Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲು: ವಿಶ್ವಾಸ ಗೆದ್ದ ಮೋದಿ!

Public TV
Last updated: July 20, 2018 11:36 pm
Public TV
Share
5 Min Read
1532105765 7187
SHARE

– ನನ್ನನ್ನು ಈ ಸ್ಥಾನದಿಂದ ಎದ್ದೇಳಿಸಲು 125 ಕೋಟಿ ದೇಶವಾಸಿಗಳಿಂದ ಮಾತ್ರ ಸಾಧ್ಯ
– ರಾಹುಲ್ ಬಲವಂತದ ಆಲಿಂಗನಕ್ಕೆ ಮೋದಿ ತಿರುಗೇಟು

ನವದೆಹಲಿ: ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲಾಗಿದೆ. ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ಮೋದಿ ಉತ್ತರ ನೀಡಿದ ಬಳಿಕ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮತದಾನಕ್ಕೆ ಅನುಮತಿ ನೀಡಿದರು. ಸರ್ಕಾರದ ಪರ 325 ಮತಗಳು ಬಿದ್ದರೆ, ಅವಿಶ್ವಾಸ ನಿರ್ಣಯದ ಪರ 126 ಮತ ಬಂದಿತು. ಸದನದಲ್ಲಿ ಈ ವೇಳೆ ಒಟ್ಟು 451 ಸದಸ್ಯರು ಹಾಜರಿದ್ದರು.

ಬಿಜೆಪಿ ಸರ್ಕಾರದ ವಿರುದ್ಧ ಟಿಡಿಪಿ (ತೆಲಗು ದೇಶಂ ಪಾರ್ಟಿ) ಅವಿಶ್ವಾಸ ಗೊತ್ತುವಳಿ ಮಂಡಿಸಿದ ಚರ್ಚೆಯಲ್ಲಿ ವಿರೋಧ ಪಕ್ಷದ ಎಲ್ಲಾ ನಾಯಕರು ಮಾತನಾಡಿದ್ದರು. ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ರಾಹುಲ್ ಗಾಂಧಿ ತಮ್ಮ ಭಾಷಣದ ಕೊನೆಗೆ ಪ್ರಧಾನಿ ಮೋದಿಯವರನ್ನು ಆಲಿಂಗನ ಮಾಡಿಕೊಂಡಿದ್ದರು. ರಾಹುಲ್ ಆಲಿಂಗನ ಬಗ್ಗೆ ತಮ್ಮ ಭಾಷಣದ ಆರಂಭದಲ್ಲೇ ಪ್ರತಿಕ್ರಿಯಿಸಿದ ಮೋದಿ, ನನ್ನ ಬಳಿ ಬಂದ ರಾಹುಲ್ ಗಾಂಧಿ ಏಳಿ ಎದ್ದೇಳಿ ಅಂದ್ರು. ನನ್ನನ್ನು ಈ ಸ್ಥಾನದಿಂದ ಎದ್ದೇಳಿಸಲು 125 ಕೋಟಿ ಜನರಿಂದ ಮಾತ್ರ ಸಾಧ್ಯ ಎಂದು ತಿರುಗೇಟು ನೀಡಿದರು.

325 MPs voted ‘No’ 126 voted ‘Ayes’,#NoConfidenceMotion against NDA Govt rejected pic.twitter.com/Z77dX4zCZ7

— ANI (@ANI) July 20, 2018

ಅವಿಶ್ವಾಸ ಮಾತು ಏಕೆ ಬಂತು ಎಂಬ ಪ್ರಶ್ನೆ ನನ್ನಲ್ಲಿ ಇನ್ನು ಇದೆ. ವಿಪಕ್ಷಗಳು ಮೋದಿ ಹಠಾವೋ ಎಂಬ ಉದ್ದೇಶದಿಂದ ಬಲ ಪ್ರದರ್ಶನಕ್ಕೆ ಮುಂದಾಗಿವೆ. ಇದು ಬಲ ಪ್ರದರ್ಶನ ಅಲ್ಲ, ಬಲವಂತದ ಪ್ರದರ್ಶನ ಅಂತಾ ವಾಗ್ದಾಳಿ ನಡೆಸಿದರು. ಯಾರು ಅಧಿಕಾರಕ್ಕೆ ಬರೋದಿಲ್ಲವೋ, ಅವರು ಅಹಂಕಾರವನ್ನು ಅಳವಡಿಸಿಕೊಂಡಿದ್ದಾರೆ. 2019ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿ ಪ್ರಧಾನಿ ಯಂತೆ ವ್ಯಂಗ್ಯ ಮಾಡಿದರು.

