ಹಾವೇರಿ: ಒಂದು ದೇವಸ್ಥಾನದ ಗರ್ಭಗುಡಿಯಲ್ಲಿ ನಾಗರಹಾವು ಪ್ರತ್ಯಕ್ಷವಾದ್ರೆ ಇನ್ನೊಂದು ದೇವಸ್ಥಾನದಲ್ಲಿ ನಿಧಿಯಾಸೆಯಿಂದ ದೇವಸ್ಥಾನದಲ್ಲಿನ ಮೂರ್ತಿಯನ್ನ ಧ್ವಂಸ ಮಾಡಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕಣವಿಸಿದ್ದಗೇರಿ ಗ್ರಾಮದ ಬಳಿ ಇರೋ ಕಣವಿಸಿದ್ದೇಶ್ವರ ದೇವಸ್ಥಾನದಲ್ಲಿ ಸುಮಾರು ಆರು ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ. ಮೂರ್ನಾಲ್ಕು ಗಂಟೆಗಳಿಂದ ದೇವಸ್ಥಾನದಲ್ಲಿನ ಈಶ್ವರಲಿಂಗುವಿನ ಬಳಿ ನಾಗರಹಾವು ಕುಳಿತುಕೊಂಡಿತ್ತು. ಈ ನಾಗರಹಾವನ್ನು ನೋಡಲು ನೂರಾರು ಗ್ರಾಮಸ್ಥರು ಆಗಮಿಸಿದ್ದರು. ದೇವಸ್ಥಾನದಲ್ಲಿ ಪ್ರತ್ಯಕ್ಷವಾಗಿರೋ ನಾಗರಹಾವು ಕಂಡು ಜನರು ಆಶ್ಚರ್ಯಗೊಂಡ್ರು.
ಎರಡು ಮೂರು ದಿನಗಳ ಹಿಂದೆ ಕಳ್ಳರು ದೇವಸ್ಥಾನದ ಬಳಿ ನಿಧಿಗಾಗಿ ಒಡಾಡಿದ್ದರು ಎನ್ನಲಾಗಿದೆ. ಹೀಗಾಗಿ ದೇವರ ನಾಗರಹಾವು ನಿಧಿ ಕಾಯಲು ಬಂದಿದೆ ಎಂದು ಸ್ಥಳೀಯರು ಮಾತನಾಡಿಕೊಳ್ತಿದ್ದಾರೆ.
ಹಾನಗಲ್ ತಾಲೂಕಿನ ಕಲಕೇರಿ ಗ್ರಾಮದ ಕಲ್ಮೆಶ್ವರ ದೇವರ ಮೂರ್ತಿಯನ್ನ ನಿಧಿಗಾಗಿ ಧ್ವಂಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
https://www.youtube.com/watch?v=lgah6v0kuQg&feature=youtu.be