ಈ ಸಮಸ್ಯೆಯಿಂದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿ ಓಡಾಡ್ತಿದ್ದಾನೆ ಕಲಾವಿದ..!

Public TV
2 Min Read
GDG BELAKU 1

ಗದಗ: 10 ವರ್ಷಗಳ ಹಿಂದೆ ಜಿಲ್ಲೆಯ ಯುವಕ ಅದ್ಭುತ ಕಲಾವಿದ ಹಾಗೂ ಫೇಮಸ್ ಪೇಂಟರ್ ಆಗಿದ್ದ. ಅವರ ಕೈ ಕುಂಚದ ಬರಹಗಳ ನೆನಪುಗಳನ್ನ ಇಂದಿಗೂ ಮರೆಯುವಂತಿಲ್ಲ. ಆದ್ರೆ ಬಡತನ ಕುಟುಂಬದ ಏಳು ಬೀಳಿನ ತೊಳಲಾಟ ದಿಂದ ಬರಹದ ಕೈ ಕುಂಚ ಅವನ ಹಣೆಯ ಬರಹವನ್ನೆ ವಿಧಿ ಅಳುಕಿಸಿ ಅರೆ ಹುಚ್ಚನಂತೆ ಮಾಡಿದೆ. ಆ ಫೇಮಸ್ ಪೇಂಟರ್ ಕೈಗೆ ಮತ್ತೆ ಕುಂಚಕೊಡಲು ಸ್ಥಳೀಯರು ಒಟ್ಟಾಗಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಮೊರೆಹೊಗಿದ್ದಾರೆ.

ಹೌದು. 33 ವರ್ಷದ ಈ ವ್ಯಕ್ತಿಯ ಹೆಸರು ಅರುಣ್ ಸೋಮಪ್ಪ ಟಪಾಲಿ. ಇವರು ಗದಗ ಜಿಲ್ಲೆಯ ರೋಣ ಪಟ್ಟಣದ ನಿವಾಸಿ. ಸುಮಾರು 10 ವರ್ಷಗಳ ಹಿಂದೆ ರೋಣ ಸುತ್ತಮುತ್ತಲಿನ ಭಾಗದಲ್ಲಿ ಈ ಅರುಣ್ ಟಪಾಲಿ ಫೇಮಸ್ ಪೇಂಟರ್ ಎಂದೆ ಪ್ರಖ್ಯಾತಿಯಾಗಿದ್ದರು. ಈ ಪೇಂಟರ್ ಅರುಣ್ ಕಡೆಯಿಂದ ಶಾಲೆ, ಕಚೇರಿಗಳು, ಅಂಗಡಿಗಳು ಸೇರಿದಂತೆ ಅನೇಕ ಬೋರ್ಡ್ ಗಳು, ಮನೆಗಳಿಗೆ ಬಣ್ಣ ಹಚ್ಚುವ ಮೂಲಕ ಝಗಮಗಿಸುತ್ತಿದ್ದವು.

ಶಾಲೆಗಳಲ್ಲಿ ನಕಾಶೆ ಬಿಡಿಸುವುದು, ವಾಹನಗಳ ನಂಬರ್ ಪ್ಲೇಟ್ ಬರೆಸಲು, ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಕಲಾ ಚತುರನಾಗಿದ್ದರು. 10 ವರ್ಷಗಳ ಹಿಂದೆ ಇವರ ಕೈ ಕುಂಚದಿಂದ ಬಿಡಿಸಿದ ಚಿತ್ರಗಳು, ಬೋರ್ಡ್ ಗಳ ಛಾಯೆ ಇನ್ನೂ ಮಾಸಿಲ್ಲ. ಅಷ್ಟೊಂದು ಫೇಮಸ್ ಪೇಂಟರ್ ಆಗಿದ್ದರು. ಇವರು ಈ ಹಂತಕ್ಕೆ ತರಲು ಕಾರಣ ಕುಟುಂಬದ ಬಡತನದ ಅಸಹಾಯಕತೆ ಜೊತೆಗೆ ಪ್ರೀತಿ ಮಾಯೇ ಇವರನ್ನು ಅರೆ ಹುಚ್ಚನಂತೆ ಆಗಿರುವುದನ್ನ ಕಂಡು ಸ್ಥಳಿಯರು ಮಮ್ಮಲ ಮರಗುವಂತಾಗಿದೆ.