ವಿರೋಧ ಬಣಗಳು ಒಂದಾಗಿವೆ: ಕೇವಲ ಓರ್ವ ಮೋದಿಯನ್ನು ಹಿಂದಿಕ್ಕಿಲು ಎಲ್ಲ ವಿರೋಧ ಬಣಗಳು ಒಂದಾಗಿವೆ. ಪ್ರಧಾನಿ ಕುರ್ಚಿ ಏರಲು ರಾಹುಲ್ ಗಾಂಧಿ ಆತುರರಾಗಿದ್ದಾರೆ. ಕೆಲವರು ತಾವು ಶಿವಭಕ್ತರು ಅಂತಾ ಹೇಳಿಕೊಳ್ಳುತ್ತಿದ್ದಾರೆ. ನಾನು ಕೂಡ ಶಿವದೇವನನ್ನು ನಂಬುತ್ತೇನೆ ಮತ್ತು ಆರಾಧಿಸುತ್ತೇನೆ. ಇಂದು ಅದೇ ಶಿವನಲ್ಲಿ 2024ರಲ್ಲಿ ರಾಹುಲ್ ಇದೇ ರೀತಿ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಿ ಎಂದು ಕೇಳುತ್ತೇನೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ತಾವೇ ಅಧಿಕಾರಕ್ಕೆ ಬರೋದು ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ದೇಶದಲ್ಲಿ ಈಗಾಗಲೇ ಮುಳುಗಿದೆ. ಕಾಂಗ್ರೆಸ್ ಜೊತೆ ಹೋಗುವವರು ಮುಳಗಲಿದ್ದೀರಿ, ಹಾಗಾಗಿ ಅವರ ಜೊತೆ ಹೋಗುವುದನ್ನು ನಿಲ್ಲಿಸಿ ಅಂದ್ರು.

ನಮ್ಮದು ಕೆಲಸ ಮಾಡುವ ಸರ್ಕಾರ. ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಎಲ್ಲ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರ ಮಾಡಬಹುದಿತ್ತು ಆದ್ರೆ ಮಾಡಲಿಲ್ಲ. ಜನ್‍ಧನ್ ಯೋಜನೆಯಲ್ಲಿ ಬ್ಯಾಂಕ್ ನೋಡದವರು ಖಾತೆಗಳನ್ನು ಹೊಂದಿದ್ದಾರೆ. ಇದೇ ವೇಳೆ ಸರ್ಕಾರದ ಯೋಜನೆ ಕಾರ್ಯಕ್ರಮಗಳ ಉದಾಹರಣೆಯನ್ನು ನೀಡುವ ಮೂಲಕ ವಿರೋಧ ಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದರು.

#WATCH PM Modi says, "I had read a statement- "who says we don't have the numbers." Look at the arrogance. When in 1999 someone stood outside Rashtrapati Bhavan and said- we have 272 & more joining. Atal Ji's govt was destabalised and they never formed the govt: PM in Lok Sabha" pic.twitter.com/EG5U7lC6KI

