ಶಿವಮೊಗ್ಗದ ಆಯನೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ 6 ಬಲಿ

Public TV
1 Min Read
SMG ACCIDENT

ಶಿವಮೊಗ್ಗ: ನಗರದ ಸಮೀಪದ ಆಯನೂರು ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಟ್ಟು 6 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ವಿಫ್ಟ್ ಕಾರಿನಲ್ಲಿದ್ದ ಅಶೋಕ, ನವೀನ, ಕಾರ್ತಿಕ, ಮಾರಿಮುತ್ತು, ಕಿರಣ, ಕೇಶವ ಮೃತಪಟ್ಟ ವ್ಯಕ್ತಿಗಳು. ಮೃತಪಟ್ಟವರೆಲ್ಲರೂ ಹೊಸನಗರ ತಾಲೂಕು ಬ್ರಹ್ಮೇಶ್ವರ ಗ್ರಾಮದ ಅಂಬೇಡ್ಕರ್ ಕಾಲೋನಿಯವರು.

ಇವರು ಹೊಸನಗರದಿಂದ ಶಿವಮೊಗ್ಗಕ್ಕೆ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ಓವರ್ ಟೇಕ್ ಮಾಡುವ ಭರದಲ್ಲಿ ಸ್ವಿಫ್ಟ್ ಕಾರು ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 6 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕ್ಯಾಂಟರ್ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಲಾರಿಯ ಒಳಗೆ ನುಗ್ಗಿತ್ತು.

ಸ್ಥಳಕ್ಕೆ ಆಯನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

SMG ACCIDENT7

SMG ACCIDENT6

SMG ACCIDENT5

SMG ACCIDENT4

SMG ACCIDENT 3 1

SMG ACCIDENT 2 1

SMG ACCIDENT 1 2

Share This Article
Leave a Comment

Leave a Reply

Your email address will not be published. Required fields are marked *