– ಕೇಂದ್ರ ಹೊಸ ಆಲೋಚನೆಯಿಂದ ಹೊರಗುಳಿದಿದೆ: ಖರ್ಗೆ
ನವದೆಹಲಿ: ಬಜೆಟ್ನಲ್ಲಿ (Union Budget 2026) ದೇಶದ ನಿಜವಾದ ಬಿಕ್ಕಟ್ಟುಗಳನ್ನು (Indias Real Crises) ನಿರ್ಲಕ್ಷಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು (Rahul Gandhi) ಟೀಕಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬಜೆಟ್ನಲ್ಲಿ ಭಾರತದ ನಿಜವಾದ ಬಿಕ್ಕಟ್ಟುಗಳ ಬಗ್ಗೆ ಗಮನಹರಿಸಿಲ್ಲ. ಯುವಕರಿಗೆ ಉದ್ಯೋಗವಿಲ್ಲ, ಉತ್ಪಾದನೆ ಕುಸಿಯುತ್ತಿದೆ, ರೈತರು ಸಂಕಷ್ಟದಲ್ಲಿದ್ದಾರೆ. ಉಳಿತಾಯ ಕುಸಿಯುತ್ತಿದೆ, ಜಾಗತಿಕ ಆಘಾತಗಳು ಎದುರಾಗುತ್ತಿವೆ. ಹೂಡಿಕೆದಾರರು ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಒಂದು ಚೊಂಬು ಕೊಟ್ಟಿದ್ದಾರೆ: ಬಜೆಟ್ನಿಂದ ಅನ್ಯಾಯ ಆಗಿದೆ ಎಂದ ಸಿದ್ದರಾಮಯ್ಯ
ಮೋದಿ ಸರ್ಕಾರ ಹೊಸ ಆಲೋಚನೆಗಳಿಂದ ಹೊರಗುಳಿದಿದೆ: ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವವರು (Mallikarjun Kharge) ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ, ಮೋದಿ ಸರ್ಕಾರವು ಹೊಸ ಆಲೋಚನೆಗಳಿಂದ ಹೊರಗುಳಿಯುತ್ತಿದೆ. ಭಾರತದ ಮಹತ್ವದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸವಾಲುಗಳ ಬಗ್ಗೆ ಬಜೆಟ್ ಉತ್ತರಿಸುವುದರ ಬದಲು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಎಂದು ಹೇಳಿದ್ದಾರೆ.
ಈ ಬಜೆಟ್ ಬಡವರಿಗೆ ಏನನ್ನೂ ನೀಡುವುದಿಲ್ಲ. ಅವರು ಹಣದುಬ್ಬರವನ್ನು ನಿಯಂತ್ರಿಸಲು ಯಾವುದೇ ಪರಿಹಾರ, ಸಕಾರಾತ್ಮಕ ಸಲಹೆ, ಕ್ರಮಗಳನ್ನು ಮಂಡಿಸಿಲ್ಲ. ಭಾರತಕ್ಕೆ ವ್ಯಾಪಾರ ಅನಿಶ್ಚಿತತೆಯು ಒಂದು ಪ್ರಮುಖ ಸವಾಲಾಗಿದೆ ಎಂದು ಆರ್ಥಿಕ ಸಮೀಕ್ಷೆ ಸೂಚಿಸುತ್ತದೆ. ಬಜೆಟ್ ಈ ಸಮಸ್ಯೆಯನ್ನು ಒಪ್ಪಿಕೊಳ್ಳುವುದಿಲ್ಲ. ಅದೇ ರೀತಿ, ರೂಪಾಯಿ ಮೌಲ್ಯ ಕುಸಿತವನ್ನು ಪರಿಹರಿಸಲು ಯಾವುದೇ ಯೋಜನೆ ಇಲ್ಲ.
ದೇಶದ ಉಳಿತಾಯದಲ್ಲಿನ ಕುಸಿತ ಮತ್ತು ವೈಯಕ್ತಿಕ ಸಾಲದ ಹೊರೆಯನ್ನು ಸಹ ನಿರ್ಲಕ್ಷಿಸಲಾಗಿದೆ. ಹೆಚ್ಚುತ್ತಿರುವ ವಿದ್ಯಾವಂತರ ನಿರುದ್ಯೋಗ ಬಿಕ್ಕಟ್ಟಿಗೆ ಬಜೆಟ್ನಲ್ಲಿ ಯಾವುದೇ ಪರಿಹಾರವಿಲ್ಲ ಎಂದಿದ್ದಾರೆ. ಇದನ್ನೂ ಓದಿ: Union Budget 2026 | ಕರ್ನಾಟಕಕ್ಕೆ ಸಿಕ್ಕಿದ್ದೇನು? – ಈಡೇರದ ನಿರೀಕ್ಷೆಗಳೇನು?