— ANI (@ANI) July 20, 2018

ಡೋಕ್ಲಾಂ ವಿಷಯದ ಬಗ್ಗೆ ಗೊತ್ತಿದ್ದರೆ ಮಾತ್ರ ಮಾತನಾಡಿ. ಗೊತ್ತಿಲ್ಲವೆಂದ್ರೆ ಮಾತನಾಡಲು ಹೋಗಬಾರದು. ಎರಡು ದೇಶಗಳ ವಿಷಯದ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ದೇಶದ ಭದ್ರತೆಯ ವಿಷಯದಲ್ಲಿ ಸಣ್ಣತನ ತೋರಿಸಬಾರದು. ರೆಫೆಲ್ ಮಿಸೈಲ್ ವಿಚಾರದಲ್ಲಿಯೂ ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ. ದೇಶದ ಭದ್ರತೆಯ ಬಗ್ಗೆ ಸ್ವಲ್ಪವೂ ಜವಾಬ್ದಾರಿಗಳು ನಿಮಗೆ ಇಲ್ಲವಾ? ಎಂದು ಪ್ರಶ್ನಿಸಿದರು. ರೆಫೆಲ್ ವಿಚಾರದಲ್ಲಿ ಕಾಂಗ್ರೆಸ್ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ರೆಫೆಲ್ ಒಪ್ಪಂದದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಈ ವೇಳೆ ವಿರೋಧ ಪಕ್ಷದ ನಾಯಕರು ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಲು ಮುಂದಾದರು. ವಿರೋಧ ನಾಯಕರ ಗಲಾಟೆ ನೋಡಿ ಒಂದು ಕ್ಷಣ ಆಕ್ರೋಶಗೊಂಡ ಪ್ರಧಾನಿಗಳು ಎಷ್ಟು ಚೀರಾಡುತ್ತೀರೋ ಚೀರಾಡಿ. ಇದು ಸತ್ಯವನ್ನು ಮರೆ ಮಾಡುವ ಪ್ರಯತ್ನವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಸೈನಿಕರಿಗೆ ಅವಮಾನ ಮಾಡಬೇಡಿ: ರೆಫೆಲ್ ಒಪ್ಪಂದ ಎರಡು ಜವಾಬ್ದಾರಿ ಸರ್ಕಾರಗಳ ನಡುವೆ ಆಗಿದೆ. ವಿರೋಧ ಪಕ್ಷದ ನಾಯಕರು ದೇಶದ ಸೇನಾಧಿಕಾರಿಗಳಿಗೆ ಬಳಸಿರುವ ಮಾತುಗಳು ತುಂಬಾ ಕೆಳಮಟ್ಟದಲ್ಲಿತ್ತು. ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ಅವಮಾನ ಮಾಡಿದ್ದೀರಿ. ನಿಮಗೆ ಬೈಯ್ಯುವ ಹಾಗಿದ್ದೀರಿ ನಿಮ್ಮ ಮುಂದೆ ನಾನು ನಿಂತಿದ್ದೇನೆ. ನನಗೆ ನೀವು ಬೈಯಬಹುದು, ದೇಶದ ಸೈನಿಕರಿಗಾಗಿ ನಾನು ಎಲ್ಲವನ್ನು ಸಹಿಸಿಕೊಳ್ಳುತ್ತೇನೆ. ಆದ್ರೆ ದೇಶದ ಸೈನಿಕರಿಗೆ ಅವಮಾನ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

What did the Congress do to Charan Singh ji, what did they do to Chandra Shekhar ji, what did they do to Deve Gowda ji, what did they do to IK Gujral ji: PM Modi in Lok Sabha #NoConfidenceMotion pic.twitter.com/03Xy2q6q2z

— ANI (@ANI) July 20, 2018

ಈ ಮೊದಲು ದೇವೇಗೌಡರ ಸರ್ಕಾರ ಉಳಿಸಿ ಅವಮಾನಿಸಿದರು. ನಂತರ ಐ ಕೆ ಗುಜ್ರಾಲ್ ಸರ್ಕಾರವನ್ನು ಉರುಳಿಸಿದರು. ಕಾಂಗ್ರೆಸ್ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಎರಡರೆಡು ಬಾರಿ ಅವಿಶ್ವಾಸವನ್ನು ಮಂಡಿಸಿತ್ತು. ವೋಟಿಗೆ ಬದಲು ನೋಟು ಅಂತಾ ಮಾಡಿದ್ದು ಎಲ್ಲರಿಗೂ ಗೊತ್ತಿದೆ ಎಂದು ಇತಿಹಾಸದ ಉದಾಹರಣೆಗಳನ್ನು ನೀಡುವ ಮೂಲಕ ವಿರೋಧಿಗಳು ತಿವಿದರು.

ಕಣ್ಣಸನ್ನೆ: ರಾಹುಲ್ ಗಾಂಧಿ ನನಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅಂತಾ ಸವಾಲು ಹಾಕುತ್ತಾರೆ. ಆದ್ರೆ ನಮಗೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ನಮಗೆ ಸಾಧ್ಯವಿಲ್ಲ. ನೀವು ಕೇವಲ ನಾಮದಾರ್ ನಾವು ಕಾಮದಾರ್ ಎಂದು ತಿರುಗೇಟು ನೀಡಿದರು. ಈ ಹಿಂದೆ ಕಾಂಗ್ರೆಸ್ ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದ ಜಯಪ್ರಕಾಶ್, ಮೂರಾರ್ಜಿ ದೇಸಾಯಿ, ಪ್ರಣಬ್ ಮುಖರ್ಜಿ, ಶರದ್ ಪವಾರ್ ಅಂತಹ ಹಿರಿಯ ನಾಯಕರ ಸ್ಥಿತಿ ಏನಾಗಿದೆ ನಮ್ಮೆಲ್ಲರಿಗೂ ತಿಳಿದಿದೆ. ಕಣ್ಣಲ್ಲಿ ಕಣ್ಣಿಟ್ಟು ಸವಾಲು ಹಾಕುವವವರ ಕಣ್ಣಸನ್ನೆ ಇಂದು ಇಡೀ ದೇಶವೇ ನೋಡಿದೆ ಎಂದು ತಿವಿದರು.

