ಹಾಸನ: ಯೂನಿಯನ್ ಬ್ಯಾಂಕ್ (Union Bank) ನೌಕರನೊಬ್ಬ ಗ್ರಾಹಕರ 40 ಲಕ್ಷ ರೂ. ಹಣವನ್ನು ವಂಚನೆ ಮಾಡಿರುವ ಪ್ರಕರಣ ಚನ್ನರಾಯಪಟ್ಟಣದ (Channarayapatna) ಆನೆಕೆರೆ ಗ್ರಾಮದಲ್ಲಿ ನಡೆದಿದೆ.
ದಂಡಿಗನಹಳ್ಳಿಯ ಎಂ.ಟಿ.ಜಯರಾಂ ಎಂಬ ಬ್ಯಾಂಕ್ನ ಹೊರಗುತ್ತಿಗೆ ನೌಕರ ವಂಚನೆ ಮಾಡಿದ ಆರೋಪಿಯಾಗಿದ್ದಾನೆ. 40 ಗ್ರಾಹಕರಿಗೆ ಸೇರಿದ ಒಟ್ಟು 40 ಲಕ್ಷ ರೂ. ಹಣವನ್ನು ವಂಚಿಸಿದ್ದಾನೆ. ಈತ 2019 ರಿಂದ ಬಿಸಿನೆಸ್ ಕರೆಸ್ಪಾಂಡೆನ್ಸ್ (BC) ಕೆಲಸ ಮಾಡುತ್ತಿದ್ದ. ಇದನ್ನೂ ಓದಿ: ಚಂದ್ರಯಾನ-3ರ ಯಶಸ್ಸಿಗೆ ಕೈಜೋಡಿಸಿದ ಬೀದರ್ನ ಕುರಿಗಾಯಿ ಸಹೋದರರು
ಗ್ರಾಮದ ಕಾಳಪ್ಪ ಎಂಬವರು ತಮ್ಮ ಪಾಸ್ಬುಕ್ ಎಂಟ್ರಿ ಮಾಡಿಸಿದಾಗ 50 ಸಾವಿರ ರೂ. ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅಕೌಂಟ್ನ ಸ್ಟೇಟ್ಮೆಂಟ್ ರೆಫೆರೆನ್ಸ್ ನಂಬರ್ ಪರಿಶೀಲಿಸಿದಾಗ ಬ್ಯುಸಿನೆಸ್ ಕರೆಸ್ಪಾಂಡೆನ್ಸ್ ಡಿವೈಸ್ನಿಂದ ಡ್ರಾ ಆಗಿರುವುದು ಬಯಲಾಗಿದೆ. ಬಳಿಕ ಎಲ್ಲರ ಖಾತೆಗಳನ್ನು ಪರಿಶೀಲಿಸಿದಾಗ 40 ಜನರ ಅಕೌಂಟ್ನಿಂದ ಹಣ ತೆಗೆದಿರುವುದು ಬೆಳಕಿಗೆ ಬಂದಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಹಕರು ಬ್ಯಾಂಕಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ಭರಣಿಕುಮಾರ್ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ತಮಿಳುನಾಡು ಮನವಿಗೆ ಆದೇಶ ನೀಡಲು ಸುಪ್ರೀಂ ನಕಾರ
Web Stories