ಹಂಪಿಯಲ್ಲಿ ವೈಭವದಿಂದ ಜರುಗಿದ ಜೋಡಿ ರಥೋತ್ಸವ- ಬೆಳಗಾವಿಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

Public TV
1 Min Read
bly

ಬಳ್ಳಾರಿ/ಗದಗ/ಬೆಳಗಾವಿ: ಮಂಗಳವಾರದಂದು ಐತಿಹಾಸಿಕ ವಿಶ್ವ ವಿಖ್ಯಾತ ಹಂಪಿಯ ಹಂಪಮ್ಮ ವಿರುಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಸಂಭ್ರಮ ಸಡಗರಿಂದ ಜರುಗಿತು.

BLG JATRE 1

ಸಾಮಾನ್ಯವಾಗಿ ನಾಡಿನೆಲ್ಲೆಡೆ ಒಂದೆ ರಥವನ್ನು ಎಳೆದು ರಥೋತ್ಸವ ಆಚರಿಸಿದ್ರೆ ಹಂಪಿಯಲ್ಲಿ ಮಾತ್ರ ಜೋಡಿ ರಥೋತ್ಸವ ನಡೆಯುವುದು ವಿಶೇಷ. ರಥೋತ್ಸವದ ಅಂಗವಾಗಿ ಹಂಪಿಯ ವಿರುಪಾಕ್ಷೇಶ್ವರರಿಗೆ ವಿಶೇಷವಾದ 8 ಕೆಜಿಯ ವಜ್ರ ಖಚಿತ ಕಿರೀಟ ಧಾರಣೆ ಮಾಡಲಾಗಿತ್ತು. ಸಂಜೆ ಜರುಗಿದ ರಥೋತ್ಸವದಲ್ಲಿ ನಾಡಿನ ಲಕ್ಷಾಂತರ ಭಕ್ತರು ಭಾಗವಹಿಸಿ ರಥವನ್ನು ಎಳೆದು ವಿರುಪಾಕ್ಷೇಶ್ವರನ ದರ್ಶನ ಪಡೆದರು. ಗದಗದ ಪ್ರಸಿದ್ಧ ತೋಂಟದಾರ್ಯ ಮಠದ ಜಾತ್ರೆ ಕೂಡ ವಿಜೃಂಭಣೆಯಿಂದ ನಡೆಯಿತು.

GDG JATRE 2

ಬೆಳಗಾವಿಯ ಬಸವೇಶ್ವರ ಜಾತ್ರೆಯ ರಥೋತ್ಸವದ ವೇಳೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಗೋಕಾಕ್‍ನ ಹಿರೇನಂದಿ ಗ್ರಾಮದಲ್ಲಿ ನಡೆದಿದೆ. ಜಾತ್ರೆಯ ನೂಕುನುಗಲ್ಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ 55 ವರ್ಷದ ಕಲಯ್ಯ ಮಠದ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GDG JATRE 1

BLG JATRE 2

bly jathre 1

bly jathre 2

 

Share This Article
Leave a Comment

Leave a Reply

Your email address will not be published. Required fields are marked *