Aaj poora desh dekh raha tha TV pe aankhon ka khel, kaise aankhen kholi jaa rahi hain, kaise bandh ki jaa rahi hain: PM Modi in Lok Sabha pic.twitter.com/aZlsPGdIGa

— ANI (@ANI) July 20, 2018

ದೇಶದ ಜನರ ದುಃಖದಲ್ಲಿ ನಾನು ಭಾಗಿದಾರ: ಇಂದು ನಾನು ಯಾರನ್ನು ಬಿಡಲ್ಲ. ಎಲ್ಲರ ನಾಯಕರ ಲೆಕ್ಕವನ್ನು ಪೂರ್ಣ ಮಾಡುತ್ತೇನೆ, ಯಾರು ಭಯ ಪಡಬಾರದು ಎಂದು ಹೇಳುವ ಮೂಲಕ ಭಾಷಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಸಂಸದರ ವಿರುದ್ಧ ಗುಡುಗಿದರು. ರಾಹುಲ್ ಗಾಂಧಿ ನಾನು ದೇಶದ ಚೌಕಿದಾರ ಅಲ್ಲ, ಭಾಗಿದಾರ ಎಂದು ಹೇಳುತ್ತಾರೆ. ಹೌದು ನಾನು ಭಾಗಿದಾರ, ದೇಶದ ಜನರ ದುಃಖದಲ್ಲಿ ನಾನು ಭಾಗಿದಾರನಾಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಅನ್ನಿಸುತ್ತದೆ. ನಾನೇನು ನಿಮ್ಮ ಹಾಗೆ ಸೌಧಾಗಾರ(ದಲ್ಲಾಳಿ), ಟೋಕಿದಾರ ಅಲ್ಲ ಅಂತಾ ರಾಹುಲ್ ಗಾಂಧಿಯ ಕಾಲೆಳೆದರು.

ತನ್ನ ಲಾಭಕ್ಕಾಗಿ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡಿದೆ. ತನ್ನ ರಾಜಕೀಯಕ್ಕಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎಂದು ರಾಜ್ಯಗಳು ಒಡೆದಿದೆ. ಆದ್ರೆ ಈ ಕಾಂಗ್ರೆಸ್‍ಗೆ ಎರಡೂ ರಾಜ್ಯಗಳು ಸಿಗಲಿಲ್ಲ. ಈ ಹಿಂದೆ ಭಾರತದಿಂದ ಪಾಕಿಸ್ತಾನವನ್ನು ಇಬ್ಬಾಗ ಮಾಡಿದ್ದು ಕಾಂಗ್ರೆಸ್. ಅಂದಿನ ಕಾಂಗ್ರೆಸ್ ಒಡೆದು ಆಳಿದ ನೀತಿಯಿಂದಾಗಿ ಭಾರತ ಇಂದು ತೊಂದರೆ ಅನುಭವಿಸುತ್ತಿದೆ.

#WATCH PM Modi says, "In the morning, the voting was not over, the debate was also not over one member comes running to me saying- Utho Utho Utho..What is his hurry to come to power? Let me tell this member it is the people who elected us. That is how we have come here." pic.twitter.com/YslIwvitju

— ANI (@ANI) July 20, 2018

ಕೇಸಿನೇನಿ ಶ್ರೀನಿವಾಸ ವ್ಯಂಗ್ಯ: ಪ್ರಧಾನಿ ಮೋದಿ ಓರ್ವ ಅಧ್ಭುತ ಕಲಾವಿದ. ಒಂದೂವರೆ ಗಂಟೆಗಳ ಕಾಲ ನನಗೆ ಬಾಲಿವುಡ್‍ನ ಬ್ಲಾಕ್ ಬಸ್ಟರ್ ಸಿನಿಮಾ ನೋಡಿದಂತೆ ಆಯಿತು. ಪ್ರಧಾನಿ ಮೋದಿ 2014ರಲ್ಲಿಯೂ ಇಂತಹದ ದೊಡ್ಡ ನಾಟಕ ಮಾಡುವ ಮೂಲಕ ಜನರನ್ನು ಮೋಸಗಳಿಸಿದ್ದಾರೆ. ಆಂಧ್ರದ ಅವೈಜ್ಞಾನಿಕ ವಿಭಜನೆಗೂ ಬಿಜೆಪಿಯೇ ಕಾರಣವಾಗಿದೆ. ನಮಗೆ ಕೇವಲ ಭರವಸೆಗಳನ್ನು ನೀಡಿದ್ದು, ಆದ್ರೆ ಯಾವುದೇ ಈಡೇರಿಲ್ಲ. ಮೋದಿಯವರು ತೆಲುಗು ತಾಯಿಯನ್ನು ಕೊಂದು ವಿಭಜನೆ ಮಾಡಲಾಯಿತು ಅಂದ್ರು. ಆದ್ರೆ ಮೋದಿ ಆಂಧ್ರವನ್ನು ಕೈಮಾ ಮಾಡಿದ್ದಾರೆ. ಪ್ರಪಂಚದ ಅದ್ಭುತ ನಟ ಎಂದು ಮೋದಿಯವರಿಗೆ ಪ್ರಶಸ್ತಿ ನೀಡಬಹುದು ಎಂದು ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ ವ್ಯಂಗ್ಯಮಾಡಿದರರು.

