ಮುಂಬೈ: ಮೇಘಾಲಯದಲ್ಲಿ ರಾಜಾ ರಘುವಂಶಿ ಹನಿಮೂನ್ ಮರ್ಡರ್ ಕೇಸ್ ಮಾಸುವ ಮುನ್ನವೇ ಮತ್ತೊಂದು ಅಂತಹದೇ ಘಟನೆ ಮಹಾರಾಷ್ಟ್ರದ (Maharashtra) ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಮದುವೆಯಾದ ಮೂರೇ ವಾರಕ್ಕೆ ಪತ್ನಿಯೇ ಪತಿಯನ್ನು ಕೊಡಲಿಯಿಂದ ಹೊಡೆದು ಹತ್ಯೆಗೈದಿದ್ದಾಳೆ.
ಅನಿಲ್ ಲೋಖಂಡೆ (50) ಕೊಲೆಯಾದ ಪತಿ. ರಾಧಿಕಾ ಲೋಖಂಡೆ (29) ಹತ್ಯೆಗೈದ ಆರೋಪಿ. ಇದನ್ನೂ ಓದಿ: ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿದ್ದರು ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ
ಮೇ23ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ (Sangli) ರಾಧಿಕಾ ಹಾಗೂ ಅನಿಲ್ ಲೋಖಂಡೆ ವಿವಾಹವಾಗಿತ್ತು. ಮಂಗಳವಾರ (ಜೂ.10) ರಾತ್ರಿ, ಇಬ್ಬರೂ ತೀವ್ರವಾಗಿ ಜಗಳವಾಡಿದ್ದರು. ಬಳಿಕ ಮಧ್ಯರಾತ್ರಿ ವೇಳೆಗೆ ಅನಿಲ್ ಲೋಖಂಡೆ ನಿದ್ರೆಗೆ ಜಾರಿದ್ದರು. ಈ ವೇಳೆ ಕೋಪದಲ್ಲಿ ರಾಧಿಕಾ ಲೋಖಂಡೆ ಕೊಡಲಿಯಿಂದ ಪತಿ ಅನಿಲ್ ತಲೆಗೆ ಹೊಡೆದು ಕೊಂದಿದ್ದಳು. ಸ್ಪಲ್ಪ ಸಮಯದ ಬಳಿಕ ರಾಧಿಕಾ ತನ್ನ ಸೋದರಸಂಬಂಧಿಗೆ ಕರೆ ಮಾಡಿ ಕೊಲೆಯ ಬಗ್ಗೆ ತಿಳಿಸಿದ್ದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಅಹಮದಾಬಾದ್ನ ವಸತಿ ಪ್ರದೇಶದಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ
ಪೊಲೀಸರು ಬುಧವಾರ ಆರೋಪಿ ರಾಧಿಕಾಳನ್ನು ಬಂಧಿಸಿದ್ದಾರೆ. ಬಿಎನ್ಎಸ್ ಸೆಕ್ಷನ್ 103 (1) ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.