ಸುಸೂ ಬಂತೆಂದು ಜೀಪಿನಿಂದ ಇಳಿದ ಆರೋಪಿ ಪೊಲೀಸ್ರಿಂದ ಎಸ್ಕೇಪ್!

Public TV
1 Min Read
ACCUDED

ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿ ಪರಾರಿಯಾಗಿರೋ ಘಟನೆಯೊಂದು ನಗರದಲ್ಲಿ ನಡೆದಿದೆ.

ಕುಖ್ಯಾತ ರೌಡಿ ಶೀಟರ್ ಪ್ರಶಾಂತ್ ಕುಮಾರ್ ಎಸ್ಕೇಪ್ ಅದ ಅರೋಪಿಯಾಗಿದ್ದು, ಶನಿವಾರ ರಾತ್ರಿ ಕೆಆರ್ ಪುರ ಬಳಿಯ ಐಟಿಐ ಗೇಟ್ ಬಳಿ ಈತ ಪರಾರಿಯಾಗಿದ್ದಾನೆ.

ಪ್ರಕರಣವೊಂದರ ಸಂಬಂಧ ಆರೋಪಿ ಪ್ರಶಾಂತ್‍ನನ್ನು ಎಚ್‍ಎಎಲ್ ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿ ಕೃತ್ಯ ಎಸಗಿದ್ದ ಸ್ಥಳಗಳ ಮಹಜರು ಮಾಡಲು ಹೋಗಿದ್ರು. ಈ ವೇಳೆ ಮೂತ್ರ ವಿಸರ್ಜನೆ ಮಾಡಬೇಕು ಅಂತ ಆರೋಪಿ ಹೇಳಿದ್ದನು. ಹೀಗಾಗಿ ಪೊಲೀಸರು ರಸ್ತೆ ಬದಿ ಜೀಪ್ ನಿಲ್ಲಿಸಿ ಆತನನ್ನು ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಕರ್ತವ್ಯದಲ್ಲಿದ್ದ ಇಬ್ಬರು ಪೇದೆಗಳಾದ ಕಾಂತರಾಜು ಹಾಗೂ ರವಿಚಂದ್ರನನ್ನು ತಳ್ಳಿ ಪರಾರಿಯಾಗಿದ್ದಾನೆ.

ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *