ಧಾರ್ಮಿಕ ಸಂಸ್ಥೆಯನ್ನು ನಿರ್ವಹಿಸುವ ಹಕ್ಕು ಎಂದರೆ ನಿಯಮ ವ್ಯವಸ್ಥೆಯಿಲ್ಲದೇ ನಡೆಸುವುದು ಎಂದರ್ಥವಲ್ಲ. ಅದರ ಕಾರ್ಯನಿರ್ವಹಣೆಗೆ ಸ್ಪಷ್ಟವಾದ ವಿಧಾನ ಮತ್ತು ಮಾನದಂಡಗಳು ಇರಬೇಕು ಎಂದು ಹೇಳಿದೆ. ಇದನ್ನೂ ಓದಿ: ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ
ಕೇರಳದ (Kerala) ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಕುರಿತ ಅರ್ಜಿಗಳ ವಿಚಾರಣೆ ವೇಳೆ 9 ನ್ಯಾಯಾಧೀಶರ ಸಂವಿಧಾನಿಕ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ಎಂ.ಎಂ ಸುಂದರೇಶ್, ಅಹ್ಸನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ ವರಾಳೆ, ಆರ್ ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದರು.
ಇನ್ನು, ಹಝರತ್ ಖ್ವಾಜಾ ನಿಜಾಮುದ್ದೀನ್ ದರ್ಗಾಕ್ಕೆ ಸಂಬಂಧಿಸಿದ ಚಿಸ್ತಿ ನಿಝಾಮಿ ವಂಶಾವಳಿಯ ನೇರ ಪೂರ್ವಜ ವಂಶಸ್ಥ ಪೀರ್ಝಾದಾ ಸೈಯದ್ ಅಲ್ತಮಾಶ್ ನಿಝಾಮಿ ಪರವಾಗಿ ವಾದ ಮಂಡಿಸಿದ ವಕೀಲ ನಿಝಾಮ್ ಪಾಷಾ, ದರ್ಗಾ ಎಂದರೆ ಒಬ್ಬ ಸಂತನನ್ನು ಸಮಾಧಿ ಮಾಡಿದ ಸ್ಥಳ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇಸ್ಲಾಮ್ನಲ್ಲಿ, ಮರಣದ ನಂತರ ಸಂತರ ಸ್ಥಾನಮಾನದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ, ಆದರೆ ಸೂಫಿ ಪರಂಪರೆಯಲ್ಲಿ ಸಂತರ ಸಮಾಧಿ ಇರುವ ಸ್ಥಳಕ್ಕೆ ಅಪಾರ ಭಕ್ತಿ ಮತ್ತು ಗೌರವ ಇದೆ ಎಂದು ಹೇಳಿದರು. ಧಾರ್ಮಿಕ ಸಂಸ್ಥೆಯಲ್ಲಿ ಪ್ರವೇಶವನ್ನು ನಿಯಂತ್ರಿಸುವ ಹಕ್ಕು ನಿರ್ವಹಣೆಯ ಭಾಗವಾಗಿದೆ ಎಂದು ಅವರು ವಾದಿಸಿದರು.ಇದನ್ನೂ ಓದಿ: ಆಪರೇಷನ್ ಸಿಂಧೂರ ಆ್ಯನಿವರ್ಸರಿ ಹೊತ್ತಲ್ಲೇ ಭಾರತಕ್ಕೆ ಬರುತ್ತಿದೆ 4ನೇ ಸುದರ್ಶನ