GDG BELAKU 2

ಪೇಂಟರ್ ಅರುಣ್ ಸುಮಾರು 10 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದಾರೆ. ಇದಕ್ಕೆ ಕಾರಣ ಇವರು ಬಾಲ್ಯದಲ್ಲಿರುವಾಗಲೇ ತಾಯಿ ತೀರಿಕೊಂಡರು. ನಂತರ ಹಿರಿಯ ಸಹೋದರ, ನಂತರ ಸ್ವಲ್ಪ ವರ್ಷಗಳಲ್ಲಿ ಹಿರಿಯ ಸಹೋದರಿ ಮೃತರಾದರು. ಇದೇ ಸಂರ್ಭದಲ್ಲಿ ಪ್ರೀತಿಸಿದ ಹುಡುಗಿಯೂ ಇವರಿಂದ ದೂರವಾದ್ರು. ಹೀಗಾಗಿ ಇವರು ಮಾನಸಿಕ ಸಮತೋಲನ ಕಳೆದುಕೊಂಡು ಅರೆ ಹುಚ್ಚನಾಗಿ ಇಂದಿಗೂ ಬೀದಿ ಬೀದಿ ಅಲೆಯುತ್ತಿದ್ದಾರೆ.

GDG BELAKU 3

ಸುಮಾರು 80 ವರ್ಷದ ತಂದೆ ಸೋಮಪ್ಪ ಹರಕು ಮುರುಕಲಿನ ಜೋಪಿಡಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಈ ಮುಪ್ಪಿನ ವಯಸ್ಸಿನಲ್ಲೂ ತಂದೆಯನ್ನು ನೋಡಿಕೊಳ್ಳಲಾಗದಷ್ಟು ಮಾನಸಿಕ ಅಸ್ವಸ್ಥನಾಗಿ ತಿರುಗುತ್ತಿದ್ದಾರೆ. ಇವರಿಗೆ ನನ್ನವರು ತನ್ನವರು ಎಂಬ ಯಾರ ಅರಿವಿಲ್ಲದೆ ಹಸಿದಾಗ ಭಿಕ್ಷೆ ಬೇಡಿ ತಿಂದು, ಬಸ್ ನಿಲ್ದಾಣ, ಯಾವುದಾದರೂ ಅಂಗಡಿ ಮುಂಭಾಗ, ಶಾಲಾ ಮೈದಾನ ಹೀಗೆ ಎಲ್ಲಂದರಲ್ಲಿ ಮಲಗುತ್ತಾ ದಿನಕಳೆಯುತ್ತಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದು, ಅವರು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಇವರ ನೇರವಿಗೆ ಸದ್ಯ ಯಾರು ಇಲ್ಲದಂತಾಗಿದೆ. ಇನ್ನು ಇವರ ಸ್ಥಿತಿನೋಡಿ ಸ್ಥಳಿಯರೆಲ್ಲಾ ಸೇರಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ನೆರವು ಬಯಸಿದ್ದಾರೆ.

ಬೆಳಕು ಕಾರ್ಯಕ್ರಮ ಮೂಲಕ ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸಿದ್ರೆ, ಖಂಡಿತ ಮೊದಲಿನಂತೆಯೇ ಅರುಣ್ ಫೇಮಸ್ ಪೇಂಟರ್ ಆಗುತ್ತಾನೆ ಅಂತಿದ್ದಾರೆ. ಈ ಕಲಾವಿದನ ಬಾಳಲ್ಲಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಬೆಳಕಾಗಿ ಕಲಾ ಸೌಂದರ್ಯ ಮತ್ತೆ ಅರಳುವಂತೆ ಮಾಡಬೇಕು ಎಂಬುದು ಸ್ಥಳಿಯ ಭಿನ್ನವಾಗಿದೆ. ಅರುಣ್ ಟಪಾಲಿ ಅವರ ಮಾನಸಿಕ ಸುಧಾರಣೆ ಆಗುವವರೆಗೆ ಚಿಕಿತ್ಸೆ ಹಾಗೂ ಇರುವಿಕೆ ನೋಡಿಕೊಳ್ಳಲು ಗಜೇಂದ್ರಗಢ ಪಟ್ಟಣದ `ಬಾಪೂಜಿ ವಿದ್ಯಾಸಂಸ್ಥೆ ಮಂಧಮತಿ ಮಕ್ಕಳ ವಸತಿಯೂತ ವಿಶೇಷ ಶಾಲೆ’ ಯ ಕಾರ್ಯದರ್ಶಿ ರಾಜು ಸೂರ್ಯವಂಶಿ ಎಂಬವರು ಮುಂದಾಗಿರುವುದು ಹೆಮ್ಮೆಯ ಸಂಗತಿ.

https://www.youtube.com/watch?v=gF9wvwOOZts

Share This Article
Leave a Comment

Leave a Reply

Your email address will not be published. Required fields are marked *