂತೆ ಆಗ್ರಹ, ಮಾನ್ಯತಾ ಟೆಕ್ ಪಾರ್ಕ್ ಬಳಿ ಕರವೇ ಕಾರ್ಯಕರ್ತರ ಪ್ರತಿಭಟನೆ

Public TV
1 Min Read
MANYATA TECH PARK COLLAGE

ಬೆಂಗಳೂರು: ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಬಂದ್ ಗೆ ಬೆಂಬಲ ನೀಡದ ಐಟಿ ಕಂಪನಿಗಳಿಗೆ ಬೀಗ ಹಾಕುವ ಎಚ್ಚರಿಕೆ ಹಿನ್ನಲೆಯಲ್ಲಿ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮಾನ್ಯತಾ ಟೆಕ್ ಪಾರ್ಕ್ ಬಳಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಅಂಗಡಿ ಮುಚ್ಚಿಸಲು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಒಳಗೆ ಐಟಿ ಉದ್ಯೋಗಿಗಳು ಹಾಗೂ ವಾಹನಗಳನ್ನು ಬಿಡದೆ ರಸ್ತೆಯಲ್ಲಿಯೇ ತಡೆದಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿ, ರಸ್ತೆಯಲ್ಲೇ ಧರಣಿ ನಡೆಸುತ್ತಿದ್ದಾರೆ.

MANYATA TECH PARK 4

ಐಟಿ ಕಂಪನಿ ಬಂದ್ ಮಾಡೋದಕ್ಕೆ ಹೇಳಿ ಎಂದು ಕರವೇ ಆಗ್ರಹಿಸಿದ್ದಾರೆ. ಆದ್ರೆ ಐಟಿ ಕಂಪನಿಯವರು ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ, ಬಂದ್ ಮಾಡಿದರೆ ಅರೆಸ್ಟ್ ಮಾಡುತ್ತೀವಿ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಪ್ರವೀಶ್ ಶೆಟ್ಟಿ ಹಾಗೂ ಪೊಲೀಸರ ಮಧ್ಯೆ ಗಲಾಟೆ ನಡೆದಿದೆ. ಅದ್ಹೇಗೆ ಅರೆಸ್ಟ್ ಮಾಡ್ತೀರಾ? ನಾವೇನ್ ಕಲ್ಲು ಹೊಡೆದಿದ್ವಾ, ನೀವೆನೂ ಹೇಳಿದ ಹಾಗೆ ಮಾಡೋದಕ್ಕೆ ಆಗಲ್ಲ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.

MANYATA TECH PARK 7

ಐಟಿ ಕಂಪನಿ ವಿರುದ್ಧ ಪ್ರವೀಣ್ ಶೆಟ್ಟಿ ವಾಗ್ಧಾಳಿ ನಡೆಸಿ ಇಲ್ಲಿನ ನೀರು, ಜಮೀನು, ಕರೆಂಟು ಎಲ್ಲವೂ ಬೇಕು. ಆದರೆ ಐಟಿಯವರು ನಮ್ಮ ಹೋರಾಟಕ್ಕೆ ಬೆಂಬಲ ಮಾತ್ರ ಕೊಡಲ್ಲ. ಬಾಗಿಲು ಮುಚ್ಚಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಬಂದ್ ಗೆ ಬೆಂಬಲಿಸದೆ ಇದ್ದರೆ ಮುಂದಿನ ಪರಿಸ್ಥಿತಿ ಗೆ ಅವರೇ ಹೊಣೆ ಎಂದು ಹೇಳಿದ್ದಾರೆ.

ಇದಕ್ಕೆ ಮಾನ್ಯತಾ ಟೆಕ್ ಪಾರ್ಕ್ ಮ್ಯಾನೇಜರ್ ಪ್ರತಿಕ್ರಿಯಿಸಿ, ಐಟಿ ಕಂಪನಿ ಕ್ಲೋಸ್ ಇದೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ನೀರಿನ, ನಾಡಿನ ಸಮಸ್ಯೆ ಬಂದಾಗ ಐಟಿಬಿಟಿ ಬೆಂಬಲವಿದೆ ಎಂದು ಹೇಳಿದ್ದಾರೆ.

MANYATA TECH PARK 5

MANYATA TECH PARK 6

MANYATA TECH PARK 2

MANYATA TECH PARK 3

MANYATA TECH PARK 8

MANYATA TECH PARK 9

MANYATA TECH PARK 1

Share This Article
Leave a Comment

Leave a Reply

Your email address will not be published. Required fields are marked *