ಮೈಸೂರು: ತೆರೆದಿದ್ದ ನೀರಿನ ಸಂಪ್ಗೆ ಬಿದ್ದು ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶ್ರೇಯಸ್(3) ನೀರಿನ ಸಂಪ್ಗೆ ಬಿದ್ದು ಮೃತಪಟ್ಟ ಬಾಲಕ. ಶ್ರೇಯಸ್ ಮನೆಯ ಮುಂದಿದ್ದ ಸಂಪ್ಗೆ ಬಿದಿದ್ದಾನೆ. ಆದ್ರೆ ಪೋಷಕರು ಮಗು ಬಿದ್ದಿರುವುದು ತಿಳಿಯದೆ ಸಂಪ್ ಮುಚ್ಚಳ ಮುಚ್ಚಿದ್ದಾರೆ.
ಇತ್ತ ಮಗ ಕಾಣೆಯಾದ್ದನ್ನು ಮನಗಂಡ ಪೋಷಕರು ಬಾಲಕನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಅಂತಿಮವಾಗಿ ಸಂಪ್ ಮುಚ್ಚಳ ತೆರೆದು ನೋಡಿದಾಗ ಶ್ರೇಯಸ್ ಮೃತದೇಹ ಸಂಪ್ ನಲ್ಲಿ ಪತ್ತೆಯಾಗಿದೆ.
ಸದ್ಯ ಈ ಬಗ್ಗೆ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.