ಶ್ರೀನಗರ: ಉಗ್ರವಾದದಿಂದಾಗಿ ಮುಚ್ಚಿದ ಶೀತಲ್ ನಾಥ್ ದೇವಾಲಯವಯವನ್ನು 31 ವರ್ಷಗಳ ನಂತರ ತೆರೆಯಲಾಗಿದೆ.
ಬಸಂತ ಪಂಚಮಿಯ ಶುಭ ಸಂದರ್ಭದಲ್ಲಿ ಶೀತಲ್ ನಾಥ್ ದೇವಾಲಯವನ್ನು ತೆರೆಯಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ದೇವಾಲಯದ ಆಡಳಿತಮಂಡಳಿ ಸದಸ್ಯರು ತಿಳಿಸಿದ್ದಾರೆ.
Jammu and Kashmir: Shital Nath temple in Habba Kadal area of Srinagar reopened after 31 years on the occasion of Basant Panchami yesterday.
“The temple was closed due to militancy and outmigration of Hindus. Today, we decided to offer puja here,” a devote said. pic.twitter.com/iLkdtRC3Qh
— ANI (@ANI) February 16, 2021
ಶ್ರೀನಗರದ ಹಬ್ಬಾ ಕಡಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಶೀತಲ್ ನಾಥ್ ದೇವಾಲಯವನ್ನು ಉಗ್ರವಾದದ ಹಿನ್ನೆಲೆಯಲ್ಲಿ ಕಳೆದ 31 ವರ್ಷಗಳಿಂದ ಮುಚ್ಚಲಾಗಿತ್ತು. ದೇವಾಲಯವನ್ನು ಮುಚ್ಚಿದ ಬಳಿಕ ಇಲ್ಲಿನ ನೆಲೆಸಿದ್ದ ಹಿಂದೂ ಸಮುದಾಯದವರು ವಲಸೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ದೇವಾಲಯವನ್ನು ತೆರೆಯಲು ಸ್ಥಳೀಯ ಮುಸ್ಲಿಂ ಸಮುದಾಯದವರಿಂದ ಬೆಂಬಲ ಹಾಗೂ ಅಗತ್ಯ ಸಹಕಾರ ದೊರೆತಿದೆ. ಮುಂದಿನದಿನಗಳಲ್ಲಿ ನಿತ್ಯ ಪೂಜೆ ಜರುಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾದ ಸಂತೋಷ್ ರಾಜಧನ್ ತಿಳಿಸಿದ್ದಾರೆ.