I thought for one and a half hours I was watching a Bollywood blockbuster film. I have no doubt PM would have been the best actor in the world: TDP MP Kesineni Srinivas on PM's speech in Lok Sabha pic.twitter.com/naYWFdS1Qx

— ANI (@ANI) July 20, 2018

TAGGED:bjpcongresslok sabhamodiPublic TVRahul GandhiTDPಕಾಂಗ್ರೆಸ್ಟಿಡಿಪಿಪಬ್ಲಿಕ್ ಟಿವಿಬಿಜೆಪಿಮೋದಿರಾಹುಲ್ ಗಾಂಧಿಲೋಕಸಭೆ
Share This Article
Facebook Whatsapp Whatsapp Telegram

Cinema Updates

virat kohli sumalatha ambareesh
ಕಾಲ್ತುಳಿತ ಪ್ರಕರಣದಲ್ಲಿ ಕೊಹ್ಲಿ ವಿರುದ್ಧ ಮಾತನಾಡುವುದು ಮೂರ್ಖತನ: ಸುಮಲತಾ ಬೇಸರ
2 hours ago
madenur manu
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್
1 day ago
Akhil Akkineni Zainab Ravdjee
ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್
2 days ago
shivani swamy
‘ಸರಿಗಮಪ ಸೀಸನ್‌ 21’ರ ವಿನ್ನರ್‌ ಆದ ಬೀದರ್‌ ಪ್ರತಿಭೆ ಶಿವಾನಿ ಸ್ವಾಮಿ
2 days ago

You Might Also Like

siddaramaiah 6
Districts

ಏನು ತಪ್ಪು ಮಾಡಿದ್ದಾರೆ ಅಂತ ಕ್ರಮ ಕೈಗೊಳ್ಳಬೇಕು: ಸತ್ಯವತಿಗೆ ಕ್ಲೀನ್‌ಚಿಟ್‌ ಕೊಟ್ಟ ಸಿಎಂ

Public TV
By Public TV
10 minutes ago
Adampur airbase not battle damage
Latest

ಭಾರತದ ವಾಯುನೆಲೆಗಳನ್ನು ಹೊಡೆದಿದ್ದೇವೆ: ನಕಲಿ ಉಪಗ್ರಹ ಚಿತ್ರ, ದೃಶ್ಯ ಹಂಚಿಕೊಂಡು ಮತ್ತೆ ಬೆತ್ತಲಾದ ಪಾಕ್‌

Public TV
By Public TV
12 minutes ago
Siddaramaiah 4
Districts

ಪೊಲೀಸರದ್ದೇ ತಪ್ಪು, ಸರ್ಕಾರಕ್ಕೆ ಯಾಕೆ ಮುಜುಗರ ಆಗ್ಬೇಕು: ಸಿದ್ದರಾಮಯ್ಯ ಪ್ರಶ್ನೆ

Public TV
By Public TV
38 minutes ago
congress flag
Bengaluru City

ಪರಿಷತ್‌ಗೆ ಶಿಫಾರಸ್ಸಾಗಿದ್ದ 4 ಹೆಸರುಗಳಿಗೆ ಕೊನೆ ಕ್ಷಣದಲ್ಲಿ ಹೈಕಮಾಂಡ್‌ ಬ್ರೇಕ್‌!

Public TV
By Public TV
1 hour ago
Hindu activist suhas shetty brutally murdered in Bajpe Mangaluru 1
Dakshina Kannada

ಸುಹಾಸ್‌ ಶೆಟ್ಟಿ ಹತ್ಯೆ ಕೇಸ್‌ NIA ಹೆಗಲಿಗೆ

Public TV
By Public TV
2 hours ago
Prahlad Joshi 1
Dharwad

ಮೊದಲ ನಿಧನದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ, ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? – ಜೋಶಿ ಕಿಡಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?