ಚಂಡೀಗಢ: ಪಂಜಾಬ್ನ (Panjab) ಐವರು ಬಿಜೆಪಿ ನಾಯಕರಿಗೆ (BJP Leader) ಜೀವ ಬೆದರಿಕೆ ಇರುವುದಾಗಿ ಗುಪ್ತಚರ ಇಲಾಖೆ ವರದಿ ಮಾಡಿದ ಬಳಿಕ ಐವರಿಗೆ Y-ಶ್ರೇಣಿ ಭದ್ರತೆ (Y-Category Security) ಕಲ್ಪಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಗುಪ್ತಚರ ಇಲಾಖೆ (Intelligence Bureau) ವರದಿ ಆಧರಿಸಿ ಗೃಹ ಸಚಿವಾಲಯವು (Home Affairs Ministry) ಅಮರಿಕ್ ಸಿಂಗ್ ಅಲಿವಾಲ್, ಹರ್ಜಿಂದರ್ ಸಿಂಗ್, ಹರ್ಚಂದ್ ಕೌರ್, ಪ್ರೇಮ್ ಮಿತ್ತಲ್ ಹಾಗೂ ಕಮಲದೀಪ್ ಸೈನಿ ಐವರು ನಾಯಕರಿಗೆ ಭದ್ರತೆ ಕಲ್ಪಿಸಿದೆ. ಈ ಐವರು ನಾಯಕರು ಪಂಜಾಬ್ (Punjab) ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ಬಿಜೆಪಿ ಸೇರಿದ್ದರು. ಇದನ್ನೂ ಓದಿ: ಪೂರ್ಣ ಬಹಿಷ್ಕಾರಕ್ಕೆ BJP ಎಂಪಿಯಿಂದ ಕರೆ – ಮುಸ್ಲಿಮರ ವಿರುದ್ಧ ಯುದ್ಧ ಸಾರಲಾಗಿದೆ ಎಂದ ಓವೈಸಿ
ಹೀಗಿರಲಿದೆ Y-ಶ್ರೇಣಿ ಭದ್ರತೆ: ವೈ ಶ್ರೇಣಿ ಭದ್ರತೆಯು ದೇಶದ 4ನೇ ಹಂತದ ಭದ್ರತಾ ಶ್ರೇಣಿಯಾಗಿದೆ. ವೈ-ಶ್ರೇಣಿಯಲ್ಲಿ ಒಬ್ಬರು ಅಥವಾ ಇಬ್ಬರು ಎನ್ಎಸ್ಜಿ ಕಮಾಂಡೋಗಳು (NSG commandos) ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ 11 ಸಿಬ್ಬಂದಿಯನ್ನು ಒಳಗೊಂಡಿರುತ್ತದೆ.