ಜಮ್ಶೆಡ್ಪುರ: ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಡುವುದಿಲ್ಲ ಎಂದಿದ್ದಕ್ಕೆ ಆತನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿದ ಘಟನೆ ಮಾರ್ಚ್ 14ರಂದು ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಾಮ್ಸಿಂಗ್ ಸಿರ್ಕಾ(42), ಪಾನೂ ಕುಯಿ(40), ರಂಭಾ(17), ಕಂದೆ(12) ಹಾಗೂ ಸೋನಿಯಾ(8) ಮೃತ ದುರ್ದೈವಿಗಳು. ದೂರಿನಲ್ಲಿ 9 ಜನರ ಹೆಸರು ದಾಖಲಾಗಿದ್ದು, ಅದರಲ್ಲಿ ನಾಲ್ವರು ಪ್ರಭಾವಶಾಲಿ ಕುಟುಂಬದವರು ಎಂದು ಎಸ್ಐ ತೌಕೀರ್ ಅಲಾಮ್ ತಿಳಿಸಿದ್ದಾರೆ.
ಒಂಬತ್ತು ಆರೋಪಿಗಳಲ್ಲಿ ಒಬ್ಬಾತ ರಾಮ್ಸಿಂಗ್ನ ಮಗಳನ್ನು ನನಗೆ ಮದುವೆ ಮಾಡಿಕೊಡಿ ಅಂತಾ ಕೇಳಿಕೊಂಡಿದ್ದನು. ಆದ್ರೆ ರಾಮ್ಸಿಂಗ್ ಮಗಳು ಇನ್ನು ಚಿಕ್ಕವಳಿದ್ದಾಳೆ ಅಂತಾ ಹೇಳಿ ಆರೋಪಿಯ ಮನವಿಯನ್ನು ತಿರಸ್ಕರಿಸಿದ್ರು. ಇದರಿಂದ ಅವಮಾನಿತನಾದ ಆರೋಪಿ ರಾಮ್ ಸಿಂಗ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿದ್ದಾನೆ.
ಐವರನ್ನು ಕೊಲೆ ಮಾಡಿದ ನಂತರ ಅವರ ಮೃತದೇಹವನ್ನು ಆರೋಪಿ ತನ್ನ ಸಹಚರರ ಸಹಾಯದಿಂದ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದರು. ನಂತರ ರಾಮ್ ಸಿಂಗ್ ಮನೆಗೆ ಬರುವವರೆಗೂ ಕಾದು ಆತನನ್ನು ಕೂಡ ಕೊಲೆ ಮಾಡಿದ್ದಾನೆ. ನಂತರ ಆತನ ಮೃತದೇಹವನ್ನು ಕೂಡ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದಾರೆ ಎಂದು ಹೇಳಲಾಗಿದೆ.
ಐವರು ಸದಸ್ಯರನ್ನು 9 ಮಂದಿ ಕೊಲೆ ಮಾಡಿದ್ದಾರೆ. 9 ಜನ ಆರೋಪಿಗಳಲ್ಲಿ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಉಳಿದ ಆರೋಪಿಗಳು ರಾಜ್ಯದಿಂದ ಪರಾರಿಯಾಗಿದ್ದಾರೆ ಎಂದು ಎಸ್ಐ ಹೇಳಿದ್ದಾರೆ.
ಮಾರ್ಚ್ 24ರಂದು ಗುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತುಲಸೈ ಗ್ರಾಮದಿಂದ 3ಕಿ.ಮೀ ದೂರದಲ್ಲಿರುವ ಕಾಡಿನಲ್ಲಿ ರಾಮ್ ಸಿಂಗ್ ಸಿರ್ಕಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಇನ್ನೂ ಉಳಿದ ನಾಲ್ವರ ಮೃತದೇಹ 5 ಕಿ.ಮೀ ದೂರದಲ್ಲಿರುವ ಮತ್ತೊಂದು ಕಾಡಿನಲ್ಲಿ ದೊರೆಯಿತ್ತು ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.